Bellary Police | ಭೂಗತ ಪಾತಕಿಯ ಕ್ರೈಂ & ರೋಮ್ಯಾಂಟಿಕ್ ಸ್ಟೋರಿ
ಜೈಲಿಗೆ ಹೋಗಬೇಕಿದ್ದ ಪಾತಕಿ ಲಾಡ್ಜ್ ನಲ್ಲಿ ಸರಸ
ಪ್ರೇಯಸಿ ಜೊತೆ ಕಾಲ ಕಳೆಯಲು ಬಿಟ್ಟ ಪೊಲೀಸರು
ಧಾರವಾಡದ ಪ್ರಕೃತಿ ರೆಸಿಡೆನ್ಸಿ ಲಾಡ್ಜ್ ನಲ್ಲಿ ಘಟನೆ
ಹುಬ್ಬಳ್ಳಿ – ಧಾರವಾಡ ಪೊಲೀಸರ ಮಿಂಚಿನ ದಾಳಿ
ಖದೀಮರು, ಕಳ್ಳಕಾಕರು, ಪಾತಕಿಗಳಿಗೆ ಬಿಸಿ ಮುಟ್ಟಿಸಬೇಕಿದ್ದ ಪೊಲೀಸರೇ ಕ್ರಿಮಿನಲ್ ಗಳ ಜೊತೆ ಸೇರಿದ್ದಾರೆ.
ಭೂಗತ ಪಾತಕಿ ಬಚ್ಚಾಖಾನ್ ಪ್ರಕರಣದಲ್ಲಿ ಬಳ್ಳಾರಿ ಪೊಲೀಸರು ನಡೆದುಕೊಂಡಿರುವ ರೀತಿಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಅಸಲಿಗೆ ಇಲ್ಲಿ ನಡೆದಿದ್ದು ಏನಂದರೇ ಹಲವು ಪ್ರಕರಣಗಳ ಆರೋಪಿ ಬಚ್ಚಾಖಾನ್ ನನ್ನು ಬಳ್ಳಾರಿ ಪೊಲೀಸರು ಧಾರವಾಡದ ಕೋರ್ಟ್ ಗೆ ಹಾಜರು ಪಡಿಸಿದ್ದರು.
![Bellary Police allowed underworld don to meet his girlfriend in lodge at Dharwad saaksha tv](http://saakshatv.com/wp-content/uploads/2022/08/bellary.jpg)
ಆದ್ರೆ ವಾಪಸ್ ಆಗುವಾಗ ಬಳ್ಳಾರಿಗೆ ಹೋಗದೇ ಧಾರವಾಡದ ಸತ್ತೂರು ಬಡಾವಣೆಲ್ಲಿರುವ ಪ್ರಕೃತಿ ರೆಸಿಡೆನ್ಸಿ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾರೆ.
ಇಲ್ಲಿ ಟ್ವೀಸ್ಟ್ ಏನಂದರೇ ಅದಾಗಲೇ ಅಲ್ಲಿ ಬಚ್ಚಾಖಾನ್ ಗಾಗಿ ಪ್ರೇಯಸಿ ಕಾಯುತ್ತಿದ್ದಳು. ಇತ್ತ ಬಚ್ಚಾಖಾನ್ ಪ್ರೇಯಸಿಯೊಂದಿಗೆ ಕಾಲ ಕಳೆಯುತ್ತಿದ್ದಂತೆ ಹುಬ್ಬಳ್ಳಿ – ಧಾರವಾಡ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.
ಕೂಡಲೇ ಬಚ್ಚಾಖಾನ್ ನನ್ನು ವಶಕ್ಕೆ ಪಡೆದ ಪೊಲೀಸರು ವಿದ್ಯಾಗಿರಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇತ್ತ ಬಚ್ಚಾಖಾನ್ ನನ್ನು ಬಳ್ಳಾರಿ ಜೈಲಿನಿಂದ ಕರೆದುಕೊಂಡು ಬಂದಿದ್ದ ಐವರು ಪೊಲೀಸ್ ಸಿಬ್ಬಂದಿ ಮೇಲೂ ಕ್ರಮ ತೆಗೆದುಕೊಳ್ಳಲಾಗಿದೆ. ಬಚ್ಚಾಖಾನ್ ಬಳಿ ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.