ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಖಡಕ್ ವಾರ್ನಿಂಗ್
ಮುಂಬೈ : ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾಗೂ ಇಂಗ್ಲೆಂಡ್ ಪ್ರವಾಸ ಸಂಬಂಧ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಖಡಕ್ ವಾರ್ನಿಂಗ್ ವೊಂದು ನೀಡಿದೆ. ಆಟಗಾರರು ಕೊರೋನಾ ನಿರ್ಲಕ್ಷಿಸದಂತೆ ನಿಬರ್ಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಬಿಸಿಸಿಐ ಬ್ರಿಟನ್ ವಿಮಾನ ಏರುವ ಮೊದಲು ಯಾರಿಗಾದರೂ ಪಾಸಿಟಿವ್ ದೃಢಪಟ್ಟರೆ, ಅವರನ್ನು ಇಡೀ ಸರಣಿಯಿಂದ ದೂರ ಇರಿಸಲಾಗುವುದು ಎಂದು ಎಚ್ಚರಿಸಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಇಂಗ್ಲೆಂಡ್ ವಿರುದ್ಧದ ಸುದೀರ್ಘ ಸರಣಿಗಾಗಿ ಬಿಸಿಸಿಐ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದೆ. ಐಪಿಎಲ್ ಅರ್ಧದಲ್ಲೇ ಸ್ಥಗಿತಗೊಂಡಿರುವ ಕಾರಣ ಪ್ರಸ್ತುತ ಎಲ್ಲಾ ಆಟಗಾರರು ತಮ್ಮ ಮನೆಗಳಲ್ಲಿದ್ದಾರೆ. ಇಂಗ್ಲೆಂಡ್ ಟೂರ್ನಿಗಾಗಿ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ವಿಶೇಷ ವಿಮಾನದಲ್ಲಿ ಬ್ರಿಟನ್ಗೆ ಹಾರಲಿದೆ. ಅದಕ್ಕೂ ಮುನ್ನ ಮುಂಬೈಗೆ ಆಗಮಿಸುವ ಭಾರತದ ಆಟಗಾರರು, 14 ದಿನಗಳ ಕ್ವಾರಂಟೈನ್ಗೆ ಒಳಗಾಗುತ್ತಾರೆ. ನಂತರ ಆಟಗಾರರು ವಿಮಾನ ಏರಲಿದ್ದಾರೆ.
ಮುಂಬೈ ಆಗಮಿಸಿದ ಆಟಗಾರರಿಗೆ ಎರಡು ಬಾರಿ ಆರ್ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಯಾರಿಗಾದರೂ ಪಾಸಿಟಿವ್ ಬಂದರೆ ಅವರು ಭಾರತದಲ್ಲಿಯೇ ಉಳಿಯಬೇಕಾಗುತ್ತದೆ. ಚೇತರಿಕೆಯ ಬ್ರಿಟನ್ಗ ತೆರಳಲು ಚಾರ್ಟರ್ ವಿಮಾನಗಳ ವ್ಯವಸ್ಥೆ ಮಾಡುವುದಿಲ್ಲ ಎಂದು ಬಿಸಿಸಿಐ ಕಡ್ಡಿಮುರಿದಂತೆ ಹೇಳಿದೆ.
ಈ ಹಿನ್ನೆಲೆ ಸದ್ಯ ತಂಡಕ್ಕೆ ಆಯ್ಕೆ ಆಗಿರುವ ಆಟಗಾರರು ಮುಂಬೈ ತಲುಪುವವರೆಗೂ ಎಲ್ಲಿಗೂ ತೆರಳದೆ, ಮನೆಯಲ್ಲಿಯೇ ಇರಬೇಕೆಂದು ಟೀಮ್ ಇಂಡಿಯಾ ಫಿಸಿಯೋ ಯೋಗೇಶ್ ಪಾಮರ್ ಸೂಚಿಸಿದ್ದಾರೆ.