Belagavi : 250 ರೂಪಾಯಿಗಾಗಿ ಜೇವವನ್ನೇ ತೆಗೆದ…
ಕೇವಲ 250 ರೂ. ಗಾಗಿ ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆಯು ಬೆಳಗಾವಿಯ ವೈಭವ ನಗರದ ಸತ್ಯಸಾಯಿ ಕಾಲೋನಿಯಲ್ಲಿ ನಡೆದಿದೆ..
ಬಿಯರ್ ಬಾಟಲ್ ನಿಂದ ಹೊಡೆದು ಹತ್ಯೆ ಮಾಡಲಾಗಿದ್ದು , ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ತರಲು ಕೊಟ್ಟಿದ್ದ ಹಣದಲ್ಲಿ ಉಳಿದ ಚಿಲ್ಲರೆ ಹಣ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ.
ವೈಭವ ನಗರದ ಸತ್ಯ ಸಾಯಿ ಕಾಲೋನಿ ನಿವಾಸಿ ಮಹಮ್ಮದ್ ದಿಲಾಪುಕಾರ ಶೇಖ್ (27) ಕೊಲೆಗೀಡಾಗಿದ ವ್ಯಕ್ತಿಯಾಗಿದ್ದು, ಅದೇ ಕಾಲೋನಿಯ ಉಸ್ಮಾನ್ ಲಾಲ್ಸಾಬ್ ಶೇಖ್ ಕೊಲೆ ಮಾಡಿದ ಆರೋಪಿಯಾಕಿದ್ದಾನೆ.
ಉಸ್ಮಾನ್, ಮಹ್ಮದ್ನಿಗೆ 500 ರೂ. ಹಣ ಕೊಟ್ಟು ಮದ್ಯ ತರುವಂತೆ ತಿಳಿಸಿದ್ದಾನೆ. ಮಹಮ್ಮದ್ 250 ರೂ. ಕೊಟ್ಟು ಮದ್ಯ ತಂದಿದ್ದಾನೆ. ಉಳಿದ 250 ರೂ. ಚಿಲ್ಲರೆ ವಾಪಸ್ ನೀಡದಕ್ಕೆ ಬಿಯರ್ ಬಾಟಲಿಯಿಂದ ಮಹಮ್ಮದ್ನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ…