ಮೇಘಸ್ಪೋಟದಲ್ಲಿ 16 ಮಂದಿ ಯಾತ್ರಾರ್ಥಿಗಳು ಬಲಿಯಾದ ಹಿನ್ನೆಲೆ 2 ದಿನಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇದೀಗ ಮತ್ತೆ ಪುನರಾರಂಭಗೊಂಡಿದೆ..
ಸೋಮವಾರ ( ಜುಲೈ 11) ಬೆಳಗ್ಗೆಯಿಂದ ಅಮರನಾಥ ಯಾತ್ರೆಯನ್ನು ಪುನರಾರಂಭಿಸಲಾಗಿದೆ. ಸಾವಿರಾರು ಯಾತ್ರಿಕರು ಪವಿತ್ರ ದೇಗುಲಕ್ಕೆ ತಮ್ಮ ಪ್ರಯಾಣವನ್ನು ಪುನರಾರಂಭಿಸಿದ್ದಾರೆ..
ಅಧಿಕಾರಿಗಳ ಪ್ರಕಾರ, ಮೂಲ ಶಿಬಿರದಿಂದ ಚಂದನ್ವಾರಿಯ ಕಡೆಗೆ ಸುಮಾರು 2,000 ರಿಂದ 3,000 ಯಾತ್ರಾರ್ಥಿಗಳಿಗೆ ತೆರಳಲು ಅನುಮತಿಸಲಾಗಿದೆ. “ಪಹಲ್ಗಾಮ್ನ ನುನ್ವಾನ್ ಬೇಸ್ ಕ್ಯಾಂಪ್ನಿಂದ ಪವಿತ್ರ ಗುಹೆಯ ಕಡೆಗೆ ಹೋಗಲು ಹೊಸ ಬ್ಯಾಚ್ ಯಾತ್ರಿಗಳಿಗೆ ಅವಕಾಶ ನೀಡಲಾಗಿದೆ.
ಅಮರನಾಥ ಪವಿತ್ರ ಗುಹೆಯ ಬಳಿ ಮೇಘಸ್ಫೋಟ ಸಂಭವಿಸಿದ ನಂತರ ಕಳೆದ ಎರಡು ದಿನಗಳಿಂದ ಯಾತ್ರೆಯನ್ನು ನಿಲ್ಲಿಸಲಾಗಿತ್ತು..
ಕೋವಿಡ್ ನಿಂದಾಗಿ 2 ವರ್ಷಗಳ ನಂತರ ಅಮರನಾಥಯಾತ್ರೆ ಆರಂಭಗೊಂಡಿದ್ದು , ಮೊದಲ ಬ್ಯಾಚ್ ನಲ್ಲಿ ಭಕ್ತಾದಿಗಳು ಜೂನ್ 30 ರಂದು ಹೊರಟಿದ್ದರು.. ಮಾರ್ಗ ಮಧ್ಯದಲ್ಲೇ ಮೇಘಸ್ಪೋಟವಾಗಿ ದುರಂತ ಸಂಭವಿಸಿತ್ತು..
ಬಾಲ್ಟಾಲ್ ಮಾರ್ಗ ಮತ್ತು ಪಹಲ್ಗಾಮ್ ಮಾರ್ಗದ ಮೂಲಕ ಯಾತ್ರೆ ನಡೆಯುತ್ತಿದೆ.. ಶುಕ್ರವಾರ ಸಂಜೆ, ಐಕಾನಿಕ್ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದ್ದರಿಂದ ಭಾರಿ ದುರಂತವು ಸಂಭವಿಸಿತ್ತು.. ಇದು ಹಠಾತ್ ಪ್ರವಾಹ, ಅವ್ಯವಸ್ಥೆ ಮತ್ತು ಗೊಂದಲವನ್ನು ಉಂಟುಮಾಡಿತು.
ಸಶಸ್ತ್ರ ಪಡೆಗಳು, ವಿಪತ್ತು ಪ್ರತಿಕ್ರಿಯೆ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಾತ್ರಿಯಿಡೀ ಬೃಹತ್ ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿದ್ದರು. ಸಾವಿರಾರು ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಲ್ಲಿ ಇರಿಸಲಾಗಿತ್ತು..