ಕೋಲಾರ: ಮದ್ಯ ಸಿಗಲಿಲ್ಲವೆಂದು ಬೇಸರಗೊಂಡ ವ್ಯಕ್ತಿಯೊಬ್ಬ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವ ಕೋಲಾರದ ಮುಳಬಾಗಿಲಿ ಬಳಿ ನಡೆದಿದೆ. ತಾಲೂಕಿನ ಮಲ್ಲೆಕುಪ್ಪ ಗ್ರಾಮದ ಎಂ. ಶಂಕರ ಎಂಬ 36 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿ. ಹಲವು ವರ್ಷಗಳಿಂದ ಮದ್ಯಕ್ಕೆ ದಾಸನಾಗಿದ್ದ ಈ ವ್ಯಕ್ತಿ, ಕಳೆದ ಎರಡು ದಿನಗಳಿಂದ ಮದ್ಯಪಾನಕ್ಕಾಗಿ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದ್ದ. ಸ್ನೇಹಿತರ ಬಳಿ ಕುಡಿಯದೆ ಇರಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಇಂದು ಮುಂಜಾನೆಯೆ ಮದ್ಯಪಾನಕ್ಕಾಗಿ ಹುಡುಕಾಡಿ ಸಿಗದೆ ಇದ್ದುದ್ದರಿಂದ ನೇರವಾಗಿ ಮನೆಗೆ ಬಂದ ವ್ಯಕ್ತಿ, ಏಕಾಏಕಿ ತರಕಾರಿ ಕತ್ತರಿಸುವ ಚಾಕುವಿನಿಂದ ಕತ್ತನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಚೀರಾಟ ಮಾಡುತ್ತಿದ್ದಾಗ ಮನೆಯವರು ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನೂ ಕೂಡಲೇ ಸ್ಥಳಕ್ಕೆ ಬಂದ ನಂಗಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು
ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...








