Karwar: 50 ವರ್ಷಗಳಲ್ಲಿ ಜಿಲ್ಲೆಯ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ – ಅನಂತ್ ಕುಮಾರ್ ಹೆಗಡೆ
ಕಾರವಾರ : ಇನ್ನು 50 ವರ್ಷಗಳಲ್ಲಿ ಜಿಲ್ಲೆಯ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದಾರೆ..
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಜನರನ್ನುದ್ದೇಶಿಸಿ ಭಾಷಣ ಮಾಡಿರುವ ಅವರು 3-4 ವರ್ಷದಲ್ಲಿ ಜಿಲ್ಲೆಯಲ್ಲಿ ಫ್ಲೋಟಿಂಗ್ ಪಾಪ್ಯುಲೇಶನ್ ಹೆಚ್ಚಾಗಲಿದೆ. ಹೊರಗಿನಿಂದ 4 ರಿಂದ 5 ಲಕ್ಷ ಜನರು ಜಿಲ್ಲೆಯಲ್ಲಿ ನೆಲೆಸಲಿದ್ದಾರೆ. ಇದನ್ನು ನಮ್ಮವರು ಬಳಸಿಕೊಳ್ಳದಿದ್ದರೆ ಹೊರಗಿನವರು ಶಾಸಕರು, ಸಂಸದರಾಗುತ್ತಾರೆ.
ananth kumar hegde speech in uttarakannada honnavali
ನೌಕಾನೆಲೆಯಲ್ಲಿ ಈಗಾಗಲೇ ಲಕ್ಷಾಂತರ ಮಂದಿ ಹೊರಗಿನವರಿದ್ದಾರೆ. ಅವರಿಗೆ ಮತದಾನದ ಹಕ್ಕು ದೊರೆತರೆ ಜಾತಿ ಲೆಕ್ಕಾಚಾರ ತಲೆಕೆಳಗಾಗಲಿದೆ. ಈ ಜಿಲ್ಲೆಯ ಅಭಿವೃದ್ಧಿ ನಮ್ಮವರಿಂದ, ನಮ್ಮರಿಗೇ ಆಗಬೇಕು. ಇದಕ್ಕೆ ಯಾರು ವಿರೋಧಿಸಿದರೂ ಸಹ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ.. ಅಲ್ಲದೇ ಇನ್ನೆರಡು ವರ್ಷದಲ್ಲಿ ಅಂದುಕೊಂಡ ಅಭಿವೃದ್ಧಿಯನ್ನ ಮಾಡಿಯೇ ಸಿದ್ಧ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ..