ಮುಂದಿನ ಚುನಾವಣೆಯಲ್ಲಿ ಬಿಜೆಪಿಯದ್ದೇ ಗೆಲುವು : ಹುಲಿಯಾಗೆ ಕೌರವ ಪಂಚ್
ಹಾವೇರಿ : ಬಿಜೆಪಿ ಸಂಸ್ಕೃತಿಯೇ ಬೇರೆ, ಕಾಂಗ್ರೆಸ್ ಸಂಸ್ಕೃತಿನೇ ಬೇರೆ. ಸಿದ್ದರಾಮಯ್ಯ ಬಿಜೆಪಿ ಸಂಸ್ಕೃತಿ ಹೊಗಳಲು ಹೇಗೆ ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಚಿವ ಬಿ ಸಿ ಪಾಟೀಲ್ ಟಕ್ಕರ್ ನೀಡಿದ್ದಾರೆ.
ಹಿರೇಕೆರೂರಿನಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಟೀಲ್, ಪ್ರಸ್ತುತ ರಚನೆಯಾಗಲಿರುವ ಸಚಿವ ಸಂಪುಟ 2023ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆ ಗೆಲ್ಲುವ ಸಂಕಲ್ಪ ಇಟ್ಟುಕೊಂಡು ರಚನೆಯಾಗಲಿದೆ. ಮುಂದೆ ಬರುವ ಚುನಾವಣೆಗಳಲ್ಲಿಯೂ ಸಹ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.
ಸಚಿವ ಸಂಪುಟದಲ್ಲಿ ಪ್ರಾಂತ್ಯವಾರು, ಜಾತಿವಾರು ಅಂಶಗಳನ್ನು ಇಟ್ಟುಕೊಂಡು ಸರ್ವರಿಗೆ ಸಮಾನ ಅವಕಾಶವನ್ನ ಬಿಜೆಪಿ ವರಿಷ್ಠರು ನೀಡಲಿದ್ದಾರೆ.
ಕಳೆದ ಬಾರಿ ಸಚಿವ ಸಂಪುಟದಲ್ಲಿ ಯಾವ ರೀತಿ ತಮ್ಮನ್ನ ಪಕ್ಷ ನೋಡಿಕೊಂಡಿತ್ತು ಅದೇ ರೀತಿ ಈ ಬಾರಿಯೂ ಸಹ ನಮಗೆ ಆದ್ಯತೆ ನೀಡಲಾಗುತ್ತೆ ಎಂದು ತಮಗೆ ಸಚಿವ ಸ್ಥಾನ ಸಿಗೋದು ಪಕ್ಕಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.