haveri : ಈಜಲು ಹೋಗಿದ್ದ ಮೂವರು ನೀರುಪಾಲು
haveri ಹಾವೇರಿ : ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದಲ್ಲಿ ನಡೆಡಿದೆ.
16 ವರ್ಷದ ಅಖ್ತರ್ ರಜಾ ಯಳವಟ್ಟಿ, ಅಹ್ಮದ್ ರಜಾ ಅಂಚಿ ಮತ್ತು ಸಾಹಿಲ್ ಡೊಂಗ್ರಿ ಮೃತ ಬಾಲಕರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಬಾಲಕರನ್ನ ಕಳೆದುಕೊಂಡ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
