ADVERTISEMENT
Saturday, June 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

“ನನ್ನ ಆಕ್ರಂದನ ಕೇಳುತ್ತಿಲ್ಲವೇ…?” ನೋವಿನಿಂದ ಅಲವತ್ತುಕೊಳ್ಳುತ್ತಿದೆ ಚಿಕ್ಕಮಗಳೂರಿನ ಬಸವನಹಳ್ಳಿ/ದಂಟರಮಕ್ಕಿ ಕೆರೆ:

admin by admin
January 30, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

“ನನ್ನ ಆಕ್ರಂದನ ಕೇಳುತ್ತಿಲ್ಲವೇ…?” ನೋವಿನಿಂದ ಅಲವತ್ತುಕೊಳ್ಳುತ್ತಿದೆ ಚಿಕ್ಕಮಗಳೂರಿನ ಬಸವನಹಳ್ಳಿ/ದಂಟರಮಕ್ಕಿ ಕೆರೆ:

ಹೀಗೆಂದು ನಮ್ಮ ಚಿಕ್ಕಮಗಳೂರಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ಬಸವನಹಳ್ಳಿ (ದಂಟರಮಕ್ಕಿ) ಕೆರೆ ಮೌನವಾಗಿ ರೋಧಿಸುತ್ತಿದೆ. ಆದರೆ ಚಿಕ್ಕಮಗಳೂರಿನ ಹಾಗೂ ಈ ಕೆರೆ ಪಾತ್ರದ ಜನರು ಜಾಣ ಕುರುಡು, ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ. ಕೆರೆಯ ಅವ್ಯವಸ್ಥೆಯ ಬಗ್ಗೆ ಮಾತನಾಡುವ ಮೊದಲು ಕೆರೆ ರೂಪುಗೊಂಡ ಕುರಿತು ಒಂದಷ್ಟು ದೃಷ್ಟಿ ಹಾಯಿಸೋಣ.

Related posts

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

June 14, 2025
ಮತ್ತೊಮ್ಮೆ  ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

ಮತ್ತೊಮ್ಮೆ ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

June 14, 2025

ಚಿಕ್ಕಮಗಳೂರು ನಗರವನ್ನು ಒಂದು ಪಾರ್ಶ್ವಕ್ಕೆ ಆವರಿಸಿಕೊಂಡಿರುವ ಚಂದ್ರದ್ರೋಣ ಗಿರಿಶ್ರೇಣಿಯಿಂದ ತಳಭಾಗಕ್ಕೆ ಹರಿಯುವ ಮಳೆ ನೀರು ಹಾಗೂ ತೊರೆಗಳ ನೀರನ್ನು ಹಿಡಿದಿಟ್ಟು ಚಿಕ್ಕಮಗಳೂರಿಗೆ ಕುಡಿಯಲು ಹಾಗೂ ಸುತ್ತಲಿನ ಪ್ರದೇಶಗಳಿಗೆ ಕೃಷಿ ಅನುಕೂಲಕ್ಕಾಗಿ ದಶಕಗಳ ಹಿಂದೆ ರೂಪುಗೊಂಡಿದ್ದೇ ಈ ಅದ್ಭುತ ಜಲ ಸಂಗ್ರಹ ವ್ಯವಸ್ಥೆ. ಈ ಅತ್ಯುತ್ತಮ gravity water system ನ ಮೊದಲ ಕೆರೆಯನ್ನಾಗಿ ಹಿರೇಕೊಳಲೆ ಕೆರೆಯನ್ನು ನಿರ್ಮಿಸಲಾಯಿತು.

ಯಗಚಿ ಅಣೆಕಟ್ಟುನ ಹರಿಯುವ ನೀರನ್ನು ಸಂಗ್ರಹಿಸುವ ಸಲುವಾಗಿ ನಿರ್ಮಾಣವಾಗಿದ್ದು ರಾಮೇಶ್ವರ ಕೆರೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಮೃದ್ಧವಾಗಿ ತರಕಾರಿ ಬೆಳೆಯಲಾಗುತ್ತದೆ. ಈ ಕೆರೆಯು ತುಂಬಿದ ನಂತರ ಹರಿಯುವ ನೀರನ್ನು ಸಂಗ್ರಹಿಸಲು ನಿರ್ಮಿಸಿದ್ದೇ ಇಂದು ಮರಣಶಯ್ಯೆಯಲ್ಲಿರುವ ನಗರದ ಹೃದಯಭಾಗದಲ್ಲಿರುವ ಬಸವನಹಳ್ಳಿ ಕೆರೆ ಅಥವಾ ದಂಟರಮಕ್ಕಿ ಕೆರೆ. ಜಿಲ್ಲಾಡಳಿತದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಾಗೂ ದಿವ್ಯ ನಿರ್ಲಕ್ಷ್ಯದಿಂದಾಗಿ ನಗರದ ಕೊಳಚೆ ನೀರು ಕೆರೆಯನ್ನು ವ್ಯಾಪಿಸಿಕೊಂಡು ಅಕ್ಷರಷಃ ಕೆರೆಯನ್ನು ಕೊಂದುಹಾಕಿದೆ.

Basavanahalli
ಅಳಿವಿನಂಚಿನಲ್ಲಿರುವುದು ಕೇವಲ ಇದೊಂದೇ ಕೆರೆಯಲ್ಲ, ಈ ಕೆರೆಯೊಂದಿಗೆ ಜಲ ಸಂಪರ್ಕ ಹೊಂದಿರುವ ಹಿರೇಮಗಳೂರು ಕೆರೆ ಹಾಗೂ ಕೋಟೆ ಕೆರೆಗಳನ್ನೊಳಗೊಂಡಂತೆ ಈ ಕೆರೆಗಳ ಕೆಳಭಾಗದಲ್ಲಿರುವ ಎಲ್ಲಾ ಜಲಮೂಲಗಳೂ ಕಲುಷಿತಗೊಂಡಿವೆ. ಈ ವಿಚಾರ ‘ಕೆರೆನೀರು ಕಲುಷಿತಗೊಂಡಿದೆ ಸರಿ ಪಡಿಸಿ’ ಎಂದು ಹೇಳಿ ಸುಮ್ಮನಾಗುವಷ್ಟು ಚಿಕ್ಕ ಅಥವಾ ಹಗುರ ವಿಚಾರ ಅಲ್ಲವೇ ಅಲ್ಲ. ಭೂಮಿಯ ಮೇಲ್ಮೈ ಹೇಗೆ ಅಸಂಖ್ಯ ಜೀವಿಗಳ ಆವಾಸ ಸ್ಥಾನವೋ ಹಾಗೆಯೇ ನೀರಿನೊಳಗಿನದ್ದೂ ಕೂಡಾ ಅಷ್ಟೇ ದೊಡ್ಡ ಜಗತ್ತು. ಜಲಸಂಪತ್ತೆಂದರೆ ಕೇವಲ ನೀರಿನ ಮೂಲವಷ್ಟೇ ಅಲ್ಲ. ಅದು ಅಸಂಖ್ಯಾತ ಜಲಚರಗಳಿಗೆ ಆಮ್ಲಜನಕ. ಸೂಕ್ಷ್ಮತೆ ಕಳೆದುಕೊಂಡ ನಮ್ಮ ಆಡಳಿತ ವ್ಯವಸ್ಥೆ ಕೊಳಚೆ ನೀರನ್ನು ಕೆರೆಗೆ ಹರಿಯಲು ಪರೋಕ್ಷವಾಗಿ ಅವಕಾಶ ಕಲ್ಪಿಸಿ ಈ ಆಮ್ಲಜನಕವನ್ನೇ ಕೊಂದುಹಾಕಿದೆ. ಅಷ್ಟೇ ಅಲ್ಲದೇ ವಿಷಕಾರಿ ರಾಸಾಯನಿಕ ಮಿಶ್ರಿತ ನೀರು ಕೆರೆಯಲ್ಲಿ ಮಡುಗಟ್ಟಿ ನಿಲ್ಲುವ ಮೂಲಕ ಅಂತರ್ಜಲದ ಆರೋಗ್ಯಕ್ಕೂ ಕುತ್ತು ತಂದಿದೆ.

ನಮ್ಮ ಕಣ್ಣೆದುರೇ ಇಷ್ಟೆಲ್ಲಾ ಅನಾಹುತವಾಗುತ್ತಿದ್ದರೂ ಸಹ ನಾವು ಕಂಡೂ ಕಾಣದಂತಿರುವುದು ನಾವು ನಮಗೇ ಮಾಡಿಕೊಳ್ಳುತ್ತಿರುವ ದ್ರೋಹವಲ್ಲವೇ…!? ನಾವು ನಮ್ಮ ಮಕ್ಕಳಿಗೆ ಏನನ್ನುಳಿಸಿ ಹೋಗುತ್ತಿದ್ದೇವೆ ? ಅನಾರೋಗ್ಯ ಪೀಡಿತ ಪರಿಸರವನ್ನಲ್ಲವೇ…!ನಮಗ್ಯಾಕೆ ಇಲ್ಲದ ತಲೆಬಿಸಿ ಅದನ್ನೆಲ್ಲಾ ಸರಿ ಮಾಡಲು ಸರ್ಕಾರವಿಲ್ಲವಾ? ಎಂದು ಹಿಂದಕ್ಕೆ ಜಾರುವವರಿಗೆ ಯಾವತ್ತಿಗೂ ಕೇಳಬೇಕಾದ ಪ್ರಶ್ನೆ, ನೀವು ಈ ಪರಿಸರದ ಭಾಗವಲ್ಲವೇ? ನಾವು ಕುಡಿಯುತ್ತಿರುವ ನೀರು, ತಿನ್ನುತ್ತಿರುವ ತರಕಾರಿ ಇದೇ ಕಲುಷಿತ ನೀರಿನಿಂದ ಬೆಳೆಯುತ್ತಿರುವುದು ಎಂಬ ಸೂಕ್ಷ್ಮ ವಿಚಾರ ನಿಮಗೆ ಅರ್ಥವಾಗುತ್ತಿಲ್ಲವೇ…?

Basavanahalli

ಚಿಕ್ಕಮಗಳೂರು ನಗರದ ನಡುವೆ ಸಂಪೂರ್ಣ ಕಲುಷಿತಗೊಂಡು ಹರಿಯುತ್ತಿರುವ ಯಗಚಿ ಹೊಳೆ ಸೇರುತ್ತಿರುವುದು ಯಾವ ಅಣೆಕಟ್ಟೆಗೆ, ಯೋಚಿಸಿದ್ದೀರಾ? ಪ್ರತಿನಿತ್ಯ ನಾವು ಕುಡಿಯುತ್ತಿರುವ ನೀರಿನ ಆರೋಗ್ಯದ ಕುರಿತು ಎಂದಾದರೂ ಆಲೋಚಿಸಿದ್ದೇವೆಯೇ? ಕನಿಷ್ಟ ಈಗಲಾದರೂ ಎಚ್ಚೆತ್ತುಕೊಳ್ಳೋಣ. ನಮ್ಮೂರಿನ ಕೆರೆ ಶುದ್ಧೀಕರಣಕ್ಕಾಗಿ ಗಟ್ಟಿ ಧ್ವನಿಯಿಂದ ಆಗ್ರಹಿಸೋಣ. ಪ್ರಬಲ ಸಾಮಾಜಿಕ ಮಾಧ್ಯಮದ ಮೂಲಕ ಈ ವಿಚಾರವನ್ನು ನಮ್ಮೂರಿನ ನಾಗರಿಕರಿಗೆ ತಲುಪಿಸೋಣ, ಇನ್ನಷ್ಟು ಪ್ರಜ್ಞಾವಂತರಾಗೋಣ. ಅಯೋಗ್ಯ ಜನಪ್ರತಿನಿಧಿಗಳು ಅವಿವೇಕಿ ಅಧಿಕಾರಿಗಳನ್ನು ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸೋಣ.

ಚಿತ್ರ ಕೃಪೆ:- ಗೂಗಲ್

-ಕಾರ್ತಿಕಾದಿತ್ಯ ಬೆಳ್ಗೋಡು
ಹವ್ಯಾಸಿ ಬರಹಗಾರ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BasavanahalliChikmagalurlake
ShareTweetSendShare
Join us on:

Related Posts

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

by Shwetha
June 14, 2025
0

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಇದರ ವತಿಯಿಂದ ಭಾರತ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಮಿನಿಸ್ಟ್ರಿಗಳಲ್ಲಿ ಖಾಲಿಯಾಗಿರುವ ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ...

ಮತ್ತೊಮ್ಮೆ  ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

ಮತ್ತೊಮ್ಮೆ ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

by Shwetha
June 14, 2025
0

ಕೊರೋನಾ ವೈರಸ್‍‌ನ ಹೊಸ ತಳಿ ದೇಶದಾದ್ಯಂತ ಮತ್ತೆ ಆತಂಕ ಸೃಷ್ಟಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ,...

ಅದೃಷ್ಟದ ಸಂಖ್ಯೆಯೇ ಮಾಜಿ ಸಿಎಂ ರೂಪಾನಿಗೆ ಅಶುಭ ಆಯಿತಾ?

ಅದೃಷ್ಟದ ಸಂಖ್ಯೆಯೇ ಮಾಜಿ ಸಿಎಂ ರೂಪಾನಿಗೆ ಅಶುಭ ಆಯಿತಾ?

by Shwetha
June 14, 2025
0

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನ ಭೀಕರವಾಗಿ ಪತನಗೊಂಡ ಪರಿಣಾಮ, ವಿಮಾನದಲ್ಲಿದ್ದ 265 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಗುಜರಾತ್‌ನ...

ಅಹಮದಾಬಾದ್ ವಿಮಾನ ದುರಂತ: DNA ಪರೀಕ್ಷೆಯಲ್ಲಿ 110 ಜನರ ಗುರುತು ಪತ್ತೆ – ಶವಗಳ ಗುರುತು ಇನ್ನೂ ಸವಾಲು

ಅಹಮದಾಬಾದ್ ವಿಮಾನ ದುರಂತ: DNA ಪರೀಕ್ಷೆಯಲ್ಲಿ 110 ಜನರ ಗುರುತು ಪತ್ತೆ – ಶವಗಳ ಗುರುತು ಇನ್ನೂ ಸವಾಲು

by Shwetha
June 14, 2025
0

ಜೂನ್ 12ರಂದು ಸಂಭವಿಸಿದ ಅಹಮದಾಬಾದ್ ವಿಮಾನ ದುರಂತದ ಸಾವು-ನೋವಿಗೆ ದೇಶವಿಡಿ ಶೋಕ ಆವರಿಸಿದೆ. 241 ಪ್ರಯಾಣಿಕರು ಹಾಗೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿ ಒಟ್ಟು 265 ಮಂದಿ...

‘ಥಗ್ ಲೈಫ್’ ವಿವಾದ: ಕ್ಷಮೆ ಕೇಳದೆ ಇರುವುದನ್ನು ಪ್ರಶ್ನಿಸಿ, ಕಮಲ್ ಹಾಸನ್ ಅರ್ಜಿ ವಿಚಾರಣೆ  ಮುಂದೂಡಿಕೆ

‘ಥಗ್ ಲೈಫ್’ ವಿವಾದ: ಕ್ಷಮೆ ಕೇಳದೆ ಇರುವುದನ್ನು ಪ್ರಶ್ನಿಸಿ, ಕಮಲ್ ಹಾಸನ್ ಅರ್ಜಿ ವಿಚಾರಣೆ ಮುಂದೂಡಿಕೆ

by Shwetha
June 14, 2025
0

ಕಮಲ್ ಹಾಸನ್ ನಟನೆಯ ಮತ್ತು ನಿರ್ಮಾಣದ 'ಥಗ್ ಲೈಫ್' ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಭದ್ರತೆ ಕಲ್ಪಿಸಬೇಕು ಎಂಬ ಮನವಿಯ ಮೇರೆಗೆ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram