Bengaluru : ಬೆಂಗಳೂರಿನಲ್ಲಿ ಲಿವ್ ಇನ್ ರಿಲೇಷನ್ ಶಿಪ್ ಹತ್ಯಾಕಾಂಡ ಬೆಳಕಿಗೆ
ಶ್ರದ್ಧಾ ಕೊಲೆ ಕೇಸ್ ಕಾವು ಇರುವಾಗಲೇ ಮತ್ತೊಂದು ಲಿವ್ ಇನ್ ರಿಲೇಷನ್ ಶಿಪ್ ಹತ್ಯಾಕಾಂಡ ಬೆಂಗಳೂರಿನಲ್ಲಿ ನಡೆದಿದೆ..
ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಗೆಳತಿಯ ಜೊತೆಗೆ ಗಲಾಟೆಯಾದ ನಂತರ ಆಕೆಯನ್ನ ಕೊಲೆ ಮಾಡಲಾಗಿರುವ ಘಟನೆ ಕಳಾಸಿಪಾಳ್ಯದಲ್ಲಿ ಬೆಳಕಿಗೆ ಬಂದಿದೆ..
ನೇಪಾಳ ಮೂಲದ 23 ವರ್ಷದ ಯುವತಿ ಕೃಷ್ಣ ಕುಮಾರಿ ಕೊಲೆಯಾದ ಯುವತಿಯಾಗಿದ್ದಾಳೆ.. ನೇಪಾಳ ಮೂಲದವನೇ ಆದ 27 ವರ್ಷದ ಸಂತೋಷ್ ದಾಮಿ ಕೊಲೆ ಮಾಡಿದ ಆರೋಪಿ..
ಸ್ಪಾ ಒಂದ್ರಲ್ಲಿ ಕೃಷ್ಣ ಕುಮಾರಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು..
ಸಂತೋಷ್ ಟಿ.ಸಿ ಪಾಳ್ಯದಲ್ಲಿ ಬಾರ್ಬರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ.
ಇಬ್ಬರ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು.. ನಂತರ ಇಬ್ಬರೂ ಸೇರಿ ರಾಮೂರ್ತಿನಗರದ ಟಿಸಿಪಾಳ್ಯದಲ್ಲಿ ಬಾಡಿಗೆ ರೂಮ್ ನಲ್ಲಿ ವಾಸವಿದ್ದರು..
ಇತ್ತೀಚೆಗೆ ಇಬ್ಬರ ನಡುವೆ ಗಲಾಟೆಯಾಗಿದೆ.. ಗಲಾಟೆ ತಾರಕಕ್ಕೇರಿದ್ದು , ಸಂತೋಷ್ ಕೃಷ್ಣಳ ಕೊಲೆಗೈದಿದ್ದಾನೆ.. ಘಟನೆ ಸಂಬಂಧ ರಾಮೂರ್ತಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ..