ADVERTISEMENT
Monday, July 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಿರಿಬಾಗಿಲು ಪ್ರತಿಷ್ಠಾನ ಮತ್ತೊಂದು ಕೊಡುಗೆ “ಪಲಾಂಡು ಚರಿತ್ರೆ” ವಿಶಿಷ್ಟ ಯಕ್ಷಗಾನ ಪ್ರಸಂಗ

admin by admin
August 24, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸಿರಿಬಾಗಿಲು ವೆಂಕಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಜತೆ, ಕೊರೊನಾ ಯಕ್ಷ ಜಾಗೃತಿ ಮೂಲಕ ಜಾಗತಿಕ ಮಟ್ಟದಲ್ಲಿ ಕೊವಿಡ್ 19 ರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅದರ ಜತೆ ಇಂದಿನ ವಿದ್ಯಾಮಾನಕ್ಕೆ ಸರಿಹೊಂದುವ ರೀತಿ ಅಂದಾಜು 100 ವರ್ಷಗಳ ಹಳೆಯ ಪ್ರಸಂಗ ಕೆರೋಡಿ ಸಬ್ಬರಾವ್ ವಿರಚಿತ ಪಲಾಂಡು ಚರಿತ್ರೆ ಯಕ್ಷಗಾನವನ್ನು ಸಾಮಾಜಿಕ ಜಾಲತಾಣ ದಲ್ಲಿ ( YouTube SV Vision) ಪ್ರಸಾರ ಪಡಿಸಿದೆ.

“ಪಲಾಂಡು ಚರಿತ್ರೆ” ಎಂಬ ವಿಶೇಷ ಅಸಾಮಾನ್ಯ ಪ್ರಸಂಗದ ಕುರಿತು:

Related posts

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

July 6, 2026
ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

July 6, 2026

(ಕಂದಮೂಲ ಗಳಿಗೂ, ಶಾಖಾಹಾರಿಗಳಿಗೆ) ಸಸ್ಯ ಮೂಲ ತರಕಾರಿ ಮತ್ತು ಹಣ್ಣುಗಳಿಗೂ ತಮ್ಮಲ್ಲಿ ಯಾರು ಶ್ರೇಷ್ಠರೆಂಬ ಕುರಿತು ಉಂಟಾದ ವಾದ-ವಿವಾದ- ಕಾದಾಟ ಕೊನೆಗೆ ತೀರ್ಮಾನಕ್ಕೆ ಶ್ರೀಕೃಷ್ಣನಲ್ಲಿ ಮೊರೆ ಇಡಲಾಗುತ್ತದೆ. ಇತ್ತಂಡದವರಿಗೂ ಮೂರು ದಿನಗಳ ಅವಧಿ ಕೊಟ್ಟು ಅಭಿವೃದ್ಧಿ ಪಥದಲ್ಲಿದ್ದ ಕಂದಮೂಲಗಳು ಶ್ರೇಷ್ಠವೆಂದು ಪ್ರತಿಯೊಂದರ ವೈಶಿಷ್ಟ್ಯ ತಿಳುಹಿ, ಭೂಮಿಯಲ್ಲಿ ಬೇರು ಬಿಟ್ಟು ಕಷ್ಟ ಸಹಿಷ್ಣು ಗಳಾಗಿ ಗಟ್ಟಿಯಾಗಿ ಪರಿಸ್ಥಿತಿಗೆ ಹೊಂದಿ ಧೃತಿಗೆಡದೆ ಬಾಳುವುದೇ ನಿಜವಾದ ಬದುಕು. ಕೃಷಿ ಸಂಬಂಧಿತ ಯಾವ ಫಲ ಕಂದಮೂಲಗಳನ್ನು ಮನುಷ್ಯರು ಶರೀರದ ರೋಗನಿರೋಧಕ- ಪೌಷ್ಟಿಕಾಂಶ ಕ್ಕಾಗಿ ಹೇಗೆ- ಯಾವಾಗ ಬಳಸಬೇಕು – ಯಾವುದನ್ನು ಬಳಸಬಾರದು ಎಂಬ ಪ್ರಮುಖ ಸಂದೇಶ ಸಾರುವುದು ಈ ಪ್ರಸಂಗದ ಧ್ವನಿ.

