ಭಾರತ್ ಬಂದ್ | ಕೃಷಿ ಕಾಯ್ದೆಗಳಿಗೆ ಯಾಕಿಷ್ಟು ವಿರೋಧ..?
ನವದೆಹಲಿ : ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿಗಳಿಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಕೃಷಿ ಕಾಯ್ಕೆಗಳನ್ನು ವಾಪಸ್ ತೆಗೆದುಕೊಳ್ಳುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅದರ ಮುಂದುವರೆದ ಭಾಗವಾಗಿ ಇಂದು ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆಕೊಟ್ಟಿದ್ದಾರೆ.
ಹಾಗಾದ್ರೆ ಕೇಂದ್ರದ ಕೃಷಿ ಮಸೂದೆಗಳಿಗೆ ವಿರೋಧ ಯಾಕೆ..?
“ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಪ್ರಚಾರ ಹಾಗೂ ಸೌಲಭ್ಯ ಮಸೂದೆ 2020” : ಈ ಮಸೂದೆ ಪ್ರಕಾರ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು.
ಇದರಲ್ಲಿ ತಪ್ಪೇನಿದೆ.. ಇದು ಈಗಾಗಲೇ ನಡೀತಿದೆ ಅಲ್ವಾ.. ಆದರೂ ವಿರೋಧ ಯಾಕೆ ಅಂತಾ ಯೋಚ್ನೆ ಮಾಡಿದ್ರೆ..
ಈ ಮಸೂದೆ ಎಪಿಎಂಸಿ ವ್ಯವಸ್ಥೆಯನ್ನು ಹಾಳು ಮಾಡುತ್ತೆ. ಇದರಲ್ಲಿ ಎಪಿಎಂಸಿಯಲ್ಲಿ ಕೆಲಸ ಮಾಡೋರು ನಿರುದ್ಯೋಗಿಗಳಾಗುತ್ತಾರೆ ಅನ್ನೋದು ಮಸೂದೆಯನ್ನ ವಿರೋಧಿಸುತ್ತಿರುವವರ ವಾದ.
“ರೈತರ ಸಬಲೀಕರಣ ಮತ್ತು ಸಂರಕ್ಷಣೆ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಮಸೂದೆ 2020” : ಈ ಮಸೂದೆ ರೈತರಿಗೆ ಸಿಗುತ್ತಿರುವ ಬೆಂಬಲ ಬೆಲೆಯನ್ನು ಕಸಿದುಕೊಳ್ಳುತ್ತೆ ಎಂಬೋದು ರೈತರ ವಾದ.
“ಅಗತ್ಯ ಸರಕುಗಳು ತಿದ್ದುಪಡಿ ಮಸೂದೆ 2020” : ಇಲ್ಲಿ ಈರುಳ್ಳಿ, ಆಲುಗಡ್ಡೆ,ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳನ್ನು ಅಗತ್ಯ ಸರಕುಗಳ ಪಟ್ಟಿಯಿಂದ ಕೈಬಿಡಲಾಗಿದೆ.
ಇದರಿಂದ ವ್ಯಾಪಾರಿಗಳು ಕಾಳಸಂತೆಯನ್ನು ಸೃಷ್ಠಿ ಮಾಡ್ತಾರೆ. ಕೃತಕ ಅಭಾವವನ್ನು ನಿರ್ಮಿಸಿ ಬೆಲೆ ಏರಿಕೆ ಮಾಡ್ತಾರೆ. ಮತ್ತು ರೈತರ ಬಳಿ ಖರೀದಿ ಮಾಡುವಾಗ ಕಡಿಮೆ ಬೆಲೆಗೆ ಮಾರುವಂತೆ ಒತ್ತಾಯ ಮಾಡುತ್ತಾರೆ ಎಂಬೋದು ರೈತರ ವಾದ.
ಇನ್ನು ಸದ್ಯ ನಡೆಯುತ್ತಿರೋ ಪ್ರತಿಭಟನೆಯಲ್ಲಿ ವಿರೋಧ ಪಕ್ಷಗಳ ಪಾತ್ರ ಎಂದು ಆಡಳಿತ ವರ್ಗ ಆರೋಪಿಸುತ್ತಿದೆ. ಆದ್ರೆ ರೈತರ ಬಗ್ಗೆ ಮಾತಾಡುವಾಗ ನಾವು ಪಕ್ಷ, ಸಿದ್ಧಾಂತವನ್ನ ಮರೆತು ಮಾತನಾಡಬೇಕು.