ADVERTISEMENT
Tuesday, July 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಚೀನಾ ಸರ್ಕಾರದ ವಿರುದ್ಧ ಸಂಘರ್ಷ : ಕೋಟ್ಯಾಧಿಪತಿ ಜಾಕ್ ಮಾ ನಾಪತ್ತೆ..!

Namratha Rao by Namratha Rao
January 6, 2021
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಚೀನಾ ಸರ್ಕಾರದ ವಿರುದ್ಧ ಸಂಘರ್ಷ : ಕೋಟ್ಯಾಧಿಪತಿ ಜಾಕ್ ಮಾ ನಾಪತ್ತೆ..!

ಚೀನಾ: ಚೀನಾ ಸರ್ಕಾರದ ವಿರುದ್ಧ ಮಾತನಾಡುವವರಿಗೆ ಉಳಿಗಾಲವಿಲ್ಲ. ಯಾರು ಚೀನಾ ಸರ್ಕಾರದ ನಡೆಯನ್ನ ಪ್ರಶ್ನಿಸಸುತ್ತಾರೋ, ಚೀನಾ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಾರೋ ಅವರು ಎಂಥ ದೊಡ್ಡ ಕುಳಗಳೇ ಆದ್ರು ಅವರನ್ನ ಕಣ್ಮರೆ ಮಾಡಿಸಿಬಿಡುತ್ತೆ ಚೀನಾ ಸರ್ಕಾರ.  ಸದ್ಯ ಚೀನಾ ವಿರುದ್ಧ ಸಂಘರ್ಷ ಶುರು ಮಾಡಿದ್ದ ಚೀನಾ ಕೋಟ್ಯಾಧಿಪತಿ ಅಲಿಬಾಬಾ ಗ್ರೂಪ್‌ ನ ಸ್ಥಾಪಕ, ಉದ್ಯಮಿ ಜಾಕ್‌ ಮಾ ನನ್ನೂ ನಾಪತ್ತೆ ಮಾಡಿಸಿದೆ ಅನ್ನೋ ಚರ್ಚೆ ಇದೀಗ ವಿಶ್ವಾದ್ಯಂತ ಆರಂಭವಾಗಿದೆ. ಹೌದು 2 ತಿಂಗಳಿನಿಂದ ಜಾಕ್ ಮಾ ನಾಪತ್ತೆಯಾಗಿದ್ದಾರೆ. ಆದ್ರೆ ಎಲ್ಲಿದ್ದಾರೆ, ಏನ್ ಮಾಡ್ತಾಯಿದ್ದಾರೆ… ಯಾವ ಪರಿಸ್ಥಿತಿಯಲಿದ್ದಾರೆ ಅನ್ನೋ ಒಂದು ಸಣ್ಣ ಕ್ಲೂ ಕೂಡ ಸಿಕ್ಕಿಲ್ಲ…

Related posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

July 7, 2026
ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

July 7, 2026

ಚೀನಾ ಸರ್ಕಾರದ ಕಣ್ಗಾವಲಿನಲ್ಲಿದ್ದ ಜಾಕ್‌ ಮಾ ಅವರು ಅಚ್ಚರಿಯೆಂಬಂತೆ ಕಳೆದೆರಡು ತಿಂಗಳಿಂದ ನಾಪತ್ತೆಯಾಗಿದ್ದಾರೆ. ನವೆಂಬರ್‌ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಆಫ್ರಿಕಾಸ್‌ ಬ್ಯುಸಿನೆಸ್‌ ಹೀರೋಸ್‌ ಟ್ಯಾಲೆಂಟ್‌ ಶೋನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳಬೇಕಿದ್ದ ಅವರು, ಅಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ವಿಶೇಷವೆಂದರೆ, ಈ ಕಾರ್ಯಕ್ರಮದ ವೆಬ್‌ ಸೈಟ್‌ನಿಂದಲೂ ಅವರ ಫೋಟೋ ತೆಗೆದು ಹಾಕಲಾಗಿತ್ತು. ಒಟ್ಟಿನಲ್ಲಿ ಜಾಕ್‌ ನಿಗೂಢವಾಗಿ ಕಣ್ಮರೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಲಂಚ ತೆಗೆದುಕೊಂಡ ಅಧಿಕಾರಿಗೆ ಗಲ್ಲು ಶಿಕ್ಷೆ : ಎಲ್ಲಿ ಗೊತ್ತಾ..?

