bellary ಗಣಿ ನಗರಿಯಲ್ಲಿ ಬೆಳ್ಳಂಬೆಳಗ್ಗೆ ಆಟೋ ಡ್ರೈವರ್ ಕೊಲೆ!
ಬಳ್ಳಾರಿ : ಗಣಿ ನಗರಿ ಬಳ್ಳಾರಿಯ ಹೊರವಲಯದಲ್ಲಿ ಬೆಳ್ಳಂ ಬೆಳಿಗ್ಗೆ ನೆತ್ತರು ಹರಿದಿದ್ದು, ಅಂದ್ರಾಳು ಸಮೀಪದ ಕಾಂಟ್ರಾ ಗೇಟ್ ಬಳಿ ಆಟೋ ಡ್ರೈವರ್ ನ ಕೊಲೆಯಾಗಿದೆ.
26 ವರ್ಷದ ಬಳ್ಳಾರಿಯ ಮಿಲ್ಲರ್ ಪೇಟೆ ರಾಂಬಾಬು ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಮೇಶಕುಮಾರ್, ಬ್ರೂಸ್ ಪೇಟೆ ಠಾಣೆಯ ಸಿಪಿಐ ನಾಗರಾಜ ನೇತೃತ್ವದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.