ಪಲಾಂಡು ಚರಿತ್ರೆ, ಕೇವಲ ಪೌರಾಣಿಕ ಅಥವಾ ಕಾಲ್ಪನಿಕ ಕಥೆಗಳಿವೆ ಸೀಮಿತವಾಗಿದ್ದ ಯಕ್ಷಗಾನದ ವಸ್ತು ವಲಯವನ್ನು ವಿಸ್ತರಿಸಿ, ಸಾಮಾಜಿಕ ಹಾಗು ಸಮಕಾಲೀನ ಸಮಸ್ಯೆಗಳನ್ನು ಯಕ್ಷಗಾನೀಯವಾಗಿ ನಿರೂಪಿಸುವ ಮಾರ್ಗವನ್ನು ತೆರೆದು ತೋರಿದ ಶ್ರೇಯಸ್ಸು ಅದಕ್ಕಿದೆ. ಅದರ ಮಾದರಿಯನ್ನು ಅನುಸರಿಸಿ ಯಕ್ಷಗಾನೀಯ ಕವಿಗಳು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಇಂತಹ ಕೃತಿಯನ್ನು ಈ ಕಾಲಕ್ಕೆ ತಕ್ಕಂತೆ ಪ್ರದರ್ಶಿಸಲು ಸಿರಿಬಾಗಿಲು ಪ್ರತಿಷ್ಠಾನವು ನೇತೃತ್ವ ವಹಿಸಿರುವುದು ಗಮನಿಸಬೇಕಾದ ಸಂಗತಿ.

ಕೊರೋನಾ ದಿಗ್ಬಂಧನದ ವೇಳೆಯಲ್ಲಿ ಯಕ್ಷಗಾನ ಪ್ರದರ್ಶನವಿಲ್ಲದೆ ನಿರುತ್ಸಾಹದಿಂದಿರುವ ಕಲಾವಿದರಿಗೆ
ಇಂತಹ ಪ್ರದರ್ಶನಗಳು ಅನುಕೂಲವಾಗಲಿದೆ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಾರುವ ಇಂತಹ ಪ್ರಸಂಗಗಳು ಯಕ್ಷಗಾನ ಕಲಾಪ್ರೇಮಿಗಳು ಆಸ್ವಾದಿಸಲು-ಸಮಾಜ ಜಾಗೃತಿ ವಹಿಸಲು ಅನುಕೂಲವಾಗಲಿ, ಯಕ್ಷಗಾನ ಬೆಳಗಿ ಬರಲಿ ಎನ್ನುವುದು ಆಯೋಜಕರ ಅಂಬೋಣ.

“ಯಕ್ಷಗಾನ ಕಲೆಯನ್ನು ಸರ್ವಸ್ವವಾಗಿರಿಸುವ ಕಲಾವಿದರುಗಳಾದ ನಾವುಗಳು ಸಮಾಜಕ್ಕೆ ನಮ್ಮಿಂದ ಕಲೆಯ ಮೂಲಕವೇ ಏನಾದರೂ ಸಂದೇಶ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊಡಬೇಕೆಂಬುದು ನಮ್ಮ ಪ್ರಧಾನ ಉದ್ದೇಶ. ಈ ಹಿಂದೆ ಕೋವಿಡ್ 19 ರ ಬಗ್ಗೆ ಹಲವಾರು ಜಾಗೃತಿ ಯಕ್ಷಗಾನ , ಬೊಂಬೆಯಾಟ ನಡೆಸಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಅಭಿಯಾನದಲ್ಲಿ ಪ್ರಧಾನ ಪಾತ್ರ ವಹಿಸಿದ್ದೇವೆ. ನೂರು ವರ್ಷಗಳ ಹಿಂದೆ ಕೆರೊಡಿ ಸುಬ್ಬರಾವ್ ರಚಿಸಿದ ಪಾಲಾಂಡು ಚರಿತ್ರೆ ಪ್ರಸಂಗದ ವಿಶೇಷತೆಯನ್ನು ಗಮನಿಸಿ, ಇಂದಿನ ಈ ಪರಿಸ್ಥಿತಿಗೆ ಹೊಂದುವಂತೆ ದಾಖಲಿಸಿ, ದೃಶ್ಯ ಮಾಧ್ಯಮದ ಮೂಲಕ ಪ್ರಸಾರ ಪಡಿಸುತ್ತಿದ್ದೇವೆ. ಯಕ್ಷಗಾನ ಕಲಾಪ್ರೇಮಿಗಳು ಇದನ್ನು ಆಸ್ವಾದಿಸಲಿ, ಆ ಮೂಲಕ ಯಕ್ಷಗಾನ ಕಲೆ ಬೆಳೆದು ಬರಲಿ ಇದು ನಮ್ಮ ಉದ್ದೇಶ” ಎಂದು ಸಿರಿಬಾಗಿಲು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ತಿಳಿಸಿದರು.

ಈ ಪಾಲಾಂಡು ಚರಿತ್ರೆಯ ಕವಿ ಸಾಹಿತಿ ಕೆರೋಡಿ ಸುಬ್ಬರಾವ್ ರವರು ಪತ್ರಿಕೋದ್ಯಮಿ -ನಾಟಕ-ಕಾವ್ಯ-ಯಕ್ಷಗಾನ- ಲಲಿತ ಪ್ರಬಂಧ- ಭಾಷಾಂತರ ಎಲ್ಲಾ ಪ್ರಾಕಾರಗಳಲ್ಲೂ ವಿಫುಲ ಸಾಹಿತ್ಯ ರಚಿಸಿದ, ನಿಜ ಜೀವನದಲ್ಲಿ ಪ್ರಯೋಗಶೀಲ ಕೃಷಿಕರಾಗಿದ್ದರು.
ಇನ್ನು ಈ ಪ್ರಸಂಗದ ಚಿತ್ರೀಕರಣಕ್ಕೆ ಪ್ರಾಯೋಜಕತ್ವ ನೀಡಿದವರು ಹೈದ್ರಾಬಾದ್ ನ ಕನ್ನಡ ನಾಟ್ಯ ರಂಗದವರು. ಈ ಕನ್ನಡ ನಾಟ್ಯ ರಂಗವು ಹೊರನಾಡಿನ ಪ್ರಮುಖ ಕನ್ನಡ ಸಂಘಗಳಲ್ಲೊಂದು. 52 ವರ್ಷಗಳ ತನ್ನ ಭವ್ಯ ಇತಿಹಾಸದಲ್ಲಿ 100 ಯಕ್ಷಗಾನ ಸೇರಿ, 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕನ್ನಡ- ಸಂಸ್ಕೃತಿಯ ಪರಂಪರೆಯನ್ನು ಜೀವಂತವಾಗಿಡಲು ಶ್ರಮಿಸುತ್ತಾ ಬಂದಿರುವ ಸಂಸ್ಥೆಯ ಸ್ಥಾಪಕರು ಕೆರೋಡಿ ಗುಂಡೂರಾಯರು( ಸುಬ್ಬರಾಯರ ಮೊಮ್ಮಗ). ಪ್ರಸ್ತುತ ಉದ್ಯಮಿ, ಕಲಾ ಪೋಷಕರಾದ ,ಮಾರಣಕಟ್ಟೆ ಕೃಷ್ಣಮೂರ್ತಿಯವರು ಅಧ್ಯಕ್ಷರಾಗಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದೊಂದಿಗೆ, ಆಸಕ್ತರಿಗೆ ತರಬೇತಿ ನಡೆಸಿ, ತೆಲಂಗಾಣದಲ್ಲಿ ಪ್ರಥಮ ಬಾರಿಗೆ ಎಂಬ ಯಕ್ಷ- ನಾಟ್ಯ -ರಂಗ ವೆಂಬ ತಂಡವನ್ನು ಕಟ್ಟಿ, ಕುಶ-ಲವ ಆಖ್ಯಾನವನ್ನು ಪ್ರದರ್ಶಿಸಿದೆ.

