Saturday, August 13, 2022
  • Home
  • About Us
  • Contact Us
  • Privacy Policy
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • Life Style
  • More
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

Bengaluru : ಉದ್ಯೋಗ ಕಳೆದುಕೊಂಡವರಲ್ಲಿ ಉದ್ಯೋಗ ಪಡೆಯುವ ಆತ್ಮವಿಶ್ವಾಸ ನೀಡಿದ ಗುರುದಕ್ಷಿಣಾ..!!!

Namratha Rao by Namratha Rao
July 8, 2022
in Life Style, Newsbeat, ಜೀವನಶೈಲಿ
0
Bengaluru : ಉದ್ಯೋಗ ಕಳೆದುಕೊಂಡವರಲ್ಲಿ ಉದ್ಯೋಗ ಪಡೆಯುವ ಆತ್ಮವಿಶ್ವಾಸ ನೀಡಿದ ಗುರುದಕ್ಷಿಣಾ..!!!
0
SHARES
0
VIEWS
Share on FacebookShare on TwitterShare on WhatsappShare on Telegram

50 ಕ್ಕೂ ಹೆಚ್ಚು ನಿರುದ್ಯೋಗಿಗಳಲ್ಲಿ ಮತ್ತೊಮ್ಮೆ ಉದ್ಯೋಗ ಪಡೆದುಕೊಳ್ಳುವ ಆತ್ಮವಿಶ್ವಾಸ ಮೂಡಿಸಿದ ರಿಬಾನ್‌ ಗಮ್‌

– ಕಂಪನಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಮಧ್ಯೆ ವೇದಿಕೆ ನಿರ್ಮಾಣ

Related posts

cooking

Cooking : ತೆಂಗಿನ ಹಾಲಿನ ಮೊಟ್ಟೆ ಕರ್ರಿ … ಮನೆಯಲ್ಲೇ ಮಾಡಿ..!!!

August 13, 2022
Har Ghar Tiranga Tiranga procession across the state saaksha tv

Har Ghar Tiranga | ರಾಜ್ಯದಾದ್ಯಂತ ತಿರಂಗಾ ಮೆರವಣಿಗೆ

August 13, 2022

ಬೆಂಗಳೂರು , ಜುಲೈ8 : ಕೋವಿಡ್‌ ಕಾಲದಲ್ಲಿ ಹಾಗೂ ಕೋವಿಡ್‌ ನಂತರ ಉದ್ಯೋಗ ಕಳೆದುಕೊಳ್ಳುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಉದ್ಯೋಗ ಬಿಡುವ ಮಹಿಳೆಯರು ಮತ್ತೊಮ್ಮೆ ಉದ್ಯೋಗ ಪಡೆದುಕೊಳ್ಳುವುದು ಬಹಳ ಕಷ್ಟವೇ ಸರಿ. ಇಂತಹವರು ಮತ್ತೊಮ್ಮೆ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೌಶಲ್ಯ ಹೆಚ್ಚಿಸುವ ಹಾಗೂ ಉತ್ತಮ ತರಬೇತಿ ನೀಡುವ ಉದ್ದೇಶದ ಗುರುದಕ್ಷಿಣಾ – 11 ರೂಪಾಯಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಕೇವಲ 11 ರೂಪಾಯಿಗಳ ಗುರುದಕ್ಷಿಣೆಯನ್ನು ಪಡೆದುಕೊಳ್ಳುವ ಮೂಲಕ ಉದ್ಯೋಗ ಕಳೆದುಕೊಂಡಿರುವವರಿಗೆ ಮರು ಉದ್ಯೋಗ ಪಡೆದುಕೊಳ್ಳುವತ್ತ ಹಾಗೂ ಕಾರ್ಪೋರೇಟ್‌ ಕೌಶಲ್ಯಗಳನ್ನು ಕಲಿಸಿಕೊಡುವ ಉದ್ದೇಶ ನಮ್ಮದಾಗಿದೆ. ಇಂದು 50 ಕ್ಕೂ ಹೆಚ್ಚು ಜನರಿಗೆ ನಾವು ನಮ್ಮ ಸಂಸ್ಥೆಯಾದ ರಿಬ್‌ಆನ್‌ ಗಮ್‌ ಮೂಲಕ ಉತ್ತಮ ತರಬೇತಿಯನ್ನು ನೀಡಿದ್ದೇವೆ. ಇದರಲ್ಲಿ ಕಳೆದ ಐದಾರು ತಿಂಗಳಿನಿಂದಲೂ ಹೆಚ್ಚು ಸಮಯದಿಂದ ಉದ್ಯೋಗ ಕಳೆದುಕೊಂಡು ಉದ್ಯೋಗ ಹುಡುಕುತ್ತಿದ್ದವರು ಪಾಲ್ಗೊಂಡು ತರಬೇತಿಯ ಪ್ರಯೋಜನ ಪಡೆದುಕೊಂಡಿದ್ದು ಸಂತಸ ತಂದಿತು. ಅಲ್ಲದೇ, ಉದ್ಯೋಗ ನೀಡುವಂತಹ ಕಂಪನಿಗಳು ಇಲ್ಲಿದ್ದು ತಮಗೆ ಬೇಕಾದ ಕೌಶಲ್ಯ ಹಾಗೂ ಅರ್ಹತೆ ಹೊಂದಿರುವ ಉದ್ಯೋಗಿಗಳನ್ನು ಆಯ್ಕೆ ಮಾಡಿದ್ದು ವಿಶೇಷವಾಗಿತ್ತು. ಎಂದು ರಿಬ್‌ಆನ್‌ ಗಮ್‌ ಸಂಸ್ಥೆಯ ಸಂಸ್ಥಾಪಕರಾದ ಕೃಷ್ಣಾ ಭಾಕಾರ್‌ ತಿಳಿಸಿದರು.

ರಿಬ್‌ಆನ್‌ ಗಮ್‌ ಸಂಸ್ಥೆಯ ಸಹ ಸಂಸ್ಥಾಪಕರಾದ ಸುಧೀರ್‌ ಉದಯಕಾಂತ್‌ ಮಾತನಾಡಿ, ಉತ್ತಮ ಅರ್ಹತೆ ಮತ್ತು ಕೌಶಲ್ಯ ಹೊಂದಿರುವ ಆದರೆ ಹಲವಾರು ತಿಂಗಳನಿಂದ ಉದ್ಯೋಗ ಕಳೆದುಕೊಂಡಿರುವಂತಹ ಮಾನವ ಸಂಪನ್ಮೂಲಕ್ಕೆ ಪ್ರಾಮುಖ್ಯತೆ ಕೊಡುವುದು ನಮ್ಮ ಉದ್ದೇಶವಾಗಿದೆ. ಒಬ್ಬ ವ್ಯಕ್ತಿ ಉದ್ಯೋಗ ಕಳೆದುಕೊಂಡ ನಂತರ ಎರಡು ಮೂರು ತಿಂಗಳುಗಳ ಕಾಲ ಉದ್ಯೋಗ ಹುಡುವುದು ಬಹಳ ಶ್ರಮದಾಯಕ ಸಂಗತಿಯಾಗಿ ಬಿಡುತ್ತದೆ. ಇದರಿಂದ ಅವರು ಉದ್ಯೋಗ ಹುಡುಕುವ ಆಸಕ್ತಿಯನ್ನು ಕಳೆದುಕೊಂಡು ಸಣ್ಣ ನಗರಗಳಿಗೆ ವಲಸೆ ಹೋಗುತ್ತಾರೆ. ಆದರೆ, ಒಮ್ಮೆ ಕಣ್ಣಿನಿಂದ ಮರೆಯಾದ ನಂತರ ಅವರ ಬಗ್ಗೆಯೂ ಮರೆತು ಹೋಗುವ ರೀತಿಯಲ್ಲಿ ಹಾಗೂ 6 ತಿಂಗಳ ನಂತರ ಹೊಸ ಉದ್ಯೋಗ ಪಡೆದುಕೊಳ್ಳುವುದು ಬಹಳ ಕಷ್ಟವಾಗಿ ಪರಿಣಮಿಸುತ್ತದೆ. ನಮ್ಮ ಉದ್ಯೋಗ ನೀಡುವ ಸಂಸ್ಥೆಗಳೂ ಕೂಡಾ ಉದ್ಯೋಗದಲ್ಲಿರುವ ವ್ಯಕ್ತಿಗಳಿಗೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಯೋಗ ಕಳೆದುಕೊಂಡು ತೊಂದರೆ ಅನುಭವಿಸುತ್ತಿರುವ ಜನರಿಗೆ ಉತ್ತಮ ಉದ್ಯೋಗಾವಕಾಶ ಪಡೆದುಕೊಳ್ಳುವಲ್ಲಿ ಸಹಾಯ ಮಾಡುವುದು ನಮ್ಮ ಗುರಿಯಾಗಿದೆ. ಕೇವಲ 11 ರೂಪಾಯಿಗಳ ಗುರುದಕ್ಷೀಣಿ ಪಡೆದುಕೊಳ್ಳುವ ಮೂಲಕ ಇಂದಿನ ಕಾರ್ಪೋರೇಟ್‌ ಅಗತ್ಯದ ತರಬೇತಿಯನ್ನು ನೀಡುತ್ತಿದ್ದೇವೆ. ಈ ಮೂಲಕ ಉದ್ಯೋಗ ದೊರಕಿಸಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದರು.

