ದೆಹಲಿಗೆ ತಲುಪಿದ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ – Saaksha Tv
ನವದೆಹಲಿ: ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರುಕ್ಷಿತವಾಗಿ ಕರೆತರಲು ಆಪರೇಷನ್ ಗಂಗಾ ಶುರುವಾಗಿದ್ದು, ಇಂದು ಮತ್ತೆ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾರತಕ್ಕೆ ಬಂದಿಳಿದೆ.
ಈಶಾನ್ಯ ಉಕ್ರೇನಿಯನ್ ನಗರ ಸುಮಿಯಿಂದ ಪೋಲೆಂಡ್ಗೆ ಸ್ಥಳಾಂತರಿಸಲಾಗಿದ್ದ ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ವಿಮಾನವು ಇಂದು ಮುಂಜಾನೆ ದೆಹಲಿಗೆ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವು ಗುರುವಾರ ರಾತ್ರಿ 11.30 ರ (ಐಎಸ್ಟಿ) ಸುಮಾರಿಗೆ ಪೋಲೆಂಡ್ನ ರ್ಜೆಸ್ಜೋವ್ನಿಂದ ಹೊರಟು ಶುಕ್ರವಾರ ಬೆಳಗ್ಗೆ 5.45ಕ್ಕೆ ದೆಹಲಿಗೆ ಬಂದು ಇಳಿಯಿತು.
ಸುಮಿಯಿಂದ ಸ್ಥಳಾಂತರಿಸಲ್ಪಟ್ಟ 600 ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಭಾರತವು ಪೋಲೆಂಡ್ಗೆ ಮೂರು ವಿಮಾನಗಳನ್ನು ಕಳುಹಿಸಿದೆ. ಈಗಾಗಲೇ ಒಂದು ವಿಮಾನ ಬಂದಿದ್ದು, ಇನ್ನೊಂದು ವಿಮಾನವು ದೆಹಲಿಯಲ್ಲಿ ಬೆಳಿಗ್ಗೆ 8.40 ರ ಸುಮಾರಿಗೆ ಬಂದು ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆ ಜೊತೆ ವಿದ್ಯಾರ್ಥಿಗಳು ಹಂಚಿಕೊಂಡ ವಿವರಗಳ ಪ್ರಕಾರ, ವೈದ್ಯಕೀಯ ಶಿಕ್ಷಣದ ಮೊದಲ ವಿಮಾನವು ಮೊದಲ, ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಮೀಸಲಾಗಿತ್ತು. ಎರಡನೇ ವಿಮಾನವು ನಾಲ್ಕು ಮತ್ತು ಐದನೇ ವರ್ಷದ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಮತ್ತು ಮೂರನೆಯದು ಸಾಕುಪ್ರಾಣಿಗಳನ್ನು ಹೊಂದಿರುವವರಿಗೆ, ಐದನೇ ಮತ್ತು ಆರನೇ ವರ್ಷದ ವಿದ್ಯಾರ್ಥಿಗಳಿಗೆ ಮತ್ತು ಉಳಿದಿರುವ ಜನರಿಗಾಗಿ ಮೀಸಲಿಡಲಾಗಿತ್ತು ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ, ಈವರೆಗೆ ಉಕ್ರೇನ್ನಿಂದ 17,000ಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ.