ಜೈ ಮಹಾರಾಷ್ಟ್ರ ಕೂಗಬೇಡಿ ಎಂದಿದ್ದಕ್ಕೆ ಉದ್ಯಮಿ ಮೇಲೆ ನಾಡದ್ರೋಹಿ ಎಂಇಎಸ್ ದರ್ಪ ಮೆರೆದಿರುವ ಘಟನೆ ಬೆಳಗಾವಿಯ ಆನಂದವಾಡಿ ಕುಸ್ತಿ ಮೈದಾನದಲ್ಲಿ ನಡೆದಿದೆ.
ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ನೇಪಾಳ ಕುಸ್ತಿಪಟುವೊಬ್ಬಾತ ಜೈ ಛತ್ರಪತಿ ಶಿವಾಜಿ, ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಉದ್ಯಮಿ ಶ್ರೀಕಾಂತ್ ದೇಸಾಯಿ ಮೈಕ್ ಕಸಿದುಕೊಂಡಿದ್ದಾರೆ. ಒಂದೇ ನಾಡಿನ ಮಕ್ಕಳು ನಾವು, ಸೋದರರಂತೆ ಇರಬೇಕು ಎಂದು ಕುಸ್ತಿಪಟುವಿಗೆ ಕಿವಿ ಮಾತು ಹೇಳಿ ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಎಂದು ಕೂಗಿ ಸಮಸ್ಯೆ ಉದ್ಭವಿಸಬೇಕು ಎಂದು ಕೂಡ ಹೇಳಿದ್ದಾರೆ. ಪಂದ್ಯ ಮುಗಿದ ನಂತರ ಉದ್ಯಮಿ ಮೇಲೆ ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿ, ಮಹಾರಾಷ್ಟ್ರ ಪರ ಘೋಷಣೆ ಕೂಗದ ನಿಮ್ಮಂತವರನ್ನೇ ಹೊರಗೆ ಹಾಕಬೇಕು ಎಂದು ನಾಡದ್ರೋಹ ಮೆರೆದಿದ್ದಾರೆ ಎನ್ನಲಾಗಿದೆ.