ಆಯುಷ್ ಅಭಿಯಾನ: 5 ವರ್ಷಗಳ ವರೆಗೂ ವಿಸ್ತರಣೆಗೆ ಸಂಪುಟದಲ್ಲಿ ಅನುಮೋದನೆ
ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯನ್ನು 5 ವರ್ಷಗಳವರೆಗೆ ವಿಸ್ತರಣೆ ಯೋಯನೆಯನ್ನ ಮುಂದುವರಿಸಿಕೊಂಡು ಹೋಗಲು ಕೇಂದ್ರ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯು ಇದಕ್ಕೆ ಅನುಮತಿ ನೀಡಿದ್ದು, 2021ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ಈ ಯೋಜನೆ ಮುಂದುವರಿಯಲಿದೆ. ಇದಕ್ಕಾಗಿ, 4,607.30 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುವುದು. ಈ ಯೋಜನೆಯ ಅಡಿಯಲ್ಲಿ ಸಾಂಪ್ರದಾಯಿಕ ಔಷಧ ಪದ್ಧತಿಗೆ ಉತ್ತೇಜನ ನೀಡಲಾಗುವುದು, ಆಯುಷ್ ಕ್ಷೇಮ ಕೇಂದ್ರ, ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ನಿರ್ಮಾಣ ಹಾಗೂ ಮೇಲ್ದರ್ಜೆಗೇರಿಸುವ ಕೆಲಸ ನಡೆಯಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಮ್ಯಾನ್ಮಾರ್ : ಆಂಗ್ ಸೂ ಕಿ ವಿರುದ್ಧ ಮತ್ತೆ 4 ಹೆಚ್ಚುವರಿ ಪ್ರಕರಣ ದಾಖಲು
ಆಯುಷ್ ಯೋಜನೆಗೆ 2014ರಲ್ಲಿ ಚಾಲನೆ ಸಿಕ್ಕಿತ್ತು. ಈಶಾನ್ಯ ಜನಪದ ವೈದ್ಯಪದ್ಧತಿ ಕೇಂದ್ರದ ಹೆಸರನ್ನು, ಈಶಾನ್ಯ ಆಯುರ್ವೇದ ಹಾಗೂ ಜನಪದ ವೈದ್ಯಪದ್ಧತಿ ಸಂಶೋಧನಾ ಸಂಸ್ಥೆ ಎಂದು ಬದಲಿಸಲು ಸಂಪುಟ ಅನುಮತಿ ನೀಡಿದ್ದಾಗಿ ತಿಳಿಸಿದರು.
ಈ ಯೋಜನೆಯ ಸೌಲಭ್ಯವನ್ನು 2024ರವರೆಗೆ ಮುಂದುವರಿಸಲು ಅವಕಾಶ ನೀಡಿರುವುದರಿಂದ, ಇದು ಉದ್ಯಮಕ್ಕೆ ಸ್ಥಿರತೆ ನೀಡಲಿದ್ದು ದೀರ್ಘಾವಧಿಯ ಒಪ್ಪಂದಗಳನ್ನು ಪೂರೈಸಲು ಹಾಗೂ ಹೆಚ್ಚುವರಿ ಹೂಡಿಕೆಗೆ ಸಹಾಯವಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎ. ಶಕ್ತಿವೇಲ್ ಹೇಳಿದ್ದಾರೆ.