Congress | ಮಕ್ಕಳ ಶಿಕ್ಷಣಕ್ಕೆ ಕರೊನಾಕ್ಕಿಂತ ಬಿಜೆಪಿ ಮಾರಕ
ಬೆಂಗಳೂರು : ಮಕ್ಕಳ ಶಿಕ್ಷಣಕ್ಕೆ ಕರೊನಾಕ್ಕಿಂತ ಬಿಜೆಪಿ ಸರ್ಕಾರವೇ ಹೆಚ್ಚು ಮಾರಕವಾಗಿ ಪರಿಣಮಿಸಿದೆ ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ.
ಶೈಕ್ಷಣಿಕ ವರ್ಷದ ಆರಂಭದಲ್ಲಿ ಅನುದಾನ ಬಿಡುಗಡೆ ಕೆಲಮಟ್ಟಿ ವಿಳಂಬ ಆಗಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, •ಸೈಕಲ್ •ಪಠ್ಯಪುಸ್ತಕ •ವಿದ್ಯಾರ್ಥಿವೇತನ •ಶಿಕ್ಷಕರ ನೇಮಕಾತಿ •ಶೂ, ಸಾಕ್ಸ್ •ಅನುದಾನ. ಈ ಎಲ್ಲಾ ವಿಷಯಗಳಿಗೂ ಶಿಕ್ಷಣ ಸಚಿವರದ್ದು ಒಂದೇ ಡೈಲಾಗ್ “ವಿಳಂಬವಾಗಿದೆ,ಸರಿಪಡಿಸುತ್ತೇವೆ”!40% ಕಮಿಷನ್ ಚೌಕಾಶಿಗಾಗಿ ಈ ವಿಳಂಬವೇ? ಮಕ್ಕಳ ಶಿಕ್ಷಣಕ್ಕೆ ಕರೊನಾಕ್ಕಿಂತ ಬಿಜೆಪಿ ಸರ್ಕಾರವೇ ಹೆಚ್ಚು ಮಾರಕವಾಗಿ ಪರಿಣಮಿಸಿದೆ.
![BJP is more dangerous than Corona for children's education saaksha tv](http://saakshatv.com/wp-content/uploads/2022/07/ca-300x274.jpg)
ಬಡ, ಹಿಂದುಳಿದ ವರ್ಗದ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಬಿಜೆಪಿ ಸರ್ಕಾರದ ಶಿಕ್ಷಣ ವಿರೋಧಿ ನೀತಿ ಮತ್ತೊಮ್ಮೆ ಬಯಲಾಗಿದೆ.ಹಿಜಾಬ್, ಪಠ್ಯ ಪರಿಷ್ಕರಣೆಯಂತಹ ಅಜೆಂಡಾ ಸ್ಥಾಪನೆಯಲ್ಲಿ ಇರುವ ಆಸಕ್ತಿ ಶಿಕ್ಷಣ ನೀಡುವುದರಲ್ಲಿ ಏಕಿಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ? ಹೆಣ್ಣು ಶಿಕ್ಷಿತಳಾಗುವುದು ಇಷ್ಟವಿಲ್ಲವೇ?
ಶಿಕ್ಷಣ ಕ್ಷೇತ್ರಕ್ಕೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನೇ ಒದಗಿಸಲಾಗದ ಶಿಕ್ಷಣ ಸಚಿವರು ಬೂಟಾಟಿಕೆಯ ಅಭಿವೃದ್ಧಿ ಜಪ ಮಾಡುತ್ತಿದ್ದಾರೆ!ಸೈಕಲ್, ಶೂಗಳನ್ನೇ ನೀಡಲಾಗದವರು ಶಾಲೆ ಅಭಿವೃದ್ಧಿ ಮಾಡುವುದು ಕನಸಿನ ಮಾತು. ತುರ್ತಾಗಿ ಆಗಬೇಕಾದ ಶೈಕ್ಷಣಿಕ ಯೋಜನೆಗಳನ್ನು ಬಿಟ್ಟು 40% ಕಮಿಷನ್ ಲೂಟಿಗೆ ಯೋಜನೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದೆ.