ದುಷ್ಕರ್ಮಿಗಳು ಗಂಡು ಮಗುವಿನ ಅಪಹರಣ ಮಾಡಿ ಪರಾರಿಯಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲದಲ್ಲಿ ಈ ಘಟನೆ ನಡೆದಿದೆ. ಪವಿತ್ರ ಯಾತ್ರಾ ಸ್ಥಳದಲ್ಲಿಯೇ ದುಷ್ಕರ್ಮಿಗಳು ಎರಡು ವರ್ಷದ ಗಂಡು ಮಗುವನ್ನು ಅಪಹರಿಸಿ ಪರಾರಿಯಾಗಿದ್ದಾರೆ.
ಬೆಂಗಳೂರು ಮೂಲದ ಜಬೀವುಲ್ಲಾ, ಸುಮೈಯಾ ದಂಪತಿಯ ಪುತ್ರ ಅಜ್ಜಿ-ತಾತನ ಜೊತೆ ಅಮ್ಮಜಾನ್ ಬಾವಜಾನ್ ದರ್ಗಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಜನಸಂದಣಿ ನಿರ್ಮಾಣವಾಗಿತ್ತು. ಈ ವೇಳೆ ಮಗುವನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.