ಕನ್ನಡ ನಾಟ್ಯ ರಂಗದ ನಿರಂಜನ ರಾವ್ ಅವರ ಅಪೇಕ್ಷೆಯಂತೆ ,ರಂಗವೂ ಈ ಸಂದಿಗ್ಧ ಕಾಲಘಟ್ಟದಲ್ಲಿ ಕಲಾವಿದರಿಗೆ ಸಹಕಾರಿಯಾಗುವ ದೃಷ್ಟಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿ ಸಹಕರಿಸಿದೆ.

ಪಲಾಂಡು ಚರಿತ್ರೆಯಲ್ಲಿ ವಾಸುದೇವ ರಂಗಭಟ್ ಮಧೂರು -ಶ್ರೀಕೃಷ್ಣನಾಗಿ ,ರಾಧಾಕೃಷ್ಣ ನಾವಡ ಮಧೂರು- ಚೂತ ಫಲವಾಗಿ ,ಜಯಪ್ರಕಾಶ್ ಶೆಟ್ಟಿ ಪರ್ಮುದೆ- ಪಲಾಂಡುವಾಗಿ ,ಮವ್ವಾರು ಬಾಲಕೃಷ್ಣ ಮಣಿಯಾಣಿ, ಹರೀಶ ಶೆಟ್ಟಿ ಮಣ್ಣಾಪು , ಮಾಧವ ಪಾಟಾಳಿ, ಪ್ರಕಾಶ್ ನಾಯಕ್, ಬಾಲಕೃಷ್ಣ ಸೀತಾಂಗೋಳಿ ,ಶಿವರಾಜ ಪೆರ್ಲ, ಶಿವಾನಂದ ಪೆರ್ಲ, ಕಿಶನ್, ಉಪಾಸನಾ, ಸ್ವಸ್ತಿಕ್, ಶ್ರೀಗಿರಿ ಮೊದಲಾದವರು ಪಾತ್ರ ನಿರ್ವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ -ರಾಮಕೃಷ್ಣ ಮಯ್ಯ ಸಿರಿಬಾಗಿಲು, ತಲ್ಪಣಾಜೆ ವೆಂಕಟ್ರಮಣ ಭಟ್, ಚೆಂಡೆ- ಮದ್ದಳೆಯಲ್ಲಿ ಲಕ್ಷ್ಮೀನಾರಾಯಣ ರಾವ್ ಅಡೂರು, ಲಕ್ಷ್ಮೀಶ ಬೆಂಗ್ರೊಡಿ ಭಾಗವಹಿಸಿದರು. ಬ್ರಹ್ಮಶ್ರೀ ಗಣಾದಿರಾಜ ತಂತ್ರಿ ಕೊಲ್ಲಂಗಾನ ಇವರು ವೇಷಭೂಷಣಗಳನ್ನಿತ್ತು ಸಹಕಸಿದರು. ಉದಯ ಕಂಬಾರ್ ವರ್ಣಾ ಸ್ಟುಡಿಯೋ ನೀರ್ಚಾಲು, ಹಾಗೂ ಶ್ರೀವತ್ಸ ಕುಂಚಿನಡ್ಕ ಇವರು ಚಿತ್ರೀಕರಿಸಿದರು.ಕೊಲ್ಲಂಗಾನ ಶ್ರೀನಿಲಯದಲ್ಲಿ ಚಿತ್ರೀಕರಣ ನಡೆಸಲಾಯಿತು.

