BJP : ಮೀಸಲಾತಿ ಬಗ್ಗೆ ಸರ್ವಪಕ್ಷ ಸಭೆ ಕರೆದು ತೀರ್ಮಾನ ಮಾಡ್ತೀವಿ – ಸಿಎಂ ಬೊಮ್ಮಾಯಿ
ದೆಹಲಿಯಲ್ಲಿ ಅಮಿತ್ ಷಾ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯವಾಗಿದೆ.. ಸಭೆಯಲ್ಲಿ ಭಾಗಿಯಾಗಿದ್ದ ನಂತರ
ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತಹನಾಡಿದ್ದಾರೆ..
ಇಂದು ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದಿದೆ.. ಹಲವು ವಿಚಾರ ಚರ್ಚೆ ನಡೆದಿದೆ.. ಜನವರಿಯಿಂದ ರಾಜ್ಯದಲ್ಲಿ ನಾಯಕರ ಪ್ರಚಾರ ಆರಂಭವಾಗಲಿದೆ.. ವರಿಷ್ಟರು ರಾಜ್ಯಕ್ಕೆ ಬರುವ ಬಗ್ಗೆ ಚರ್ಚೆ ನಡೆದಿದೆ.. ಮೀಸಲಾತಿ ಬಗ್ಗೆ ಚರ್ಚೆ ನಡೆದಿದೆ.. ಯಾರ್ಯಾರಿಗೆ ನ್ಯಾಯ ಕೊಡಲು ಸಾಧ್ಯ ಕೊಡಿ ಎಂದಿದ್ದಾರೆ.. ವಿವರಗಳನ್ನು ನಾನು ಕೊಟ್ಟಿದ್ದೇನೆ.. ನಾನು ಮೀಸಲಾತಿ ನೀಡುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ..
ಕೆಲವರು ಪಕ್ಷಕ್ಕೆ ಬರುವಂತರು ಇದ್ದಾರೆ ಚರ್ಚೆನಡೆದಿದೆ.. ಸಂಘಟನೆ ಬಗ್ಗೆ ಚರ್ಚೆ ನಡೆದಿದೆ ಫಲಪ್ರದವಾಗಿದೆ.. ಡಿಸೆಂಬರ್ 30ಕ್ಕೆ ಅಮಿತ್ ಶಾ ಬರ್ತಾರೆ.. ಮೀಸಲಾತಿ ಬಗ್ಗೆ ಸರ್ಕಾರ ನಿಲುವು ಪ್ರಕಟ ಮಾಡಿಲ್ಲ.. ಮೀಸಲಾತಿ ಬಗ್ಗೆ ಸರ್ವಪಕ್ಷ ಸಭೆ ಕರೆದು ತೀರ್ಮಾನ ಮಾಡ್ತೀವಿ..
ವೈಜ್ಞಾನಿವಾಗಿ ಮೀಸಲಾತಿ ನೀಡುವ ಕುರಿತಂತೆ ಚರ್ಚೆಯಾಗಬೇಕು. ಸಾಮಾಜಿಕ ನ್ಯಾಯ ಮಾನದಂಡ ಮುಂದಿಟ್ಟುಕೊಂಡು ಮಾಡಬೇಕು ಎನ್ನುವುದು ನಮ್ಮ ಪಕ್ಶದ ನಿಲುವು.. ಅದೇ ರೀತಿ ಸರ್ವ ಪಕ್ಷ ಸಭೆ ಕರೆದು ನಾನೇ ಅಲ್ಲಿ ಚರ್ಚೆ ಮಾಡ್ತೀನಿ ಎಂದಿದ್ದಾರೆ..
ಅಲ್ಲದೇ ಸಚಿವ ಸಂಪುಟ ವಿಸ್ತರಣೆ ಸಂಪೂರ್ಣದ ವಿಚಾರದ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಾಗಿದೆ… ಪ್ರಾಂತ್ಯವಾರು ಮತ್ತು ಜಾತಿವಾರು ಸಚಿವರ ಮಾಹಿತಿ ಪಡೆದಿದ್ದಾರೆ.. ಸಂಪುಟ ವಿಸ್ತರಣೆ ಬಗ್ಗೆ ತಿಳಿಸುತ್ತೇ ಎಂದಿದ್ದಾರೆ..