ಬಾರೀ ಕುತೂಹಲ ಮೂಡಿಸಿದ್ದ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ತೆರೆ ಬಿದ್ದಿದ್ದು, ಎಲ್ಲರಿಗೂ ಖಾತೆ ಹಂಚಿಕೆ ಮಾಡಲಾಗಿದೆ. ಕೆಲವರಿಗೆ ಬೇಡಿಕೆಯಿಟ್ಟಿದ್ದ ಖಾತೆಯನ್ನೇ ಕೊಟ್ರೆ ಮತ್ತೆ ಕೆಲವರಿಗೆ ನಿರಾಸೆ ಎದುರಾಗಿದೆ. ಪ್ರಾರಂಭದಿಂದಲೂ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಜಲಸಂನ್ಮೂಲ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಹಿನ್ನೆಲೆ, ಪ್ರಬಲ ಜಲಸಂಪನ್ಮೂಲ ಖಾತೆಯನ್ನ ಸಾಹುಕಾರ್ ಗೇ ನೀಡಲಾಗಿದೆ. ಇನ್ನೂ ಯಶವಂತಪುರ ಕ್ಷೇತ್ರದ ಸಚಿವ ಎಸ್.ಸೋಮಶೇಖರ್ ಅವರಿಗೆ ಕಹಿ ಅನುಭವ ಎದುರಾಗಿದೆ. ನಗರಾಭಿವೃದ್ಧಿ ಖಾತೆಗೆ ಬೇಡಿಕೆಯಿಟ್ಟಿದ್ದ ಅವರಿಗೆ ಇದೀಗ ಸಹಕಾರ ಖಾತೆ ನಿಡಲಾಗಿದೆ. ಮತ್ತೊಂದೆಡೆ ಬೈರತಿ ಬಸವರಾಜ್ ಆಸೆಗೂ ತಣ್ಣೀರು ಬಿದ್ದಿದ್ದು, ಆಸೆ ಪಟ್ಟ ಖಾತೆ ಸಿಗದೆ ಕಹಿ ಅನುಭವ ಎದುರಾಗಿದೆ..!
ರಾಹುಲ್ ಗಾಂಧಿಗೆ ಪ್ರಶ್ನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿಗೆ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅದಾನಿ-ಅಂಬಾನಿಯನ್ನು (Adani-Ambani) ಈ ಚುನಾವಣೆಯಲ್ಲಿ ನಿಂದಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ತೆಲಂಗಾಣದ ಕರೀಂಪುರದಲ್ಲಿ ನಡೆದ...