Basanagowda Patil Yatnal | ಸಿದ್ದರಾಮಯ್ಯಗೆ ತಾಕತ್ ಇದ್ರೆ ಹಂದಿ ತಿಂದು ಮಸೀದಿಗೆ ಹೋಗಲಿ
ವಿಜಯಪುರ : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಾಕತ್ ಇದ್ರೆ ಹಂದಿ ತಿಂದು ಮಸೀದಿಗೆ ಹೋಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಾಕತ್ ಇದ್ರೆ ಹಂದಿ ತಿಂದು ಮಸೀದಿಗೆ ಹೋಗಲಿ. ನಿಮ್ಮ ತಾಕತ್ ಗೊತ್ತಾಗುತ್ತೆ. ಒಂದೊಂದು ದೇಗುಲದಲ್ಲಿ ಧರ್ಮ ಪಾಲನೆ ಮಾಡುವ ಸಂಸ್ಕೃತಿ, ನಿಯಮಯಿರುತ್ತೆ.
ಕೆಲವೊಂದು ಕಡೆಗಳಲ್ಲಿ ಮಾಂಸ ಸೇವಿಸಿ ಹೋಗಬಾರದು. ಇನ್ನೂ ಕೆಲವೊಂದು ಕಡೆ ಮೈಮೇಲೆ ಬಟ್ಟೆ ಹಾಕಿಕೊಂಡು ಹೋಗಬಾರದು.
ಬನಿಯನ್ ತೆಗೆದು ದೇಗುಲಕ್ಕೆ ಹೋಗುವ ಸಂಸ್ಕೃತಿ ಇದೆ. ದೇಗುಲ ಪಾವಿತ್ರ್ಯತೆ, ಒಳ್ಳೆಯದಾಗಬೇಕಾದ್ರೆ ಅಲ್ಲಿನ ನಿಯಮ ಪಾಲಿಸೋದು ಎಲ್ಲರ ಜವಾಬ್ದಾರಿ.
ಉದ್ದಟತನ ಮಾಡೋದ್ರಿಂದ ದೇವರು ನಂಬುವ ಆಸ್ತಿಕರ ಮನಸ್ಸಿಗೆ ನೋವು ಮಾಡಬಾರದು. ಸಿದ್ದರಾಮಯ್ಯಯಾಗಲಿ ಯಾರೇ ಆಗಲಿ ಮಾಡಬಾರದು ಎಂದು ಹೇಳಿದರು.
![Basanagouda patil yatnal challenge to ex cm siddaramaiah saaksha tv](http://saakshatv.com/wp-content/uploads/2021/10/sidd-1.png)
ಇದೇ ವೇಳೆ ಸಿದ್ಧರಾಮಯ್ಯಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ್, ಮೊಟ್ಟೆ ಎಸೆದ ಸಂಪತ್ ಗೆ ಅಭಿನಂದನೆ ಸಲ್ಲಿಸುತ್ತೇನೆ.
ಕಾಂಗ್ರೆಸ್ ಕಾರ್ಯಕರ್ತರ ಇದ್ರು ಅವನಿಗೆ ನೋವಾಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷ ಇರಲಿ ಅವನು ಯಾವುದೆ ಪಕ್ಷದವನಿರಲಿ.
ಆದ್ರೆ ತಾನು ಪಾಲಿಸುವ ಧರ್ಮಕ್ಕೆ ಅಪಮಾನ ಆದಾಗ ಆ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ರೀತಿ ನಮ್ಮಲ್ಲಿ ಧರ್ಮ ಜಾಗೃತಿ ಆಗಬೇಕು.
ಯಾವುದೆ ಧರ್ಮದ ಅಪಮಾನ ಮಾಡಿ ಅಂತಾ ನಾನು ಹೇಳಲ್ಲ. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಕ್ಕು ಗೌರವ ಕೊಡುತ್ತೇನೆ.
ಆದ್ರೆ ಯಾವುದೆ ಧರ್ಮಕ್ಕೆ ಹೀಯಾಳಿಸುವುದು, ಅತೀ ಹೀನವಾಗಿ ಮಾತನಾಡುವುದು ಸರಿಯಲ್ಲ. ಇದರಿಂದಲೆ ಆಕ್ರೋಶಗೊಂಡು ಈ ಕೆಲಸ ಮಾಡಿದ್ದಾನೆ ಎಂದು ಹೇಳಿದರು.