ಬೆಂಗಳೂರು: ಮಾರ್ಚ್ 25ರಂದು ನಡೆಯಲಿರುವ ಹೋಳಿಗೆ ಕಾವೇರಿ ನೀರು ಬಳಸದಂತೆ ಜಲಮಂಡಳಿ ಖಡಕ್ ವಾರ್ನಿಂಗ್ ಮಾಡಿದೆ.
ಮಾರ್ಚ್ 25 ರಂದು ನಡೆಯುವ ಹೋಳಿ ಹಬ್ಬಕ್ಕೆ ಸಜ್ಜಾಗಿರುವ ಹೋಟೆಲ್ ಗಳಿಗೆ ವಾರ್ನಿಂಗ್ ನೀಡಲಾಗಿದೆ. ರೈನ್ ಡ್ಯಾನ್ಸ್ಗೆ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಖಡಕ್ ಸೂಚನೆ ನೀಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಜಲಮಂಡಳಿ ಎಚ್ಚೆತ್ತುಕೊಂಡಿದೆ.
ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಆದರೆ, ನೀರನ್ನು ಪೋಲು ಮಾಡಬಾರದು ಎಂದು ಜಲಮಂಡಳಿ ಕಿವಿ ಮಾತು ಹೇಳಿದೆ.