Bangalore | ಅಮೃತ್ ನಗರೋತ್ಥಾನ ಕಾಮಗಾರಿಗೆ ಚಾಲನೆ
ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜ್ ಕುಮಾರ್ ವಾರ್ಡ್ ಹಾಗೂ ಅಗ್ರಹಾರ ದಾಸರಹಳ್ಳಿ ವಾರ್ಡ್ ನ ವಿವಿಧೆಡೆ ಅಮೃತ್ ನಗರೋತ್ಥಾನ ಕಾಮಗಾರಿಗಳಿಗೆ ಮಾನ್ಯ ವಸತಿ ಹಾಗೂ ಮೂಲಸೌಲಭ್ಯ ಸಚಿವರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ.ಸೋಮಣ್ಣ ರವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಅಗ್ರಹಾರ ದಾಸರಹಳ್ಳಿ ವಾರ್ಡ್ ನಲ್ಲಿರುವ ಗುಂಡೂರಾವ್ ಕ್ವಾಟ್ರಸ್ ಪಾಯಲ್ ಅಪಾರ್ಟ್ಮೆಂಟ್ ಹತ್ತಿರ ವಾರ್ಡ್ ಕಾಮಗಾರಿ, ರಹೇರಾ ಅಪಾರ್ಟ್ಮೆಂಟ್ ಮಾಗಡಿ ಮುಖ್ಯರಸ್ತೆಯಲ್ಲಿ ಎಸ್.ಡಬ್ಲ್ಯೂ.ಡಿ ಕಾಮಗಾರಿ, ಎಂ.ಸಿ.ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನದ 1ನೇ ಅಡ್ಡರಸ್ತೆಯಲ್ಲಿ ಮೇಜರ್ ರೋಡ್ಸ್ ಕಾಮಗಾರಿ, ಎಂ.ಸಿ.ಬಡಾವಣೆ ಸುಭಾಷ್ ಚಂದ್ರ ಬೋಸ್ ಉದ್ಯಾನವನ ಎದುರು 5ನೇ ಅಡ್ಡರಸ್ತೆಯಲ್ಲಿ ವಾರ್ಡ್ ಕಾಮಗಾರಿ, ಎಂ.ಸಿ.ಬಡಾವಣೆಯ ಆಸ್ಪತ್ರೆ ಹತ್ತಿರ 4ನೇ ಮುಖ್ಯರಸ್ತೆಯಲ್ಲಿ ವಾರ್ಡ್ ಎಲ್.ಇ.ಡಿ ಲೈಟ್ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.