“ಬೇಡ್ತಿ ನದಿ ನೀರು ಜೋಡಣೆ ಅವೈಜ್ಞಾನಿಕ”
ಶಿರಸಿ : ಬೇಡ್ತಿ ನದಿ ನೀರನ್ನ ವರದಾ ನದಿ ಜೋಡಣೆ ಅವೈಜ್ಞಾನಿಕವಾಗಿದ್ದು, ಇದನ್ನ ಸರ್ಕಾರ ಮತ್ತೊಮ್ಮೆ ಪುನರ್ ವಿಮರ್ಶೆ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಬಯಲು ಸೀಮೆ ಜನತೆಗೆ ಕುಡಿಯುವ ನೀರು ನೀಡಬಾರದು ಎಂಬುದು ನಮ್ಮ ಉದ್ದೇಶವಲ್ಲ. ಆದ್ರೆ ಬೇಡ್ತಿ ನದಿ ಜೋಡನೆ ವೈಜ್ಞಾನಿಕವಾದದ್ದಲ್ಲ.
ಬೇಡ್ತಿ ನದಿಯಲ್ಲಿ ಈಗಲೇ ನೀರಿಲ್ಲದ ಸ್ಥಿತಿ ಇದೆ. ಈ ಸಂದರ್ಭದಲ್ಲಿ ನದಿ ಜೋಡನೆ ಸರಿಯಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಬಯಲು ಸೀಮೆಗೆ ನೀರು ಕೊಡಲು ನಮ್ಮ ವಿರೋಧ ಇಲ್ಲ. ಆದ್ರೆ ಯೋಜನೆ ಅನುಷ್ಠಾನಕ್ಕೆ ವೈಜ್ಞಾನಿಕವಾಗಿ ಚಿಂತಿಸಿ ಮುಂದೂಡಬೇಕು.
ಬಯಲು ಸೀಮೆಯಲ್ಲಿ ಹಸಿರೀಕರಣ, ಮಳೆ ಕೊಯ್ಲಿಗೆ ಒತ್ತು ನೀಡಿದರೇ ಅಲ್ಲಿಯ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ.
ಅಲ್ಲಿ ಹಸಿರೇ ಇಲ್ಲದಿದ್ದರೇ ನೀರು ಒಯ್ದರೂ ಅದನ್ನ ಉಳಿಸಿಕೊಳ್ಳಲು ಕಷ್ಟ ಎಂದು ಹೇಳಿದರು.