ಜಾಕ್‌ ಮಾ ಮತ್ತು ಚೀನಾ ಆಡಳಿತದ ನಡುವೆ ಹಗ್ಗಜಗ್ಗಾಟ ಶುರುವಾಗಿದ್ದು 2020ರ ಅಕ್ಟೋಬರ್‌ ನಲ್ಲಿ, ಶಾಂಘೈನ ಕಾರ್ಯಕ್ರಮದಲ್ಲಿ ಜಾಕ್‌ ಅವರು ಚೀನಾ ಸರ್ಕಾರ, ಅದರ ನಿಯಂತ್ರಣ ಸಂಸ್ಥೆಗಳು, ಬ್ಯಾಂಕುಗಳ ವಿರುದ್ಧ ಹರಿಹಾಯ್ದಿದ್ದರು. ಚೀನಾದ ಬ್ಯಾಂಕುಗಳನ್ನು ಗಿರವಿ ಅಂಗಡಿಗಳಿಗೆ ಹೋಲಿಸಿದ್ದರು. ಇದರ ಬೆನ್ನಲ್ಲೇ ಅವರ ಆಯಂಟ್‌ ಗ್ರೂಪ್‌ನ 2.70 ಲಕ್ಷ ಕೋಟಿ ರೂ. ಮೌಲ್ಯದ ಸಾರ್ವಜನಿಕ ಷೇರು ಬಿಡುಗಡೆಯನ್ನೇ ಚೀನಾದ ಅಧಿಕಾರಿಗಳು ತಡೆಹಿಡಿದಿದ್ದರು. ಡಿಸೆಂಬರ್‌ನಲ್ಲಿ ಜಾಕ್‌ 80,300 ಕೋಟಿ ರೂ. ಕಳೆದುಕೊಂಡರು.

ಅಲಿಬಾಬಾ ಮಾರುಕಟ್ಟೆ ಮೌಲ್ಯ ಶೇ.17 ಪತನಗೊಂಡಿತು. ಅಲಿಬಾಬಾ “ಏಕಸ್ವಾಮ್ಯದ ಚಟುವಟಿಕೆ’ ನಡೆಸುತ್ತಿದೆ ಎಂಬ ಆರೋಪ ದಲ್ಲಿ ಜಾಕ್‌ ವಿರುದ್ಧ ತನಿಖೆಗೂ ಆದೇಶಿಸಲಾಯಿತು. ಒಂದಾದ ಮೇಲೆ ಒಂದರಂತೆ ಬಂದ ಸಂಕಷ್ಟಗಳು, ಚೀನಾ ಸರ್ಕಾರದ ದ್ವೇಷ ಸಾಧನೆಯ ನಡುವೆಯೇ ಜಾಕ್‌ ಮಾ ಕಣ್ಮರೆಯಾಗಿದ್ದಾರೆ ಎಂಬ ಅನುಮಾನಗಳು ಮೂಡಿವೆ.

ಮಿಲಿಟರಿ ಬೇಸ್ ಆಸ್ಪತ್ರೆಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ

ಇನ್ನೂ ಜಾಕ್ ಮಾ ಕಳೆದ ವರ್ಷದ ಅಕ್ಟೋಬರ್‌ 10ರಂದು ಹವಾಮಾನ ವೈಪರೀತ್ಯದ ಸವಾಲು ಎದುರಿಸುವಂಥ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದು ಹೇಳಿ ಟ್ವೀಟ್‌ ಮಾಡಿದ್ದರು. ಇದು ಅವರ ಕೊನೆಯ ಟ್ವೀಟ್ ಆಗಿತ್ತು.  ಇದೀಗ ಟ್ವಿಟರ್‌ನಲ್ಲಿ ಜಾಕ್‌ ಮಾ ಮತ್ತು ಅಲಿಬಾಬಾ ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡಿಂಗ್‌ ಆಗಿವೆ.

