ಡೆಲ್ಲಿ ತಂಡ ಈ ಇಬ್ಬರನ್ನ ರೀಟೈನ್ ಮಾಡಿಕೊಳ್ಳಲ್ವಂತೆ
ನವದೆಹಲಿ : 2022ರ ಐಪಿಎಲ್ ಗೂ ಮುನ್ನ ಮೆಗಾ ಹರಾಜು ಪ್ರತಿಕ್ರಿಯೆ ನಡೆಯಲಿದೆ.
ಇದಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳು ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕಾಗಿದೆ.
ತಲಾ ಇಬ್ಬರು ವಿದೇಶಿ ಆಟಗಾರರಾಗಿರಬಹುದು ಅಥವಾ 3 ಭಾರತೀಯರು ಮತ್ತು ಒಬ್ಬ ವಿದೇಶಿಗನನ್ನು ಉಳಿಸಿಕೊಳ್ಳಲು ಬಿಸಿಸಿಐ ತಿಳಿಸಿದೆ.
ಹೀಗಾಗಿ ಯಾವ ತಂಡದಿಂದ ಯಾವ ಆಟಗಾರ ಹೊರಗೋಗಳಿದ್ದಾನೆ..
ಯಾವ ತಂಡ ಯಾರನ್ನ ಉಳಿಸಿಕೊಳ್ಳಲಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.
ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಅಶ್ವಿನ್ ಈ ಬಗ್ಗೆ ಮಾತನಾಡಿದ್ದು, ಡೆಲ್ಲಿ ತಂಡ ಶ್ರೇಯಸ್ ಅಯ್ಯರ್ ಮತ್ತು ನನ್ನನ್ನು ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.
ಯೂಟ್ಯೂಬ್ ಚಾನಲ್ ನಲ್ಲಿ ಮಾತನಾಡಿರುವ ಅಶ್ವಿನ್, ನಾನು ಮತ್ತು ಶ್ರೇಯಸ್ ಡೆಲ್ಲಿ ಕ್ಯಾಪಿಟಲ್ಸ್ ಪರ ದೀರ್ಘಕಾಲ ಉಳಿಯುವುದಿಲ್ಲ ಎಂದಿದ್ದಾರೆ.
ಇದಕ್ಕೆ ಕಾರಣವೇನಂದರೇ ಡೆಲ್ಲಿ ಕ್ಯಾಪಿಟಲ್ಸ್ ಸದ್ಯ ತಂಡದ ನಾಯಕರಾಗಿರುವ ರಿಷಬ್ ಪಂತ್, ತಂಡದ ಟ್ರಂಪ್ ಬೌಲರ್ ಗಳಾಗಿರುವ ಕಗಿಸೋ ರಬಾಡ, ಎನ್ಸಿಚ್ ನಾಕಿಯಾ ಅವರನ್ನ ರೀಟೈನ್ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇನ್ನುಳಿದ ಒಂದು ಸ್ಥಾನಕ್ಕೆ ಭಾರಿ ಪೈಪೋಟಿ ಇದೆ.
ಮೂಲಗಳ ಪ್ರಕಾರ ಈ ಬಾರಿ ಮೆಗಾ ಹರಾಜುಗೂ ಮುನ್ನ ಶ್ರೇಯಸ್ ಅಯ್ಯರ್ ತಾವಾಗಿಯೇ ಡೆಲ್ಲಿ ತಂಡವನ್ನು ತ್ಯಜಿಸಲಿದ್ದಾರಂತೆ.
ಇತ್ತ ಯುವಕರಿಗೆ ಮಣೆ ಹಾಕುವ ನಿಟ್ಟಿನಲ್ಲಿ ಅಶ್ವಿನ್ ರನ್ನು ಕೂಡ ಡೆಲ್ಲಿ ತಂಡ ಕೈ ಬಿಡಲಿದೆ ಎಂದು ಹೇಳಲಾಗುತ್ತಿದೆ.