ಬೆಂಗಳೂರು : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತಗೊಳ್ಳಿ ಎಂದು ಕಾಂಗ್ರೆಸ್ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೊರೊನಾ ವೈರಸ್ ಸರ್ಕಾರದ ಕೈ ಬಿಟ್ಟು ಹೋಗಿದೆ. ದೆಹಲಿಯಲ್ಲಿ ಮನೆ ಮನೆಗೆ ಟೆಸ್ಟಿಂಗ್ ಮಾಡೋ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮಲ್ಲಿ 6 ಕೋಟಿ ಜನರಿಗೆ 20 ಸಾವಿರ ಪರೀಕ್ಷೆ ಸಾಮರ್ಥ್ಯ ಇದೆ. ರ್ಯಾಪಿಡ್ ಟೆಸ್ಟಿಂಗ್ ಮತ್ತು ಹಾಸಿಗೆಗಳಿಲ್ಲ ಎಂದು ಟೀಕಿಸಿದ್ದಾರೆ.
”ಖಾಸಗಿ ಆಸ್ಪತ್ರೆಗಳಲ್ಲೇ 20 ಸಾವಿರ ಹಾಸಿಗೆ ಇವೆ. ಯಾಕೆ ಹಾಸ್ಟೆಲ್, ಹಜ್ ಭವನಕ್ಕೆ ಹೋಗ್ತೀರ.. ಎಂದು ಪ್ರಶ್ನಿಸಿ ಇಬ್ರಾಹಿಂ, ಲಾಡ್ಜಲ್ಲಿ 300 ರೂಗೆ ರೂಂ ಸಿಗುತ್ತೆ, ಆದ್ರೆ ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ ಸಾಮಾನ್ಯ ಬೆಡ್ ಗೆ 5000 ರೂಪಾಯಿ. ಇದು ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ. ಖಾಸಗಿ ಆಸ್ಪತ್ರೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತಗೊಳ್ಳಿ” ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದೇ ವೇಳೆ ಬಳ್ಳಾರಿಯಲ್ಲಿ ಸೋಂಕಿನಿಂದ ಮೃತಟ್ಟವರನ್ನು ಬೀಸಾಡಿದ ಬಗ್ಗೆ ಮಾತನಾಡಿದ ಇಬ್ರಾಹಿಂ, ರಾಜ್ಯದಲ್ಲಿ ಕೊರೊನಾ ಸೋಂಕಿತರ ರೋಗಿ ಮೃತಪಟ್ಟರೆ ಹೂಳಲು ಗೈಡ್ಲೈನ್ಸ್ ಇಲ್ಲ. ಹೂಳಲು ನಿರ್ದಿಷ್ಟ ಜಾಗ ನಿಗದಿ ಮಾಡಿಲ್ಲ. ಬಳ್ಳಾರಿಯಲ್ಲಿ ಶವಗಳನ್ನು ಬಿಸಾಕಿದ್ದಾರೆ. ಇದು ಮಾನವಕುಲಕ್ಕೆ ಬಂದಿರುವ ಕಾಯಿಲೆ” ಎಂದು ಘಟನೆ ಬಗ್ಗೆ ಬೇಸರ ಹೊರಹಾಕಿದರು.