ಯುಗಾದಿಯೊಳಗೆ ಉತ್ತರ ಕರ್ನಾಟಕದೊಬ್ಬರಿಗೆ ರಾಜ್ಯದ ಚುಕ್ಕಾಣಿ : ಯತ್ನಾಳ್
ವಿಜಯಪುರ : ಯುಗಾದಿಯೊಳಗೆ ಉತ್ತರ ಕರ್ನಾಟಕದೊಬ್ಬರು ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಬಳಿ ಪದೇ ಪದೆ ಮಂತ್ರಿ ಸ್ಥಾನ ಕೊಡಿ ಅಂತ ದುಂಬಾಲು ಬೀಳುವುದಿಲ್ಲ.
ಕೆಲವೇ ದಿನಗಳಲ್ಲಿ ಮಂತ್ರಿ ಸ್ಥಾನ ನೀಡುವವರು ಬರ್ತಾರೆ ಕಾದು ನೋಡಿ ಎಂದು ಸಿಎಂ ಬದಲಾವಣೆ ಬಗ್ಗೆ ಸುಲಿವು ನೀಡಿದರು.
ಈ ಹಿಂದೆಯೂ ಇದೇ ರೀತಿ ಹೇಳಿದ್ರೀ ಅಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಹಿಂದೆ ನಾನು ಮೂರು ತಿಂಗಳು ಕಾದು ನೋಡಿ ಎಂದು ಹೇಳಿದ್ದು ಬೇರೆ ವಿಷಯಕ್ಕೆ, ಇದು ಮಹತ್ವದ ವಿಷಯ. ಯುಗಾದಿಗೆ ಉತ್ತರ ಕರ್ನಾಟಕದವರು ಮಹತ್ವದ ಸ್ಥಾನ ಅಲಂಕರಿಸಲಿದ್ದಾರೆ ಎಂದ್ರು.
ಅಂದಹಾಗೆ ಈ ಹಿಂದೆ ಕೂಡ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳನ್ನು ನೀಡಿದ್ದರು.
ಇದು ಬಿಜೆಪಿ ಬಿಗ್ ಬಾಸ್ ಗಮನಕ್ಕೂ ಹೋಗಿದ್ದು, ಪಕ್ಷದ ಅಂಗಳದಲ್ಲಿ ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel