ADVERTISEMENT
Wednesday, August 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರೈತರೊಂದಿಗೆ ಟ್ರ್ಯಾಕ್ಟರ್ ಚಲಾಯಿಸಿ ಬಿತ್ತನೆ ಮಾಡಿ ಬರ್ತ್ ಡೇ ಆಚರಿಸಿಕೊಂಡ ಬಿ.ಸಿ ಪಾಟೀಲ್

Kariyappa N by Kariyappa N
November 15, 2020
in Newsbeat, Politics, Samagra karnataka, ರಾಜ್ಯ
farmres day
Share on FacebookShare on TwitterShare on WhatsappShare on Telegram

ಮಂಡ್ಯ: ನನ್ನ ಹುಟ್ಟುಹಬ್ಬ ಆಚರಿಸಲು ರೈತರಿಗೊಂದು ದಿನ ಆರಂಭಿಸಿಲ್ಲ. ರೈತರ ಶಕ್ತಿಗಾಗಿ ರೈತರ ದಿನ ಆರಂಭಿಸಿದ್ದೇನೆ. ರೈತರ ಕಷ್ಟನಷ್ಟ ಅರಿಯಲು ಅನುಭವ ಅರಿಯಲು ಸಮಸ್ಯೆಗೆ ಪರಿಹಾರ ಏನೆಂಬುದನ್ನು ಅರಿಯಲು ಮಂಡ್ಯಕ್ಕೆ ಬಂದಿದ್ದೇನೆ. ರೈತರ ಶಕ್ತಿಯಾಗಲು ಬಯಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಮಂಡ್ಯದ ಮಡುವಿನ ಕೋಡಿಯಲ್ಲಿ ಧಾನ್ಯದ ರಾಶಿಗೆ ಪೂಜೆ ನೆರವೇರಿಸುವ ಮೂಲಕ “ರೈತರೊಂದಿಗೊಂದು ದಿನ” ವೇದಿಕೆ ಉದ್ಘಾಟಿಸಿ ಮಾತನಾಡಿದ ಬಿ.ಸಿ ಪಾಟೀಲ್, ಸರ್ಕಾರ ರೈತರ ಮನೆಗೆ ಬರಬೇಕೇ ವಿನಃ, ರೈತ ಸರ್ಕಾರದ ಹತ್ತಿರ ಹೋಗಿಲ್ಲ. ಟ್ರ್ಯಾಕ್ಟರ್ ಚಲಾವಣೆ ಮಾಡಿ, ಬಿತ್ತನೆ ಮಾಡಿ ಕೆಸರಿನಲ್ಲಿ ಕಾಲಿಟ್ಟಿದ್ದೇವೆ. ಇದು ಯಾರೂ ಮಾಡುವುದಿಲ್ಲ ಎಂದಲ್ಲ. ಇತರರಿಗೂ ಕೃಷಿಗೆ ಸ್ಫೂರ್ತಿಯಾಗಲಿ ಎಂಬ ಉದ್ದೇಶವಿದೆ ಎಂದರು.


ಇನ್ನೊಬ್ಬರಿಗೆ ಗುಲಾಮರಾಗಿ ಹೋಗುವುದಕ್ಕಿಂತ ಕೃಷಿ ಭೂಮಿಯಿದ್ದಾಗ ಹೊಲದಲ್ಲಿ ಒಡೆಯನಾಗಿ ದುಡಿಯುವುದೇ ಪುಣ್ಯ. ಕೋವಿಡ್ ಸಾಕಷ್ಟು ಪಾಠ ಕಲಿಸಿದೆ, ಯುವಕರ ಉತ್ಸಾಹ ಕೃಷಿ ಉದ್ಯಮ ರೈತೋದ್ಯಮವಾಗಬೇಕು. ಸಮಗ್ರ ಕೃಷಿಯತ್ತ ಆಹಾರ ಸಂಸ್ಕರಣೆಯಾಗಬೇಕು. ಆತ್ಮನಿರ್ಭರ್ ಯೋಜನೆಯಡಿ ಅನುದಾನವನ್ನು  ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಘಗಳು ಆಹಾರ ಸಂಸ್ಕರಣಾ ಘಟಕ ಮಾಡಿದರೆ, ಅವುಗಳಿಗೆ ಸರ್ಕಾರ ಅನುದಾನದ ಸಹಕಾರ ನೀಡುತ್ತದೆ. ಮಧ್ಯವರ್ತಿಗಳನ್ನು ಬಿಟ್ಟು ರೈತ ಯುವಕರು ನೇರ ಮಾರ್ಕೆಟಿಂಗ್ ಮಾಡಬೇಕು. ಬರೀ ಬೆಳೆ ಬೆಳೆದರೆ ಸಾಲದು.ನಮ್ಮ ಬೆಳೆಗೆ ನಾವೇ ಮಾರ್ಕೆಟಿಂಗ್ ಮಾಡಬೇಕು ಎಂದು ಬಿ.ಸಿ ಪಾಟೀಲ್ ಸಲಹೆ ನೀಡಿದರು.

Related posts

‘ಯೌವನ, ಹಣ, ಅಧಿಕಾರ ಒಂದೆಡೆ ಸೇರಬಾರದು; ಅದು ಅಪಾಯ’: ಡಿಕೆಶಿ

‘ಯೌವನ, ಹಣ, ಅಧಿಕಾರ ಒಂದೆಡೆ ಸೇರಬಾರದು; ಅದು ಅಪಾಯ’: ಡಿಕೆಶಿ

August 19, 2026
ರಾಜ್ಯಪಾಲರಿಗೆ ಹೈಕೋರ್ಟ್ ಶಾಕ್: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಆದೇಶ ರದ್ದು, ಮರುನೇಮಕಕ್ಕೆ ಸೂಚನೆ!

ರಾಜ್ಯಪಾಲರಿಗೆ ಹೈಕೋರ್ಟ್ ಶಾಕ್: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಆದೇಶ ರದ್ದು, ಮರುನೇಮಕಕ್ಕೆ ಸೂಚನೆ!

August 19, 2026

ಮಂಡ್ಯದಲ್ಲಿ ನೀರಾವರಿ ಇದೆ. ಬರೀ ಕಬ್ಬು ಭತ್ತವನ್ನೇ ನೆಚ್ಚಿಕೊಂಡರೆ ಸಾಲದು. ಸಮಗ್ರ ಕೃಷಿಯತ್ತ ಮಂಡ್ಯದ ರೈತರು ಮುಂದಾಗಬೇಕು. ಭತ್ತದ ಜೊತೆ ಇತರೆ ಕೃಷಿಯನ್ನು ಮಾಡಬೇಕು. ಮಿಶ್ರಬೆಳೆ ಬೆಳೆಯಬೇಕು. ನೀರೇ ಬರದ ಕೋಲಾರದಲ್ಲಿ ಸಮಗ್ರ ಕೃಷಿ ಅಳವಡಿಸಿ ನೇರ ಮಾರ್ಕೆಟಿಂಗ್ ಮಾಡಿ ನಾವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. ಅದರಂತೆ ಮಂಡ್ಯದವರು ಆತ್ಮವಿಶ್ವಾಸಿಗಳಾಗಬೇಕು. ವಾಣಿಜ್ಯ ಬೆಳೆ, ಸಾವಯವ ಬೆಳೆ, ದ್ವಿದಳ ಧಾನ್ಯ ಸಮಗ್ರ ಕೃಷಿಯನ್ನು ಮಂಡ್ಯ ರೈತರು ಮಾಡಲಿ ಎಂದು ಬಿ.ಸಿ.ಪಾಟೀಲ್ ರೈತರಿಗೆ ಕಿವಿಮಾತು ಹೇಳಿದರು.
ನನ್ನ ಜನ್ಮದಿನವನ್ನು ರೈತರೊಂದಿಗೆ ಕಳೆಯಬೇಕೆಂದು ತೀರ್ಮಾನಿಸಿ ರೈತರೊಂದಿಗೊಂದು ದಿನ ಆರಂಭಿಸಿದೆ.  ಯಾವ ಜನ್ಮದ ಪುಣ್ಯವೋ, ಕೆ.ಆರ್.ಪೇಟೆಯಲ್ಲಿ ಸಾಕಷ್ಟು ಪ್ರೀತಿ ಸಿಕ್ಕಿದೆ. ಮಂಡ್ಯ ಜನರ ಪ್ರೀತಿ ಮರೆಯಲು ಸಾಧ್ಯವೇ ಇಲ್ಲ ಎಂದು ಸಂತಸ ವ್ತಕ್ತಪಡಿಸಿದರು.

day with farmres
ನನಗೂ ಮಂಡ್ಯಕ್ಕೂ ಅವಿನಾಭಾವ ನಂಟಿದೆ. 1999ರಲ್ಲಿ ಬಂದ ಕೌರವ ಚಿತ್ರ ಮಂಡ್ಯದಿಂದ ಆರಂಭವಾಗಿತ್ತು. ಯಡಿಯೂರಪ್ಪ ಹುಟ್ಟಿದ ತಾಲೂಕು ಕೆ.ಆರ್.ಪೇಟೆ. ಯಡಿಯೂರಪ್ಪ ಅವರ ಕನಸನ್ನು ನನಸು ಮಾಡಲು ನಾನು ನಾರಾಯಣಗೌಡ ಪ್ರಯತ್ನಿಸಿ ದುಡಿಯುತ್ತಿದ್ದೇವೆ ಎಂದರು.
ಬೇರೆ ಉದ್ಯಮಗಳಂತೆ ರೈತ ವರ್ಕ್ ಫ್ರಮ್ ಹೋಮ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಲಾಕ್‍ಡೌನ್ ಸಂಕಷ್ಟದಲ್ಲಿ ರೈತನ ಸಂಕಷ್ಟವನ್ನು ಅರಿತು ನನ್ನೊಂದಿಗೆ ನಾರಾಯಣಗೌಡ ಶ್ರಮಿಸಿದ್ದಾರೆ. ಕೃಷಿ ಎಲ್ಲಾ ಕ್ಷೇತ್ರಗಳಿಗಿಂತಲೂ ಹೆಚ್ಚು ಪ್ರಮುಖವಾಗಿದೆ. ಎಂದಿಗೂ ನಿಲ್ಲಿಸದ ಕಾಯಕ ಕೃಷಿ. ಲಾಕ್‍ಡೌನ್ ವೇಳೆ ಕೃಷಿಕರಿಗೆ ನಿಬರ್ಂಧ ಹಾಕಿದ್ದರೆ ಇಂದಿಗೆ ತಿನ್ನಲು ಅನ್ನ ಸಿಗುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರ ಬಿತ್ತನೆ ಹೆಚ್ಚಾಗಿದೆ. ಯಡಿಯೂರಪ್ಪ ಕಾಲ್ಗುಣದಿಂದ ಹೆಚ್ಚು ಮಳೆಯಾಗಿದೆ. ಈ ಬಾರಿ ಶೇ.106ಕ್ಕೂ ಹೆಚ್ಷು ಬಿತ್ತನೆಯಾಗಿದೆ ಎಂದು ಬಿ.ಸಿ.ಪಾಟೀಲ್ ವಿವರ ನೀಡಿದರು.
ಕಿತ್ತೂರು ರಾಣಿ ಚೆನ್ನಮ್ಮನಂತೆ ರೈತ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಸ್ಫೂರ್ತಿಯಾಗಬೇಕು.ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಬೇಕು. ರಾಜ್ಯದಲ್ಲಿ ಸದ್ಯ ಒಟ್ಟು 242 ಮಣ್ಣಿನ ಪರೀಕ್ಷಾ ಕೇಂದ್ರಳಿವೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗೊಂದು ಮಣ್ಣು ಪರೀಕ್ಷಾ ಕೇಂದ್ರ ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದರು.


ಯಾವುದೇ ಸಾಫ್ಟವೇರ್ ಆಗಲೀ ಅಥವಾ ನಗರದಲ್ಲಿ ಇರುವವರಾಗಲೀ ವೀಕೆಂಡ್ ಅಗ್ರಿಕಲ್ಚರ್ ಫ್ಯಾಷನ್ ಆರಂಭಿಸಿ. ಕೃಷಿಯತ್ತ ಆಕರ್ಷಕ ಹವ್ಯಾಸ ಮೂಡಿಸಿಕೊಳ್ಳಬೇಕೆಂದರು. ವೈಜ್ಞಾನಿಕ ಪದ್ಧತಿ, ತಂತ್ರಜ್ಞಾನ ಅಳವಡಿಸಿ ಹನಿ ನೀರಾವರಿ ಸಮಗ್ರ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಎಲ್ಲರೂ ಜೈ ಕಿಸಾನ್ ಎನ್ನುವಂತಾಗಲಿ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಹೋಬಳಿಯಲ್ಲಿ ರೈತರಿಗೊಂದು ದಿನ
ರೈತರೊಂದಿಗೊಂದು ದಿನ ನನ್ನ ಮತಕ್ಷೇತ್ರ ಕೆ.ಆರ್.ಪೇಟೆಯಿಂದಲೇ ಕೃಷಿ ಸಚಿವರು ಆರಂಭಿಸಿರುವುದು ಖುಷಿಯ ವಿಚಾರ. ಬಿ.ಸಿ.ಪಾಟೀಲರು ಸದಾ ಮೆಚ್ಚುವಂತಹ ತೀರ್ಮಾನವನ್ನೇ ಕೈಗೊಳ್ಳುತ್ತಾರೆ ಎಂದು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಪ್ರಗತಿಪರ ರೈತ ಮಹಿಳೆ ಲಕ್ಷ್ಮಿದೇವಮ್ಮ ಜಿಲ್ಲೆಯಲ್ಲಿ ಸಮಗ್ರ ಕೃಷಿ ಮಾಡಿ ಮಾದರಿಯಾಗಿದ್ದಾರೆ. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳು ಸಿಕ್ಕೇ ಸಿಗಲಿವೆ. ಆದರೆ ಅದನ್ನೇ ನೆಚ್ಚಿಕೊಂಡು ಪ್ರಯತ್ನ ಮಾಡುವುದನ್ನು ಬಿಡಬಾರದು. ಲಾಕ್‍ಡೌನ್ ಸಂದರ್ಭದಲ್ಲಿ ತರಕಾರಿ ಮಾರಾಟ ಸಾಗಾಣೆಗೆ ತೊಂದರೆಯಾಗದಂತೆ ನೋಡಿಕೊಂಡೆ. ತರಕಾರಿ ರಫ್ತು ಬರೀ ಎಂಟು ತಿಂಗಳಿನಲ್ಲಿ ಶೇ.2.5 ರಿಂದ 5.5ಕ್ಕೆ ಏರಿದೆ.
ಬಿ.ಸಿ ಪಾಟೀಲ್ ಅವರು ಲಾಕ್‍ಡೌನ್ ಸಂದರ್ಭದಲ್ಲಿ ದುಡಿದು ಸರ್ಕಾರಕ್ಕೆ ರೈತರಿಗೆ ಶಕ್ತಿತಂದಿದ್ದಾರೆ. ನಮ್ಮದು ಮಳೆ ಬಿಸಿಲಿನ ಕೆಲಸ. ಅಧಿಕಾರಿಗಳು ಬಹಳ ಉತ್ಸುಕರಾಗಿ ಕೆಲಸ ಮಾಡುತ್ತಿರುವುದು ಮೆಚ್ಚುಗೆ ವಿಷಯ. ತೋಟಗಾರಿಕೆ ಮತ್ತು ಕೃಷಿ ಅಣ್ಣ-ತಮ್ಮ ಇಲಾಖೆಗಳಿದ್ದಂತೆ. ಮುಖ್ಯಮಂತ್ರಿಗಳ ಹೋಬಳಿಯಲ್ಲಿ ರೈತರಿಗೊಂದು ದಿನ ಕಾರ್ಯಕ್ರಮ ಮಾಡಿದ್ದು ಸಂತಸ ತಂದಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ರೈತರು ಹಾಗೂ ಕುಟುಂಬಸ್ಥರೊಡನೆ ಕೇಕ್ ಕತ್ತರಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ 65ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಕೃಷಿ ಸಾಧಕಿ ವಿತಾ ಮಿಶ್ರಾ ಅವರನ್ನು ಸನ್ಮಾನಿಸಲಾಯಿತು. ಕೃಷಿ ನಿರ್ದೇಶಕ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.
ಶಾಸಕ ಶ್ರೀನಿವಾಸ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ರಾಜೇಂದ್ರ ಪ್ರಸಾದ್, ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್, ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್, ತೋಟಗಾರಿಕಾ ನಿರ್ದೇಶಕ ವೆಂಕಟೇಶ್, ರಾಜ್ಯದ ಎಲ್ಲಾ ಜಂಟಿ ನಿರ್ದೇಶಕರು ಜಿ.ಪಂ.ಅಧ್ಯಕ್ಷೆ ನಾಗರತ್ನ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: AgricultureB C PatilBirthdayc patilfarmers dayHorticulturemandya. b
ShareTweetSendShare
Join us on:

Related Posts

‘ಯೌವನ, ಹಣ, ಅಧಿಕಾರ ಒಂದೆಡೆ ಸೇರಬಾರದು; ಅದು ಅಪಾಯ’: ಡಿಕೆಶಿ

‘ಯೌವನ, ಹಣ, ಅಧಿಕಾರ ಒಂದೆಡೆ ಸೇರಬಾರದು; ಅದು ಅಪಾಯ’: ಡಿಕೆಶಿ

by Shwetha
August 19, 2026
0

ವಿಧಾನಸಭೆಯಲ್ಲಿ ಉಪಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ, ರಾಜಕೀಯ ಹಾಗೂ ಬೆಂಗಳೂರಿನ ಅಭಿವೃದ್ಧಿ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಯೌವನ, ಹಣ...

ರಾಜ್ಯಪಾಲರಿಗೆ ಹೈಕೋರ್ಟ್ ಶಾಕ್: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಆದೇಶ ರದ್ದು, ಮರುನೇಮಕಕ್ಕೆ ಸೂಚನೆ!

ರಾಜ್ಯಪಾಲರಿಗೆ ಹೈಕೋರ್ಟ್ ಶಾಕ್: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಆದೇಶ ರದ್ದು, ಮರುನೇಮಕಕ್ಕೆ ಸೂಚನೆ!

by Shwetha
August 19, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ,...

ಸಿಐಡಿ ಕ್ಲೀನ್ ಚಿಟ್ ಕೊಟ್ಟಿದೆ, ಬಿ ನಾಗೇಂದ್ರ ಸಂಪುಟ ಸೇರ್ಪಡೆ ಸಮರ್ಥಿಸಿಕೊಂಡ ಗೃಹ ಸಚಿವರು : 52 ವರ್ಷ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದವರು ನಮಗೆ ದೇಶಪ್ರೇಮದ ಪಾಠ ಮಾಡಬೇಕಿಲ್ಲ-ಪ್ರಿಯಾಂಕ್ ಖರ್ಗೆ

ಸಿಐಡಿ ಕ್ಲೀನ್ ಚಿಟ್ ಕೊಟ್ಟಿದೆ, ಬಿ ನಾಗೇಂದ್ರ ಸಂಪುಟ ಸೇರ್ಪಡೆ ಸಮರ್ಥಿಸಿಕೊಂಡ ಗೃಹ ಸಚಿವರು : 52 ವರ್ಷ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದವರು ನಮಗೆ ದೇಶಪ್ರೇಮದ ಪಾಠ ಮಾಡಬೇಕಿಲ್ಲ-ಪ್ರಿಯಾಂಕ್ ಖರ್ಗೆ

by Shwetha
August 19, 2026
0

ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದಲ್ಲಿ ಸಿಐಡಿ ತನಿಖೆಯಿಂದ ಕ್ಲೀನ್‌ಚಿಟ್ ಸಿಕ್ಕಿರುವ ಹಿನ್ನೆಲೆಯಲ್ಲಿಯೇ ಅವರನ್ನು ಮತ್ತೆ ರಾಜ್ಯ ಸಚಿವ...

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

by Shwetha
August 19, 2026
0

ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಅನ್ನು ಸಂಪೂರ್ಣವಾಗಿ ಹಾಡುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್...

ನಾನು ಮೊದಲ ಬಾರಿ ಶಾಸಕನಾದಾಗ ಅಮಿತ್ ಷಾ ಇನ್ನೂ ಮಗು, ನನಗೆ ದೇಶಭಕ್ತಿ ಪಾಠ ಮಾಡ್ತಾರಾ: ಖರ್ಗೆ ಗರಂ, ಸೋನಿಯಾ ಗಾಂಧಿ ನಿಂದಿಸಿದ ಬಿಜೆಪಿಗೆ ಖಾರವಾದ ತಿರುಗೇಟು

ನಾನು ಮೊದಲ ಬಾರಿ ಶಾಸಕನಾದಾಗ ಅಮಿತ್ ಷಾ ಇನ್ನೂ ಮಗು, ನನಗೆ ದೇಶಭಕ್ತಿ ಪಾಠ ಮಾಡ್ತಾರಾ: ಖರ್ಗೆ ಗರಂ, ಸೋನಿಯಾ ಗಾಂಧಿ ನಿಂದಿಸಿದ ಬಿಜೆಪಿಗೆ ಖಾರವಾದ ತಿರುಗೇಟು

by Shwetha
August 19, 2026
0

ಪಣಜಿ : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಅಪಮಾನ ಮಾಡಿದ್ದಾರೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram