Bhatkala Murder : ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ – ಮಲಗಿದ್ದ ಮಗು ಬಚಾವ್…
ಇಡೀ ಉತ್ತರ ಕನ್ನಡ ಬೆಚ್ಚಿ ಬಿದ್ದಂತಹ ಘಟನೆಯಿದು. ಭಟ್ಕಳದ ಹಾಡವಳ್ಳಿಯಲ್ಲಿ ನಿನ್ನೆ ಹಾಡುಹಗಲೇ ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಲಾಗಿದೆ. ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸರು ತನಿಖೆಯನ್ನ ತೀವ್ರಗೊಳಿಸಿ ಮೂರು ತಂಡಗಳನ್ನ ರಚಿಸಲಾಗಿದೆ. ಭಟ್ಕಳ ಡಿವೈಎಸ್ಪಿ, ಸಿಪಿಐ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.
ಹಾಡವಳ್ಳಿ ಗ್ರಾಮದ ಶಂಭು ವೆಂಕಟರಮಣ ಭಟ್ (65) ಅವರ ಪತ್ನಿ ಮಾದೇವಿ (40) ಮಗ ರಾಜೀವ್ (34) ಮತ್ತು ಸೊಸೆ ಕುಸುಮಾ (30) ಹತ್ಯೆಗೀಡಾಗಿದ್ದಾರೆ. ಮನೆಯ ಅಲ್ಲಲ್ಲಿ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಎಲ್ಲೆಲ್ಲೂ ರಕ್ತ ಕಾಣಿಸುತ್ತಿದೆ. ಘಟನೆಯಲ್ಲಿ ಸೊಸೆ ಕುಸುಮಾ ಪುಟ್ಟ ಮಗು ಬಚಾವ್ ಆಗಿದೆ. ಓರ್ವ ಮಗು ಶಾಲೆಗೆ ಹೋಗಿತ್ತು. ಈಗಾಗಿ ಇಬ್ಬರು ಮಕ್ಕಳು ಕುಟುಂಬದಲ್ಲಿ ಬದುಕುಳಿದಿದ್ದಾರೆ.
ಸ್ಥಳಕ್ಕೆ ಭಟ್ಕಳ ಪೊಲೀಸರು ಬಂದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
A gruesome murder of four members of the same family in uttarakannada