ಕ್ರಿಕೆಟ್ ಆಡುತ್ತಿದ್ದ ಮಕ್ಕಳನ್ನ ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಸಚಿವರ ಪುತ್ರ
ಬಿಹಾರದ ಪ್ರವಾಸೋದ್ಯಮ ಸಚಿವ ನಾರಾಯಣ ಪ್ರಸಾದ್ ಅವರ ಪುತ್ರ ಬಬ್ಲು ತಮ್ಮ ಒಡೆತನದ ಜಮೀನಿನಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಭಾನುವಾರ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯ ಹರ್ದಿಯಾ ಕೊರಿಟೋಲಾ ಗ್ರಾಮದಲ್ಲಿ ಬಬ್ಲು ತನ್ನ ಬಂದೂಕಿನಿಂದ ವ್ಯಕ್ತಿಯೊಬ್ಬನಿಗೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮಾಹಿತಿಯ ಪ್ರಕಾರ, ಸಚಿವರ ಮಗ ಗಾಳಿಯಲ್ಲಿ ಗುಂಡು ಹಾರಿಸಿದ ನಂತರ ಉಂಟಾದ ಕಾಲ್ತುಳಿತದಲ್ಲಿ 10 ಮಕ್ಕಳು ಗಾಯಗೊಂಡಿದ್ದಾರೆ.
Champaran: Bihar tourism minister Narayan Prasad's son allegedly opened fire, injured a man. "Kids were playing cricket here; 4-5 people started beating them, hit a man with the butt of a gun & opened fire. One of them was Narayan's (tourism min) son," claims an eyewitness(23.01) pic.twitter.com/UljGmMnVs8
— ANI (@ANI) January 24, 2022
“ಮಕ್ಕಳು ಇಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ನಾಲ್ಕೈದು ಜನರು ಕಾರಿನಲ್ಲಿ ಬಂದು ಥಳಿಸಲು ಪ್ರಾರಂಭಿಸಿದರು. ಮಕ್ಕಳನ್ನು ಥಳಿಸುತ್ತಿದ್ದ ಜನರಲ್ಲಿ ಪ್ರವಾಸೋದ್ಯಮ ಸಚಿವ ನಾರಾಯಣ್ ಅವರ ಮಗನೂ ಇದ್ದ ಎಂದು ಪ್ರತ್ಯಕ್ಷದರ್ಶಿ ವಿಜಯ್ ಕುಮಾರ್ ಹೇಳಿದ್ದಾರೆ.
ಸಚಿವ ನಾರಾಯಣ್ ಅವರ ಪುತ್ರ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಕಾಲ್ತುಳಿತಕ್ಕೆ ಕಾರಣವಾಯಿತು. ಘಟನೆಯಲ್ಲಿ ಒಂದು ಮಗು ಸೇರಿದಂತೆ ಅರ್ಧ ಡಜನ್ ಜನರು ಗಾಯಗೊಂಡಿದ್ದಾರೆ. ಘಟನೆಯ ನಂತರ ಸಚಿವರ ಪುತ್ರ ಬಬ್ಲು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಸಚಿವರ ಪುತ್ರ ಗುಂಡು ಹಾರಿಸಲು ಬಳಸಿದ್ದ ಗನ್ ವಶಪಡಿಸಿಕೊಂಡಿದ್ದಾರೆ.