ಮರ್ಡರ್ ಮಿಸ್ಟ್ರಿ ಕಥೆ ಹೇಳಲು ಬರ್ತಿದೆ ಕ್ಯಾಂಪಸ್ ಕ್ರಾಂತಿ
ಈ ಹಿಂದೆ ಸ್ಟೂಡೆಂಟ್ಸ್ ಮತ್ತು ಬಿಂದಾಸ್ ಗೂಗ್ಲಿ ಸಿನಿಮಾಗಳನ್ನ ಮಾಡಿ ಸೈ ಎನಿಸಿಕೊಂಡು ಸ್ಯಾಂಡಲ್ ವುಡ್ ನಲ್ಲಿ ಮಿಂಚು ಹರಸಿದ್ದ ನಿರ್ದೇಶಕ ಆರ್.ಎಸ್. ಸಂತೋಷ್ ಇದೀಗ ಕ್ಯಾಂಪಸ್ ಕ್ರಾಂತಿ ಸಿನಿಮಾ ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದಾರೆ.
ಹಿಂದಿನ ಚಿತ್ರಗಳಂತೆ ಈ ಬಾರಿಯೂ ಒಂದಿಷ್ಟು ಹೊಸಬರನ್ನು ಪರಿಚಿಯಿಸಿದ್ದು, ಅಲಂಕಾರ್ ಮತ್ತು ಇಶಾನಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಕನ್ನಡ ಸಿನಿಮಾ ರಂಗದ ಖ್ಯಾತ ಕಲಾವಿದರು ಚಿತ್ರದಲ್ಲಿದ್ದಾರೆ.
ಸದ್ಯ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಇತ್ತೀಗಷ್ಟೆ ನಟ ಪುನೀತ್ ರಾಜ್ ಕುಮಾರ್ ಸಿನಿಮಾದ ಟೈಟಲ್ ಬಿಡುಗಡೆ ಮಾಡಿ ಚಿತ್ರಯೂನಿಟ್ ಗೆ ಶುಭ ಕೋರಿದ್ದರು.
ಇನ್ನು ಚಿತ್ರದ ವಿಷಯಕ್ಕೆ ಬಂದ್ರೆ ಕ್ಯಾಂಪಸ್ ಕ್ರಾಂತಿ ಟೈಟಲ್ ಹೇಳುವಂತೆ ಇದು ಕಾಲೇಜಿನ ಸುತ್ತಮುತ್ತ ಸುತ್ತುತ್ತದೆ. ಗಡಿ ವಿವಾದ ಮತ್ತು ಕ್ರೈಮ್ ಇಂಪ್ಯಾಕ್ ಹೇಗೆ ಕರ್ನಾಟಕ – ಮಹಾರಾಷ್ಟ್ರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತೆ.
ಕಾಲೇಜಿನಲ್ಲಿ ನಡೆಯೋ ಒಂದು ಮರ್ಡರ್ ಹೇಗೆ ಇವರನ್ನ ಒಂದು ಮಾಡುತ್ತೆ. ಅವರು ಹೇಗೆ ಈ ಮರ್ಡರ್ ಮಿಸ್ಟ್ರಿಯ ಕಹಾನಿಯನ್ನ ಭೇದಿಸುತ್ತಾರೆ ಅನ್ನೋದು ಸಿನಿಮಾದ ಸ್ಟೋರಿ.
ಅಂದಹಾಗೆ ನಿರ್ದೇಶಕ ಸಂತೋಷ್ ಅವರು ಲಾಕ್ ಡೌನ್ ಸಮಯದಲ್ಲಿ ಈ ಚಿತ್ರದ ಕಥೆಯನ್ನ ಬರೆದಿದ್ದು, ಕಳೆದ ಎರಡು ತಿಂಗಳುಗಳಲ್ಲಿ ಚಿತ್ರೀಕರಣ ಮುಗಿಸಿದ್ದಾರೆ.
ಚಿತ್ರದ ಚಿತ್ರೀಕರಣ ಬೆಂಗಳೂರು, ಬೆಳಗಾವಿ ಸೇರಿದಂತೆ ಮುಂತಾದ ಕಡೆ ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿ ಮನೋಹರ್ ಸಂಗೀತ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel