ಕ್ಯಾಪ್ಟನ್ ಜಿಂಟು ವೀ ಲವ್ ಯು – ಕಾರ್ಗಿಲ್ ವಿಜಯ್ ದಿವಾಸ್ – ಹುತಾತ್ಮ ಕ್ಯಾಪ್ಟನ್ ಜಿಂಟು ಗೊಗೊಯ್ ರವರ ಒಂದು ನೆನಪು
ಹೊಸದಿಲ್ಲಿ, ಜುಲೈ 26:
ಮಾ, ನಾನು ಕಾರ್ಗಿಲ್ನಿಂದ ನಿಮ್ಮ ಜಿಂಟು.
ನೀವೆಲ್ಲರೂ ಸುರಕ್ಷಿತವಾಗಿದ್ದೀರಾ?
ನಾನು ನಿಮ್ಮೆಲ್ಲರಿಂದ ತುಂಬಾ ದೂರದಲ್ಲಿದ್ದೇನೆ
ನನ್ನ ಸಮವಸ್ತ್ರ ಮತ್ತು ಜೋಡಿ ಬೂಟಗಳು ನನಗೆ ತುಂಬಾ ಪ್ರಿಯವಾಗಿದೆ
ನೀವು ಅದನ್ನು ಜೋಪಾನವಾಗಿ ನೋಡಿಕೊಂಡಿದ್ದೀರಾ?
ಮಾ, ಚಳಿಗಾಲದ ಬಿದ್ದ ಎಲೆಗಳಂತೆ ಅದನ್ನು ಕೊಳೆಯಲು ಬಿಡಬೇಡಿ.
ಅಸ್ಸಾಂನ ಗೋಲಘಾಟ್ ಜಿಲ್ಲೆಯ ಖುಮ್ತೈ ಪಟ್ಟಣದ ದಿವಂಗತ ಕ್ಯಾಪ್ಟನ್ ಜಿಂಟು ಗೊಗೊಯ್ ಅವರ ಸ್ಮಾರಕದಲ್ಲಿ ಭಾನುವಾರ ಗೌರವ ಸಲ್ಲಿಸುವ ಮೂಲಕ 21 ನೇ ಕಾರ್ಗಿಲ್ ವಿಜಯ್ ದಿವಾಸ್ ಆಚರಿಸಿದ ಜಸಿಂಗ್ಫಾ ಬರಹಗಾರರ ಸಂಘದ ಸದಸ್ಯೆ ಪ್ರಿಯದರ್ಶಿನಿ ಗೋಗೊಯ್ ಅವರ ಅನುವಾದಿತ ಕವಿತೆ ಇದು. ಕೋವಿಡ್ -19 ಬಿಕ್ಕಟ್ಟಿನ ನಡುವೆ, ಅವರು ನಮ್ಮ ಯುದ್ಧ ವೀರರನ್ನು ಸ್ಮರಿಸಿ, ಅವರಿಗೆ ಗೌರವ ಸಲ್ಲಿಸಿದರು.
ಸಾಮಾಜಿಕ ದೂರವನ್ನು ಕಾಪಾಡಿಕೊಂಡು, ನಾ-ಗಾಂವ್ನ ಸಣ್ಣ ಗುಂಪಿನ ಗ್ರಾಮಸ್ಥರು ಮತ್ತು ಕ್ಯಾಪ್ಟನ್ ಜಿಂಟು ಗೊಗೊಯ್ ಅವರ ಪೋಷಕರು ಒಟ್ಟುಗೂಡಿ ರಾಷ್ಟ್ರಧ್ವಜವನ್ನು ಹಾರಿಸಿದರು ಮತ್ತು ನಮ್ಮ ದೇಶವನ್ನು ರಕ್ಷಿಸಲು ಎಲ್ಲವನ್ನೂ ತ್ಯಾಗ ಮಾಡಿದ ಸೈನಿಕರ ನೆನಪಿಗಾಗಿ ದೀಪವನ್ನು ಬೆಳಗಿಸಿದರು.

‘ಅವರು ಭಾರತದ ಹೆಮ್ಮೆ, ಅಸ್ಸಾಂನ ಹೆಮ್ಮೆ, ಮತ್ತು ಎಲ್ಲಾ ಕಾರ್ಗಿಲ್ ಹುತಾತ್ಮರ ಅಂತಿಮ ತ್ಯಾಗಕ್ಕಾಗಿ ನಾವು ಗೌರವ ಸಲ್ಲಿಸಿದ್ದೇವೆ. ಪ್ರತಿ ವರ್ಷ, ನಾವು ಮೂರು ಘಟನೆಗಳನ್ನು ಆಚರಿಸುತ್ತೇವೆ – ಕ್ಯಾಪ್ಟನ್ ಜಿಂಟು ಗೊಗೊಯ್ ಅವರ ಜನ್ಮ ದಿನಾಚರಣೆ, ಅವರ ಮರಣ ವಾರ್ಷಿಕೋತ್ಸವ ಮತ್ತು ವಿಜಯ್ ದಿವಾಸ್. ಪ್ರತಿ ವರ್ಷ ವಿಭಿನ್ನವಾಗಿ ನಾವು ಕಾರ್ಯಕ್ರಮವನ್ನು ಆಯೋಜಿಸುತ್ತೇವೆ, ಆದರೆ ಈ ವರ್ಷ ಕೊರೊನದಿಂದ ನಾವು ಕೇವಲ 10 ಜನರು ಇಲ್ಲಿ ಒಟ್ಟುಗೂಡಿದ್ದೇವೆ ಮತ್ತು ಸಾಮಾಜಿಕ ಅಂತರ ಕಾಪಾಡುವ ಮಾನದಂಡಗಳಿಗೆ ಬದ್ಧರಾಗಿದ್ದೇವೆ. ಆದರೆ ಕೊರೊನಾವೈರಸ್ ನಮ್ಮ ಧೈರ್ಯಶಾಲಿಗಳನ್ನು ಗೌರವಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಬರಹಗಾರರ ಘಟಕದ ಪ್ರಧಾನ ಕಾರ್ಯದರ್ಶಿ ಲಾವಣ್ಯ ಗೊಗೊಯ್ ಹೇಳಿದರು.
ಜೂನ್ 30 ರಂದು, ಪ್ರಾರ್ಥನೆ ಮತ್ತು ಕವಿತೆಯನ್ನು ಪಠಿಸುವ ಮೂಲಕ ಜಿಂಟು ಗೊಗೊಯ್ ಅವರ ಮರಣ ವಾರ್ಷಿಕೋತ್ಸವವನ್ನು ಆಚರಿಸಿದರು. ಅವರ ಮಾತುಗಳು ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸಿತು ಎಂದರೆ ತಪ್ಪಾಗಲಾರದು. ಕ್ಯಾಪ್ಟನ್ ಜಿಂಟು ಗೊಗೊಯ್ ಅವರ ತಂದೆ, ಭಾರತೀಯ ವಾಯುಪಡೆಯ ಅನುಭವಿ, ನಿವೃತ್ತ ಫ್ಲೈಯಿಂಗ್ ಆಫೀಸರ್ ತೊಗಿರಾಮ್ ಗೊಗೊಯ್, ತಮ್ಮ ಮಗನ ಶೌರ್ಯದ ಕಥೆಯನ್ನು ಹೆಮ್ಮೆಯಿಂದ ನೆನಪಿಸಿಕೊಂಡರು. ಬಟಾಲಿಕ್ ವಲಯದಲ್ಲಿ ಕಲಾ ಪಠಾರ್ ನಿಂದ ಶತ್ರುಗಳನ್ನು ಹೊರದುಬ್ಬಲು ಸೈನ್ಯವನ್ನು ಮುನ್ನಡೆಸುವಾಗ ಅವರು ತೋರಿಸಿದ ಧೈರ್ಯಕ್ಕಾಗಿ 29 ವರ್ಷದ ಸೈನಿಕನಿಗೆ ಮರಣೋತ್ತರವಾಗಿ ಆಗಸ್ಟ್ 15, 1999 ರಂದು ವೀರ್ ಚಕ್ರವನ್ನು ನೀಡಲಾಯಿತು.
ನಾವು ಈ ದಿನವನ್ನು ಉತ್ತಮವಾಗಿ ಮತ್ತು ಬಹಳ ಹೆಮ್ಮೆಯಿಂದ ನೆನಪಿಸಿಕೊಳ್ಳಬೇಕು. ನಮ್ಮ ಮಹಾನ್ ರಾಷ್ಟ್ರವನ್ನು ರಕ್ಷಿಸಲು, ಕರ್ತವ್ಯದ ಕರೆಗೆ ಓಗೊಟ್ಟ ನನ್ನ ‘ಮಗ’ ಅಂತಿಮವಾಗಿ ಜೀವತ್ಯಾಗವನ್ನು ನೀಡಿದರು. ತಮ್ಮ ಸೈನ್ಯದ ಕಾರ್ಯತಂತ್ರ ಮತ್ತು ಯೋಜನೆಗೆ ಸಹಕರಿಸಿದರು ಎಂದು ಅವರು ಹೇಳಿದರು.
ನಿವೃತ್ತ ವಾಯುಪಡೆಯ ಸಿಬ್ಬಂದಿ ಪಠಾರ್ ಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಹಂಚಿಕೊಂಡರು.

ಕ್ಯಾಪ್ಟನ್ ಜಿಂಟು ಗೊಗೊಯ್ ಅವರನ್ನು ಗರ್ವಾಲ್ ರೈಫಲ್ಸ್ನ 17 ಗರ್ವಾಲ್ ಆಗಿ ನಿಯೋಜಿಸಲಾಗಿತ್ತು, ಇದು ಭಾರತೀಯ ಸೈನ್ಯದ ಅತ್ಯಂತ ಅಲಂಕೃತ ರೆಜಿಮೆಂಟ್ಗಳಲ್ಲಿ ಒಂದಾಗಿದೆ. ಜೂನ್ 1999 ರಲ್ಲಿ, ಬಟಾಲಿಕ್ ಉಪ-ವಲಯದಲ್ಲಿ ನಿಯೋಜಿಸಲಾದ ಬೆಟಾಲಿಯನ್ ಅನ್ನು ಜುಬರ್ ಹೈಟ್ಸ್ನ ಕಲಾ ಪಠಾರ್ ನಿಂದ ಶತ್ರುಗಳನ್ನು ಹೊರಹಾಕುವ ಕಾರ್ಯವನ್ನು ಮಾಡಲಾಯಿತು, ಶ್ರೀನಗರ ಮತ್ತು ಲೇಹ್ಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜುಬರ್ ಮೇಲ್ಭಾಗ ವಿಸ್ತರಿಸಿದೆ. ಕಡಿದಾದ ಪ್ರದೇಶದಲ್ಲಿ ಮೇಲಕ್ಕೆ ಏರುವುದು ಪ್ರಯಾಸಕರ, ಆದರೆ ನಮ್ಮ ದೇಶದ ಯಾವ ಸೈನಿಕನು ಅದನ್ನು ಬಿಟ್ಟುಕೊಡಲಿಲ್ಲ. ಕ್ಯಾಪ್ಟನ್ ಗೊಗೊಯ್ ಅವರ ತುಕಡಿ ಕುತಂತ್ರಿ ಪಾಕಿಸ್ತಾನದ ಪಡೆಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಬೇಷರತ್ತಾಗಿ ಶರಣಾಗುವ ಬದಲು ಸಾವಿನವರೆಗೂ ದೇಶಕ್ಕಾಗಿ ಹೋರಾಡುವ ದಿಟ್ಟ ನಿರ್ಧಾರದಿಂದ, ಕ್ಯಾಪ್ಟನ್ ಜಿಂಟು ಗೊಗೊಯ್ ತಕ್ಷಣದ ದಾಳಿಯನ್ನು ಪ್ರಾರಂಭಿಸಿ ಇಬ್ಬರು ಶತ್ರು ಸೈನಿಕರನ್ನು ಕೊಂದರು. ಆದರೆ ಶತ್ರುಗಳ ಪ್ರತಿ ದಾಳಿಗೆ ಮಾರಣಾಂತಿಕವಾಗಿ ಗಾಯಗೊಂಡರು. ಬೆಟಾಲಿಯನ್ ನಂತರದ ದಿನಗಳಲ್ಲಿ ಹೊಸ ದಾಳಿಗಳನ್ನು ಪ್ರಾರಂಭಿಸಿತು ಮತ್ತು ಕಲಾ ಪಠಾರ್ ಅನ್ನು ಸ್ವಾಧೀನಪಡಿಸಿತ್ತು. ಇದು ಸೈನಿಕರಿಗೆ ಮುಂದಿನ ಯಶಸ್ಸಿಗೆ ದಾರಿಮಾಡಿಕೊಟ್ಟಿತು – ಬೆಂಟಾಲಿಯನ್ ಮುಂಥೋ ಧಲೋ ಸಂಕೀರ್ಣವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಯಿತು. ಅಂತಿಮವಾಗಿ ಭಾರೀ ಹಿಮಪಾತ ಮತ್ತು ಪರಿಣಾಮಕಾರಿ ಶತ್ರುಗಳ ದಾಳಿಯ ಹೊರತಾಗಿಯೂ ಪಾಯಿಂಟ್ 5285 ಅನ್ನು ಕೈವಶಮಾಡಿಕೊಳ್ಳಲಾಯಿತು.

ಕ್ಯಾಪ್ಟನ್ ಗೊಗೊಯ್ ಅವರ ರೆಜಿಮೆಂಟ್ನ ಧ್ಯೇಯವಾಕ್ಯಕ್ಕೆ – ‘ಯುಧಾಯಾ ಕೃತ್ ನಿಸ್ಚ್ಯಾ’ (ದೃಢ ನಿಶ್ಚಯದೊಂದಿಗೆ ಹೋರಾಡಿ) – ತಕ್ಕಂತೆ ಬದುಕಿದ್ದರು.
ಮುಂದೆ ಅವರ ತಂಡದಲ್ಲಿ ಲ್ಯಾನ್ಸ್ ನಾಯಕ್ ಮದನ್ ಸಿಂಗ್, ರೈಫಲ್ಮನ್ ಜೈದೀಪ್ ಸಿಂಗ್, ರೈಫಲ್ಮನ್ ವರಿಂದರ್ ಲಾಲ್ (17 ಗರ್ವಾಲ್), ಸಿಪಾಯ್ ರಾಜ್ವೀರ್ ಸಿಂಗ್, ಸಿಪಾಯಿ ಧರಂಬೀರ್ ಸಿಂಗ್ , ಸಿಪಾಯಿ ವಿನೋದ್ ಕುಮಾರ್, ಸುಬೇದಾರ್ ಹರ್ಫುಲ್ ಸಿಂಗ್, ಸಿಪಾಯಿ ಗಾಜ್ಪಾಲ್ ಸಿಂಗ್ ಮತ್ತು ಸಿಪಾಯಿ ಕ್ರಿಶನ್ ಕುಮಾರ್ (17 ಜೆಎಟಿ) ಸೇರಿಕೊಂಡರು
ದೇಶಕ್ಕಾಗಿ ಕೊನೆಯ ಉಸಿರಿನವರೆಗೆ ಹೋರಾಡಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು ಜಿಂಟು ಗೊಗೊಯ್. ಅಸ್ಸಾಂನಿಂದ ಕಾರ್ಗಿಲ್ ಗೆ ಸಂಬಂಧಿಸಿದ ಭಾವನೆಗಳ ಅಲೆಯೊಂದಿತ್ತು. ತ್ರಿವರ್ಣದಲ್ಲಿ ಸುತ್ತಿ ‘ಮಗ ‘ ಮನೆಗೆ ಹಿಂದಿರುಗಿದಾಗ, ಜನರು ಅಗಲಿದ ಮಹಾನ್ ದೇಶಭಕ್ತನಿಗೆ ಗೌರವ ಸಲ್ಲಿಸಲು ಬೀದಿ ಬೀದಿಯಲ್ಲಿ ನೆರೆದಿದ್ದರು. ಭಾವನೆಗಳು ಯಾವಾಗಲೂ ಸದೃಢವಾಗಿರುತ್ತೆ ಎಂದು ನಾವು ಭಾವಿಸಿದ್ದೇವೆ, ವಾಸ್ತವವಾಗಿ ಅದು ಈಗಲೂ ಇದೆ ಎಂದು ತೊಗಿರಾಮ್ ಗೊಗೊಯ್ ಹೇಳಿದರು.

ಬೆಟಾಲಿಯನ್ ನನ್ನ ಎರಡನೇ ಕುಟುಂಬ … ಅವರ ಸಹಪಾಠಿಗಳು ಇಂದಿಗೂ ಅವರ ಬಲಿದಾನ್ ದಿವಾಸ್ ಅನ್ನು ಆಚರಿಸುತ್ತಾರೆ.
ಆತ ಬಾಲ್ಯದಿಂದಲೂ ಸೈನ್ಯಕ್ಕೆ ಸೇರಲು ಆಸಕ್ತಿ ಹೊಂದಿದ್ದರು. ಪ್ರೌಡ ಶಾಲೆಯಿಂದಲೂ ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್ಸಿಸಿ) ಗೆ ಸೇರಿದಾಗ ಅವರಲ್ಲಿ ಇದ್ದ ಉತ್ಸಾಹ, ಅನುಸರಿಸುತ್ತಿದ್ದ ವೃತ್ತಿಜೀವನ, “ಆಪರೇಷನ್ ವಿಜಯ್ ದೊಂದಿಗೆ ಕೊನೆಗೊಂಡಿತು. ಕ್ಯಾಪ್ಟನ್ ಜಿಂಟು ಗೊಗೊಯ್ ಅಂದಿನಿಂದ ಅಸ್ಸಾಂನ ಜನರಿಗೆ, ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಅವರ ಬಲಿದಾನ ಯಾವತ್ತೂ ವ್ಯರ್ಥವಾಗಿಲ್ಲ.
ಎನ್ಸಿಸಿಯಲ್ಲಿ ಹವಿಲ್ದಾರ್ ಶ್ರೇಣಿಯನ್ನು ಪಡೆದು ಕೆಡೆಟ್ ಆಗಿ ಸಾಕಷ್ಟು ಶಿಸ್ತುಗಳನ್ನು ಕಲಿತರು. ಮುಂದೆ ಭಾರತೀಯ ಸೈನ್ಯವು ಅವನಿಗೆ ಪ್ರಬುದ್ಧ ಮಟ್ಟವನ್ನು ನೀಡಿತು ಎಂದು ತೊಗಿರಾಮ್ ಗೊಗೊಯ್ ಹೇಳುತ್ತಾರೆ.
ಒಂದು ವೇಳೆ ಮುಂದಿನ ದಿನದಲ್ಲಿ ನೀವೇನಾದ್ರು ಗುವಾಹಟಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದರೆ, ಪ್ಲಾಟ್ಫಾರ್ಮ್ 1 ರಲ್ಲಿ ಪ್ರವೇಶದ್ವಾರದ ಬಲಭಾಗದಲ್ಲಿರುವ ಬೋರ್ಡ್ ಅನ್ನು ಗಮನಿಸಿ – ಅಸ್ಸಾಂನ 18 ಶೌರ್ಯ ಪ್ರಶಸ್ತಿ ವಿಜೇತರ ಹೆಸರನ್ನು ನೀವು ಕಾಣಬಹುದು ಮತ್ತು ಪಟ್ಟಿಯಲ್ಲಿ ಮೊದಲು ನನ್ನ ಮಗನ ಫೋಟೋವನ್ನು ನೀವು ನೋಡುತ್ತೀರಿ, ಎಂದು ಗೊಗೊಯ್ ತಮ್ಮನ್ನು ಭೇಟಿ ಮಾಡಿದ ವರದಿಗಾರನಿಗೆ ತಿಳಿಸಿದರು.

ಹುತಾತ್ಮರ ಗೌರವಾರ್ಥವಾಗಿ, ಹಲವಾರು ಅನುಭವಿಗಳು ಕಾರ್ಗಿಲ್ ಯುದ್ಧದ ನೆನಪುಗಳನ್ನು ನೆನಪಿಸಿಕೊಂಡರು. ಕರ್ನಲ್ ದಿಲೀಪ್ ಕುಮಾರ್ ಬೋರಾಹ್ (ನಿವೃತ್ತ) ಅವರು ಕಾರ್ಗಿಲ್ ಯುದ್ಧದಿಂದ ಜೀವನವನ್ನು ಬದಲಾಯಿಸುವ ನೆನಪುಗಳೊಂದಿಗೆ ಸೇವೆ ಸಲ್ಲಿಸಲು, ಮುನ್ನಡೆಸಲು ಮತ್ತು ಮರಳಲು ಅವಕಾಶವನ್ನು ಪಡೆದೆ ಎಂದು ಹೆಮ್ಮೆಪಡುತ್ತಾರೆ.
ಮೇಜ್ ವಿವೇಕ್ ಗುಪ್ತಾ ಕೆಲವು ದಿನಗಳ ನಂತರ ದಾಳಿಯನ್ನು ಮುನ್ನಡೆಸಿದರು. ಟೋಲೊಲಿಂಗ್ನ ವಶಪಡಿಸಿಕೊಂಡ ನಂತರ ಕಾರ್ಗಿಲ್ ಯುದ್ಧದ ತಿರುವನ್ನೇ ಬದಲಾಯಿಸಿತ್ತು. ಆದರೆ ದುರದೃಷ್ಟವಶಾತ್ ವಿವೇಕ್ ಗುಪ್ತಾ ಸೇರಿದಂತೆ ಅನೇಕ ಯೋಧರು ತಮ್ಮ ಜೀವವನ್ನೇ ತ್ಯಾಗ ಮಾಡಿದರು. ವಿವೇಕ್ ಗುಪ್ತಾರ ಸೇನಾ ವೈದ್ಯ ಪತ್ನಿ ದೆಹಲಿಯಲ್ಲಿ ಅವರ ಶವಪೆಟ್ಟಿಗೆಯಲ್ಲಿ ನಮಸ್ಕರಿಸುವ ದೃಶ್ಯ ಅತ್ಯಂತ ದುಃಖದ ದೃಶ್ಯಗಳಲ್ಲಿ ಒಂದಾಗಿದೆ. ಅವನು ಇಂದು ಇಲ್ಲಿ ಇಲ್ಲದಿರಬಹುದು, ಆದರೆ ಅವನ ನಗುತ್ತಿರುವ ಮುಖ ಯಾವಾಗಲೂ ನನ್ನ ಹೃದಯದಲ್ಲಿ ಉಳಿಯುತ್ತದೆ ಎಂದು ಹಿರಿಯ ಕಾರ್ಗಿಲ್ ಯೋಧ ಹೇಳಿದರು.
ಅಧಿಕೃತ ಅಂಕಿಅಂಶಗಳ ಪ್ರಕಾರ, ಕಾರ್ಗಿಲ್ ಯುದ್ಧದಲ್ಲಿ 527 ಭಾರತೀಯ ಸೈನಿಕರು ಸಾವನ್ನಪ್ಪಿದರು ಮತ್ತು 1,363 ಮಂದಿ ಗಾಯಗೊಂಡಿದ್ದರು.








