ಬಸ್ ಗುದ್ದಿ ಎಮ್ಮೆಯ ಕೋಡು ಮುರಿತ – ಬಸ್ ತಡೆದು ಎಮ್ಮೆಗಳ ಪ್ರತಿಭಟನೆ..
ಒಬ್ಬ ಮನುಷ್ಯನ ಕಷ್ಟಕ್ಕೆ ಇನ್ನೊಬ್ಬ ಮನುಷ್ಯ ಬರ್ತಾನೋ ಇಲ್ವೊ ಗೊತ್ತಿಲ್ಲ, ಆದ್ರೆ ಪ್ರಾಣಿಗಳಲ್ಲಿ ಈ ಬೇಧ ಭಾವ ಇಲ್ಲ. ಮನುಷ್ಯ ತನ್ನ ಇಚ್ಛೆಗೆ ವಿರುದ್ಧ ನಡೆದಾಗ ಪ್ರತಿಭಟಿಸೋದು ನೋಡಿದ್ದೇವೆ. ಆದೇ ರೀತಿ ಪ್ರಾಣಿಗಳು ಪ್ರತಿಭಟನೆ ಮಾಡಿರುವ ಅಪರೂಪದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಲಿ ದಾರವಾಡ ಮಧ್ಯೆ ಸಂಚರಿಸುವ ಬಿ.ಆರ್.ಟಿಎಸ್ ಬಸ್ ರಸ್ತೆಯಲ್ಲಿ ಹೋಗುತ್ತಿರುವ ಎಮ್ಮೆಗೆ ಗುದ್ದಿದ ಪರಿಣಾಮ ಎಮ್ಮೆಯ ಕೊಂಬು ಮುರಿದಿರುವ ಘಟನೆ ಹುಬ್ಬಳ್ಳಿಯ ನಗರ್ ಲ್ಯಾಮಿಂಗ್ಟನ್ ರಸ್ತೆ ಬಳಿ ನಡೆದಿದೆ.
ಎಂದಿನಂತೆ ಎಮ್ಮೆಗಳು ಹೋಗುತ್ತಿರುವಾಗ, ಬಿ ಆರ್ ಟಿಎಸ್ ಬಸ್ ಎಮ್ಮೆಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎಮ್ಮೆಯ ಒಂದು ಕೊಂಬು ಕಿತ್ತು ಬಂದು ರಕ್ತ ಸುರಿಯಲಾರಂಭಿಸಿದೆ. ಇದನ್ನು ಕಂಡ ಪಕ್ಕದ ಎಮ್ಮೆಗಳು ಬಸ್ ಸುತ್ತುವರೆದು ಬಸ್ ಗೆ ಪ್ರತಿರೋಧ ತೋರಿದ ಘಟನೆ ಪ್ರಾಣಿಗಳ ಒಗಟ್ಟಿಗೆ ಹಿಡಿದ ಕನ್ನಡಿಯಂತಿತ್ತು.
ಇನ್ನೂ ಕೊಂಬು ಮುರಿದಿದ್ದರಿಂದ ಎಮ್ಮೆಗೆ ಗಂಭೀರವಾಗಿ ಗಾಯಗಳಾಗಿದ್ದು, ಎಮ್ಮೆಯ ಮಾಲೀಕ ಬಸ್ ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಅಸ್ವಸ್ಥತ ವಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಸಂಚಾರಿ ಠಾಣೆ ಪೊಲೀಸರು ಹಾಗೂ ಉಪನಗರ ಠಾಣೆ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿ ಬಸ್ಸು ಹಾಗೂ ಎಮ್ಮೆಗಳನ್ನು ಸ್ಥಳದಿಂದ ತೆರವುಗೊಳಿಸಿದರು.