 ಜಾಕ್ ಮಾ ಚೀನಾ ಸರ್ಕಾರವನ್ನು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಟೀಕಿಸುವ ಮೂಲಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಜಾಕ್ ಮಾ ಒಡೆತನದ ಅಲಿಬಾಬಾ ಮತ್ತು ಇತರ ಕಂಪನಿಗಳ ಮೇಲೆ ಚೀನಾ ಸರ್ಕಾರವು ಇತ್ತೀಚೆಗೆ ಹಲವು ನಿರ್ಬಂಧಗಳನ್ನೂ ವಿಧಿಸಿತ್ತು. ವಾರ್ಷಿಕ ನೂರಾರು ಕೋಟಿ ಡಾಲರ್ ವ್ಯವಹಾರ ನಡೆಸುತ್ತಿರುವ ಜಾಕ್ ಮಾ ಒಡೆತನದ ಕಂಪನಿಗಳು ಅನೇಕ ಕ್ಷೇತ್ರಗಳಿಗೆ ಉದ್ಯಮವನ್ನು ವಿಸ್ತರಿಸಿಕೊಂಡಿವೆ. ಭಾರತದಲ್ಲಿ ಪೇಟಿಎಂ, ಪೇಟಿಎಂ ಮಾಲ್, ಜೊಮಾಟೊ, ಬಿಗ್‌ ಬಾಸ್ಕೆಟ್‌ ಹಾಗೂ ಇ-ಕಾಮರ್ಸ್ ಕಂಪನಿ ಸ್ನ್ಯಾಪ್‌ಡೀಲ್‌ನಲ್ಲಿ ಅಲಿಬಾಬಾ ಹೂಡಿಕೆ ಮಾಡಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಲಿಬಾಬಾ ಗ್ರೂಪ್‌ ವಿರುದ್ಧ ಚೀನಾ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಸಾಲ ಮತ್ತು ಗ್ರಾಹಕ ಹಣಕಾಸು ಕಾರ್ಯಾಚರಣೆಯನ್ನು ಮರುರೂಪಿಸುವಂತೆ ಚೀನಾದ ಕೇಂದ್ರ ಬ್ಯಾಂಕ್ ಕಂಪನಿಗೆ ಸೂಚಿಸಿತ್ತು.

ಒಟ್ಟಾರೆ ಚೀನಾದ ಕೋಟ್ಯಾಧೀಶ್ವರ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ನಿಗೂಢವಾಗಿ ನಾಪತ್ತೆಯಾಗಿರೋದರ ಹಿಂದೆ ಚೀನಾ ಸರ್ಕಾರದ ಕೈವಾಡವಿದೆ ಎಂಬ ಅನುಮಾನುಗಳು ಬಲವಾಗಿವೆ. ಜಾಕ್ ಮಾ ಎಲ್ಲಿದ್ದಾರೆ. ಹೇಗಿದ್ದಾರೆ ಎಂಬ ಗೊಂದಲಗಳಿವೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: alibabachainaJack Ma
ShareTweetSendShare
Join us on:

Related Posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

by Shwetha
July 7, 2026
0

ಯದುವೀರ್ ಒಡೆಯರ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ವೇಳೆ ಕಂಬಳ ಆಯೋಜಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಕಂಬಳವು ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿ,...

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

by Shwetha
July 7, 2026
0

ಪಾಕಿಸ್ತಾನದ ಅಧಿಕಾರಿಗಳೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಈ...

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

by Shwetha
July 7, 2026
0

ವಿವಿಧ ಕಾರಣಗಳಿಂದ BPL ಪಡಿತರ ಚೀಟಿ ಕಳೆದುಕೊಂಡಿದ್ದ 4 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ರಾಜ್ಯ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ. ಅನರ್ಹರೆಂದು ಪರಿಗಣಿಸಿ APL ಕಾರ್ಡ್‌ಗಳಾಗಿ...

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

by Shwetha
July 7, 2026
0

ಮೈಸೂರಿನ ಮುಡಾ ನಿವೇಶನ ಹಂಚಿಕೆ ಹಗರಣದ ಕಿಚ್ಚು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರಿಗೂ ತಟ್ಟಿದೆ. ಮೈಸೂರು ನಗರಾಭಿವೃದ್ಧಿ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ರಾಮಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
July 7, 2026
0

ಪ್ರಿಯಾಂಕ್ ಖರ್ಗೆ ಅವರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram