Central government announ good news for farmers
ಕೇಂದ್ರ ಸರ್ಕಾರದಿಂದ ತೋಟಗಾರಿಕೆ ರೈತರಿಗಾಗಿ ಸಿಹಿ ಸುದ್ದಿಯೊಂದು ದೊರೆತಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಜಾರಿಗೆ ತಂದಿರುವ ತೋಟಗಾರಿಕೆ ಇಲಾಖೆ ಯಂತ್ರೋಪಕರಣಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದುಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ರೈತರು ನೀರಾವರಿಯಲ್ಲಿ ತಂತ್ರಜ್ಞಾನವನ್ನು ಬಳಸುವ ಮೂಲಕ ನೀರಿನ ಉಳಿತಾಯದ ಜೊತೆಗೆ ಉತ್ತಮ ಇಳುವರಿಯನ್ನ ಸಹ ಪಡೆದುಕೊಳ್ಳಬಹುದು. ಇದರಿಂದ ರೈತರಿಗೆ ಉತ್ತಮ ಲಾಭವನ್ನು ತಂದುಕೊಡುತ್ತದೆ.ಈ ಉದ್ದೆಶದಿಂದ ಕೇಂದ್ರ ಸರ್ಕಾರ ವಿನೂತನ ಸ್ಕೀಮ್ ಅನ್ನು ಘೋಷಿಸಿದೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ತೋಟಗಾರಿಕೆ, ತರಕಾರಿ ಹಾಗೂ ಹೂ ಸೇರಿದಂತೆ ಸಣ್ಣ ಪ್ರಮಾಣದ ರೈತರು ಈ ಸ್ಕಿಮ್ಗೆ ಒಳಪಟ್ಟಿದ್ದಾರೆ.
ಈ ಯೋಜನೆಯಲ್ಲಿ ನೀರಾವರಿ ಅವಲಂಬಿಸಿ ಕೃಷಿ ಮಾಡುತ್ತಿರುವ ರೈತರಿಗೆ ಸಹಾಯಧನವನ್ನು ಬಿಡುಗಡೆಗೊಳಿಸಲಾಗಿದೆ. ನೀರಾವರಿಗೆ ಬೇಕಾದ ಉಪಕರಣಗಳನ್ನು ಪಡೆದುಕೊಂಡು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಹಾಉವಾಗಲಿದೆ.
ಈ ಯೋಜನೆಗೆ ಟೀ, ಕಾಫಿ, ರಬ್ಬರ್ ಬೆಳೆ ಗೆಳೆಯುವ ರೈತರನ್ನು ಬಿಟ್ಟು ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಎಲ್ಲಾ ವರ್ಗದ ರೈತರಿಗೆ 5 ಹೆಕ್ಟೇರ್ ( 12. 5 ಎಕರೆ ) ಜಮೀನು ಹೊಂದಿದವರಿಗೆ ಹೊಲದಲ್ಲಿ ನೀರಾವರಿ ಯಂತ್ರ ಅಳವಡಿಸಲು ಸರಕಾರ ಸಹಾಯಧನವನ್ನು ಒದಗಿಸುತ್ತದೆ.
ಅರ್ಹ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಮೊದಲು ೨ ಹೆಕ್ಟೇರ್ ಪ್ರದೇಶಕ್ಕೆ ಶೇ90% ರಷ್ಟು ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ಶೇ75%ರಷ್ಟು ಸಹಾಯಧನವನ್ನ ನೀಡಲಾಗುತ್ತದೆ . ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರು 2 ಹೆಕ್ಟೇರೆಗಿಂತಲು ಮೇಲ್ಪಟ್ಟು ಗರಿಷ್ಠ ಐದು ಹೆಕ್ಟೇರ್ ನಷ್ಟು ಭೂಮಿಯನ್ನು ಹೊಂದಿದವರಿಗೆ ಶೇ.45%ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ತುಂತುರು ನೀರಾವರಿ ಘಟಕ ಅಳವಡಿಸಲು ಗರಿಷ್ಠ 2 (5 ಎಕರೆ) ಹೆಕ್ಟೇರ್ ಪ್ರದೇಶಗಳಿಗೆ ಸಹಾಯಧನವನ್ನು 2022 – 23ನೇ ಸಾಲಿನ ತರಕಾರಿ, ಹೂ ಬೆಳೆ ಬೆಳೆಯುವ ರೈತರಿಗೆ ನೀಡಲಾಗುತ್ತದೆ
ಈ ಯೋಜನೆ ಸೌಲಭ್ಯ ಪಡೆಯಲು ಅರ್ಹ ರೈತರು ತಮ್ಮ ಸಮೀಪದ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿಯೊಂದಿಗೆ ಪಹಾಣಿ, ಛಾಪಾ ಕಾಗದ, ನೀರಿನ ಲಭ್ಯತೆ ದೃಢೀಕರಣ ಪತ್ರ, ಕೊಳವೆ ಬಾವಿ ದೃಢೀಕರಣ ಪತ್ರ, ಬೆಳೆ ದೃಢೀಕರಣ ಪತ್ರ ಹಾಗೂ ರೈತರು ಎಸ್ ಸಿ, ಎಸ್ ಟಿ ಪಂಗಡಕ್ಕೆ ಸೇರಿದರೆ ಜಾತಿ ಪ್ರಮಾಣ ಪತ್ರ ಹಾಗೂ ಇತರೆ ಸಂಬಂಧಪಟ್ಟ ದಾಖಲಿಗಳನ್ನು ತೆಗೆದುಕೊಂಡು ಹೋಗಿ ರೈತ ಸಂಪರ್ಕ ಕೇಂದ್ರದಲ್ಲಿ ಕೆ-ಕಿಸಾನ್ ವೆಬ್ ಸೈಟ್ ನಲ್ಲಿ ನಮೂದಿಸಿಕೊಳ್ಳಬಹುದಾಗಿದೆ. ಜೇಷ್ಠತಾ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.








