ಜಾತಿ ರಾಜಕಾರಣ ಮಾಡುವವರಿಗೆ ಉಪಚುನಾವಣೆ ಒಳ್ಳೆಯ ಪಾಠ; ಬಿ.ಸಿ.ಪಾಟೀಲ್
ಧಾರವಾಡ : ಬೆಂಗಳೂರಿನಲ್ಲಿ ಜಾತಿ ರಾಜಕಾರಣ ಮಾಡುವವರಿಗೆ ಈ ಉಪಚುನಾವಣೆ ದೊಡ್ಡ ಪಾಠ.
ಪ್ರಜಾಪ್ರಭುತ್ವದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ ಎಂಬುದಕ್ಕೆ ಶಿರಾ ಹಾಗೂ ಆರ್.ಆರ್.ನಗರ ಫಲಿತಾಂಶ ತಕ್ಕ ಉದಾಹರಣೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಯಡಿಯೂರಪ್ಪ ನೇತೃತ್ವದ ಸರ್ಕಾರದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು ಈ ಉಪಚುನಾವಣೆಯಲ್ಲಿ ಗೆಲುವು ತಂದಿವೆ.
ನನ್ನನ್ನು ಮುಗಿಸಲು ಬಹಳ ಜನ ಕಾಯ್ತಿದ್ದಾರೆ : ಯತ್ನಾಳ್
ಮತದಾರ ಅಭಿವೃದ್ಧಿಯನ್ನು ಕೈ ಹಿಡಿಯುತ್ತಾನೆ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದರು.
ಬೆಳೆ ವಿಮೆ 2019-20ರವರೆಗೆ ಬಿಡುಗಡೆಯಾಗಿದೆ. ಕೆಲವು ಕಡೆ ಅಕೌಂಟ್ ನಂಬರ್ ತಾಳೆಯಾಗದೆ ಮಿಸ್ ಮ್ಯಾಚಿಂಗ್ ತಾಂತ್ರಿಕಕಾರಣದಿಂದ ವಿಳಂಬವಾಗಿದೆ.
ಶಾಸಕ ಸಿದ್ದು ಸವದಿ ಅಸಭ್ಯ ವರ್ತನೆ: ಡಿಕೆಶಿ ಹೇಳಿದ್ದೇನು..?
ಇನ್ನು ಕೆಲವು ದಿನಗಳಲ್ಲಿಯೇ 2015-16 ರಿಂದ ಸಂಪೂರ್ಣವಾಗಿ ಎಲ್ಲವೂ ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವರು ಹೇಳಿದರು.
ಆರ್ಥಿಕ ಮಟ್ಟ ಸುಧಾರಿಸಿದ ಬಳಿಕ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಕಿ ಇರುವ ಹುದ್ದೆಗಳನ್ನು ಸದ್ಯದಲ್ಲಿಯೇ ತುಂಬಲು ಕ್ರಮಕೈಗೊಳ್ಳಲಾಗುವುದೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಿ.ಸಿ.ಪಾಟೀಲ್ ಉತ್ತರಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel