BJP | ಸಿದ್ದರಾಮಯ್ಯ ಕಾಂಗ್ರೆಸ್ ಮುಕ್ತ ಕರ್ನಾಟಕದ ನೈಜ ರೂವಾರಿ
ಬೆಂಗಳೂರು : ಸಿದ್ದರಾಮಯ್ಯ ಅವರ ಆತ್ಮಸಾಕ್ಷಿಯ ಮಾತು ಇದೊಂದೆ. ಹೃದಯದಲ್ಲಿ ಇರುವುದು ಮಾತಿನ ರೂಪದಲ್ಲಿ ಹೊರಬಂದಿದೆ. ಇವರೇ ಕಾಂಗ್ರೆಸ್ ಮುಕ್ತ ಕರ್ನಾಟಕದ ನೈಜ ರೂವಾರಿ ಎಂದು ರಾಜ್ಯ ಬಿಜೆಪಿ ಕುಟುಕಿದೆ.

ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ…
2016-17 ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲೂ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ಏಳು ಶಾಸಕರಿಂದ ಅಡ್ಡಮತದಾನ ಮಾಡಿಸಿದ್ದರು. ಆಗ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದ ನೀವು ಈ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದು ಎಷ್ಟು ಸರಿ ಸಿದ್ದರಾಮಯ್ಯ?
ಸಿದ್ದರಾಮಯ್ಯ ಅವರ ಆತ್ಮಸಾಕ್ಷಿಯ ಮಾತು ಇದೊಂದೆ. ಹೃದಯದಲ್ಲಿ ಇರುವುದು ಮಾತಿನ ರೂಪದಲ್ಲಿ ಹೊರಬಂದಿದೆ. ಇವರೇ ಕಾಂಗ್ರೆಸ್ ಮುಕ್ತ ಕರ್ನಾಟಕದ ನೈಜ ರೂವಾರಿ.
ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೇರಾನೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಮತ್ತೊಂದು ಸುತ್ತಿನ ಪಕ್ಷಾಂತರಕ್ಕೆ ಮುನ್ನುಡಿಯೇ?
ಸರಡಗಿ ಸೋಲಿನ ಹಿನ್ನೆಲೆಯಲ್ಲಿ ಸತ್ಯ ಶೋಧನೆ ನಡೆಸಲು ವಿ.ಆರ್. ಸುದರ್ಶನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
ಸಿದ್ದರಾಮಯ್ಯನವರೇ, ಆ ಸತ್ಯಶೋಧನಾ ವರದಿ ಏಕೆ ಬಹಿರಂಗವಾಗಲಿಲ್ಲ?
ನಿಮ್ಮ ಕುದುರೆ ವ್ಯಾಪಾರ ಬಹಿರಂಗವಾಗುತ್ತದೆ ಎಂಬ ಕಾರಣಕ್ಕಾಗಿಯೇ?#ಪಕ್ಷಾಂತರಿಕುದುರೆವ್ಯಾಪಾರಿ
— BJP Karnataka (@BJP4Karnataka) June 11, 2022
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಸುವ ವಿಚಾರದಲ್ಲಿ ಸಿದ್ದರಾಮಯ್ಯ ಅತ್ಯುತ್ತಮ ದಲ್ಲಾಳಿ. ಸಿದ್ದರಾಮಯ್ಯ ಅವರೇ, 2012 ರಲ್ಲಿ ಇಕ್ಬಾಲ್ ಅಹ್ಮದ್ ಸರಡಗಿ ಅವರನ್ನು ಸೋಲಿಸಿ ಬೈರತಿ ಸುರೇಶ್ ಅವರನ್ನು ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಿದ್ದು ನೀವಲ್ಲವೇ?
ಸರಡಗಿ ಸೋಲಿನ ಹಿನ್ನೆಲೆಯಲ್ಲಿ ಸತ್ಯ ಶೋಧನೆ ನಡೆಸಲು ವಿ.ಆರ್. ಸುದರ್ಶನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಿದ್ದರಾಮಯ್ಯನವರೇ, ಆ ಸತ್ಯಶೋಧನಾ ವರದಿ ಏಕೆ ಬಹಿರಂಗವಾಗಲಿಲ್ಲ? ನಿಮ್ಮ ಕುದುರೆ ವ್ಯಾಪಾರ ಬಹಿರಂಗವಾಗುತ್ತದೆ ಎಂಬ ಕಾರಣಕ್ಕಾಗಿಯೇ ಎಂದು ಬಿಜೆಪಿ ಕುಟುಕಿದೆ.
BJP Siddaramaiah Congress is the real master of free Karnataka








