Bangalore | ಪಠ್ಯಕ್ಕೆ ಭಗವದ್ಗೀತೆ… ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ
ಬೆಂಗಳೂರು : ಗುಜರಾತ್ ಮಾದರಿಯಲ್ಲಿ ಶಾಲೆಯ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುವುದಾಗಿ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಸಂಸ್ಕಾರದ ಮೇಲೆ ಭಾರಿ ದೊಡ್ಡ ಪರಿಣಾಮಗಳು ಆಗ್ತಿವೆ. ಇದಕ್ಕೆ ನೀತಿ ಶಿಕ್ಷಣ ಪ್ರಾರಂಭ ಮಾಡಿ ಎಂಬುದು ಅನೇಕರ ಒತ್ತಾಯವಾಗಿದೆ.
ಗುಜರಾತ್ ನಲ್ಲಿ ಎರಡು ಮೂರು ಹಂತದಲ್ಲಿ ನೀತಿ ಶಿಕ್ಷಣ ಆರಂಭಿಸಲು ಯೋಜನೆ ಮಾಡಿದ್ದಾರೆ. ಇದರಲ್ಲಿ ಮೊದಲ ಹಂತವಾಗಿ ಭಗವದ್ಗೀತೆ ಆರಂಭಿಸಲು ಯೋಚಿಸಿದ್ದಾರೆ. ಖಂಡಿತಾ ಮುಂದಿನ ದಿನಗಳಲ್ಲಿ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಹಿಂದೆ ನಾವು ಓದುವ ಸಂಧರ್ಭದಲ್ಲಿ ವಾರಕ್ಕೆ ಒಂದು ದಿನ ನೀತಿ ಶಿಕ್ಷಣ ಪಾಠ ಕೇಳ್ತಾ ಇದ್ದೆವು. ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ.
ಭಗವದ್ಗೀತೆ ಯನ್ನು ಮಕ್ಕಳಿಗೆ ಹೇಳಿಕೊಡಬಾರದು ಅಂತೇನೂ ಇಲ್ಲ. ಹಿಂದೆ ಎಸ್ ಎಂ ಕೃಷ್ಣ ಭಗವದ್ಗೀತೆ ಓದುತ್ತಿದ್ದೇನೆ ಎಂದು ಹೇಳುತ್ತಿದ್ದರು.
ಅದೇ ನನಗೆ ಸ್ಪೂರ್ತಿ ಅಂತಾ ಹೇಳ್ತಾ ಇದ್ರು. ರಾಮಾಯಣ,ಮಹಾಭಾರತ, ಬೈಬಲ್, ಕುರಾನ್ ಎಲ್ಲದರಲ್ಲೂ ಇರುವ ಒಳ್ಳೆಯ ಅಂಶಗಳನ್ನು ಸೇರಿಸಬಹುದು. ಆದರೆ ಇದೆಲ್ಲಾ ಶಿಕ್ಷಣ ತಜ್ಞರು ನಿರ್ಧಾರ ಮಾಡುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.