-ಮಾಹಿತಿ ಮತ್ತು ನಿರೂಪಣೆ:- ಅಂಬಿಕಾ ಸೀತೂರು ಹಾಗೂ ಸಿರಿಬಾಗಿಲು ರಾಮಕೃಷ್ಣ ಮಯ್ಯ

Tags: #Saaksha TVSiribagilu FoundationYakshagana
ShareTweetSendShare
Join us on:

Related Posts

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

by Shwetha
July 6, 2026
0

ಮನೆಯಲ್ಲಿರುವ ಹಳೆಯ ಚಿನ್ನವನ್ನು ಲಾಕರ್ ನಲ್ಲಿಟ್ಟು ಸುಮ್ಮನೆ ಕೂರುವ ಬದಲು ಅದರಿಂದಲೇ ಲಾಭ ಗಳಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ದೇಶದ ಚಿನ್ನದ ಆಮದು ಪ್ರಮಾಣವನ್ನು ತಗ್ಗಿಸುವ...

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

by Shwetha
July 6, 2026
0

ಗರ್ಭಿಣಿಯಾಗಿದ್ದಾಗ ಪತಿ ತನಗೆ ಫಿಂಗರ್ ಚಿಪ್ಸ್ ಮತ್ತು ಮಾಂಸದೂಟ ತಿನ್ನಲು ಬಿಡಲಿಲ್ಲ ಎಂಬ ವಿಚಿತ್ರ ಕಾರಣ ನೀಡಿ ಪತ್ನಿಯೊಬ್ಬಳು ತನ್ನ ಎನ್ಆರ್ಐ ಪತಿಯ ಮೇಲೆ ದಾಖಲಿಸಿದ್ದ ಕ್ರಿಮಿನಲ್...

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

by Shwetha
July 6, 2026
0

ವಾಷಿಂಗ್ಟನ್: ಇರಾನ್ ದೇಶದ ಉನ್ನತ ನಾಯಕತ್ವವನ್ನು ಕೇವಲ ಒಂದೇ ಒಂದು ದಾಳಿಯ ಮೂಲಕ ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತಕಾರಿ...

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

by Shwetha
July 6, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಅಧಿಕೃತವಾಗಿ ನೋಂದಣಿಯಾದರೆ ಮಾತ್ರ ಇಂತಹ ಅಕ್ರಮಗಳಿಗೆ ಮುಕ್ತಿ ಸಿಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ. ಅಯೋಧ್ಯಾ ರಾಮಮಂದಿರದ...

ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

ರಾಜಕೀಯಕ್ಕೆ ಬಳಸಬೇಡಿ ರಾಮನ ಹಣ- ರಾಮ ಮಂದಿರದ ದೇಣಿಗೆ ವಾಪಸ್ ಕೇಳಿದ ದಿಗ್ವಿಜಯ್ ಸಿಂಗ್: ಕೋರ್ಟ್‌ಗೆ ಹೋಗಬೇಡಿ ನಾನೇ ಕೊಡುತ್ತೇನೆಂದು ಸವಾಲು ಹಾಕಿದ ರಾಮಭಕ್ತ

by Shwetha
July 6, 2026
0

ಅಯೋಧ್ಯೆಯ ಭವ್ಯ ರಾಮ ಮಂದಿರದ ದೇಣಿಗೆ ವಿಷಯದಲ್ಲಿ ಈಗ ರಾಜಕೀಯ ಮತ್ತು ಭಕ್ತಿಯ ಸಂಘರ್ಷ ತಾರಕಕ್ಕೇರಿದೆ. ಅಯೋಧ್ಯೆಯಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರ ಅಥವಾ ಕಳ್ಳತನದ ಆರೋಪ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram