ಗಣೇಶೋತ್ಸವದಲ್ಲಿ ಡಿಜೆ ಬಳಕೆ ನಿಷೇಧ ಸುಪ್ರೀಂ ಕೋರ್ಟ್ ಆದೇಶ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಜಯಪುಯರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ..
ಸುಪ್ರೀಂ ಕೋರ್ಟಿನ ಆದೇಶ ಮಸೀದಿ ಮೇಲಿನ ಮೈಕ್ ಗೂ ಇದೆ, ಗಣಪತಿಗೂ ಇದೆ. ಮಸೀದಿ ಮೇಲಿನ ಮೈಕ್ ಯಾವಾಗ ಬಂದ್ ಆಗುತ್ತದೆಯೋ ಅಂದು ಗಣಪತಿ ಮುಂದಿನ ಡಿಜೆ ಬಂದ್ ಆಗುತ್ತದೆ ಎಂದಿದ್ದಾರೆ.
ಅಲ್ಲಿಯವರೆಗೆ ನಾವು ಹಿಂದೂಗಳು ಗಣೇಶ ಚತುರ್ಥಿಗೆ ಪರವಾನಿಗೆ ಯಾಕೆ ಪಡೆಯಬೇಕೆಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ನಡೆದ ಶ್ರೀ ಗಜಾನನ ಮಹಾಮಂಡಳ ಸಭೆಯಲ್ಲಿ ಅವರು ಈ ಹೇಳಿಕೆಯನ್ನ ನೀಡಿದ್ದಾರೆ.. ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದ ಬಳಿ ನಡೆದ ಸಭೆಯಲ್ಲಿ ಅವರು ಭಾಗವಹಿಸಿದ್ದರು..
ಅಲ್ಲದೇ ನಾನೇನಾದರೂ ಸಿಎಂ ಆಗಿದ್ದರೆ ನೋ ಪರ್ಮಿಷನ್ ಇನ್ ಕರ್ನಾಟಕ , ಆಧಿಕಾರಿಗಳೇ ಸ್ಥಳಕ್ಕೆ ಬಂದು ಪರವಾನಿಗೆ ನೀಡುವಂತೆ ಆದೇಶ ಮಾಡುತ್ತಿದ್ದೆ. ನಾ ಸಿಎಂ ಇದ್ದರೆ ಹಾಗೇ ಮಾಡುತ್ತಿದ್ದೇ, ಆದರೆ ನನ್ನ ಮಾಡಿಸಿಕೊಡಲ್ಲಾ ಯಾರೂ ಎಂದು ಹೇಳಿದ್ದಾರೆ..