ತರಬೇತಿಯಲ್ಲಿ ಭಾಗವಹಿಸಿದ್ದ ಸ್ಮಿತಾ ಮಾತನಾಡಿ, ಕಳೆದ 8 ತಿಂಗಳ ಹಿಂದೆ ನನ್ನ ವೈಯಕ್ತಿಯ ಕಾರಣಕ್ಕಾಗಿ ಉದ್ಯೋಗವನ್ನು ತೊರೆದಿದ್ದೆ. ಆ ನಂತರ ಉದ್ಯೋಗಾವಕಾಶವನ್ನು ಹುಡುಕುವುದು ಬಹಳ ಕಷ್ಟಕರ ಸಂಗತಿಯಾಗಿ ಪರಿಣಮಿಸಿತ್ತು. ಇಂದು ರಿಬ್‌ಆನ್‌ ಗಮ್‌ ಸಂಸ್ಥೆ ನಡೆಸಿದ ತರಬೇತಿಯಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಈಗಾಗಲೇ ಇಲ್ಲಿರುವ ಹಲವಾರು ಸಂಸ್ಥೇಗಳ ಜೊತೆ ಸಂದರ್ಶನ ನಡೆಸಿದ್ದು ಮತ್ತೊಮ್ಮೆ ಉದ್ಯೋಗಿಯಾಗುವ ನಿರೀಕ್ಷೆಯಿದೆ ಎಂದರು.

Tags: bengaluruEMPLOYMENTGurudakshinaJobsunemployment
ShareTweetSendShare

Related Posts

cooking

Cooking : ತೆಂಗಿನ ಹಾಲಿನ ಮೊಟ್ಟೆ ಕರ್ರಿ … ಮನೆಯಲ್ಲೇ ಮಾಡಿ..!!!

by Namratha Rao
August 13, 2022
0

ತೆಂಗಿನ ಹಾಲಿನ ಮೊಟ್ಟೆ ಕರ್ರಿ ... ಮನೆಯಲ್ಲೇ ಮಾಡಿ..!!! ದೊಡ್ಡ ಬಾಣಲೆಯಲ್ಲಿ, ತೆಂಗಿನ ಎಣ್ಣೆ  ಅಥವ ನಿಮ್ಮಿಷ್ಟದ ಅಡುಗೆ ಎಣ್ಣೆಯನ್ನ  ಬಿಸಿ ಮಾಡಿ.. ಅದಕ್ಕೆ  ಸಾಸಿವೆ, ದಾಲ್ಚಿನ್ನಿ,...

Har Ghar Tiranga Tiranga procession across the state saaksha tv

Har Ghar Tiranga | ರಾಜ್ಯದಾದ್ಯಂತ ತಿರಂಗಾ ಮೆರವಣಿಗೆ

by Mahesh M Dhandu
August 13, 2022
0

Har Ghar Tiranga | ರಾಜ್ಯದಾದ್ಯಂತ ತಿರಂಗಾ ಮೆರವಣಿಗೆ ಬಾಗಲಕೋಟೆ :  ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ  ಬಾಗಲಕೋಟೆಯ ಬಿವಿವಿ ಸಂಘದಿಂದ ಐದು ನೂರು ಮೀಟರ್...

Budding Actor Arrested For Honeytrap saaksha tv

ಸ್ಯಾಂಡಲ್ವುಡ್ನ ಯುವ ನಟ ಬಂಧನ

by Mahesh M Dhandu
August 13, 2022
0

ಸ್ಯಾಂಡಲ್ವುಡ್ನ ಯುವ ನಟ ಬಂಧನ ಬೆಂಗಳೂರಿನ ಉದ್ಯಮಿಗೆ ಹನಿಟ್ರ್ಯಾಪ್ ಹಲಸೂರ್ ಗೇಟ್ ಪೊಲೀಸರಿಂದ ಬಂಧನ ಯುವರಾಜ್ ಬಂಧಿತ ಯುವ ನಟ ಯುವತಿಯರ ಹೆಸರಲ್ಲಿ ಚಾಟಿಂಗ್ ಬೆಂಗಳೂರು :...

VLC Media Player Ban – ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್

VLC Media Player Ban – ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್

by Naveen Kumar B C
August 13, 2022
0

VLC Media Player Ban - ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್ ದೇಶದ ಅಂತ್ಯಂತ ಜನಪ್ರಿಯ ಮಲ್ಟಿ ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್,  VLC ಪ್ಲೇಯರ್ ನ್ನ...

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

by Mahesh M Dhandu
August 13, 2022
0

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ ಬಜಾರ್, ಬೈ ಟು ಲವ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹು ನಿರೀಕ್ಷಿತ ಸಿನಿಮಾ...

Load More

POPULAR NEWS

  • ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Honey Trap | ನವ್ಯ ಶ್ರೀ ಹನಿಟ್ರ್ಯಾಪ್ ಕೇಸ್ : ರಾಜ್ಯ ಕಾಂಗ್ರೆಸ್ ಗೆ ಮುಜುಗರ

    0 shares
    Share 0 Tweet 0
  • Astrology: ಮಹಾಲಕ್ಷ್ಮಿಯ ಈ ಮಂತ್ರವನ್ನು 108 ಬಾರಿ ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

cooking

Cooking : ತೆಂಗಿನ ಹಾಲಿನ ಮೊಟ್ಟೆ ಕರ್ರಿ … ಮನೆಯಲ್ಲೇ ಮಾಡಿ..!!!

August 13, 2022
Har Ghar Tiranga Tiranga procession across the state saaksha tv

Har Ghar Tiranga | ರಾಜ್ಯದಾದ್ಯಂತ ತಿರಂಗಾ ಮೆರವಣಿಗೆ

August 13, 2022
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Politics
  • News
  • Business
  • Culture
  • National
  • Sports
  • Lifestyle
  • Travel
  • Opinion

© 2022 SaakshaTV - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram