Chamarajanagar | ಮಹದೇಶ್ವರಬೆಟ್ಟ ಹುಂಡಿಎಣಿಕೆ ವೇಳೆ ಹಣ ಕಳವು
ಚಾಮರಾಜನಗರ : ಮಲೆಮಹದೇಶ್ವರಬೆಟ್ಟ ದೇವಾಲಯದಲ್ಲಿ ನಡೆದ ಹುಂಡಿಎಣಿಕೆ ವೇಳೆಯಲ್ಲಿ 40 ಸಾವಿರ ನಗದಯ ಕಳವು ಮಾಡಿರುವ ಆರೋಪದಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಣಿಕೆಯಲ್ಲಿ ತೊಡಗಿದ್ದ ತಾತ್ಕಾಲಿಕ ಸಿಬ್ಬಂಧಿ ಪನ್ವೀರ್ ಸೆಲ್ವಂ ಅನುಮಾನಸ್ಪದವಾಗಿ ನಡೆದುಕೊಂಡ ಹಿನ್ನಲೆಯಲ್ಲಿ ಅನುಮಾನಗೊಂಡು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.
ಹಣದ ಸಮೇತ ಸಿಕ್ಕಿಬಿದ್ದ ಪನ್ನೀರ್ ಸೆಲ್ವಂ ಎಂಬ ಆರೋಪಿಯನ್ನು ಪೋಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ.
![Chamarajanagar Money was stolen during hundi counting in Mahadeshwarabetta saaksha tv](http://saakshatv.com/wp-content/uploads/2022/07/male-mahadev-300x196.jpg)
ಅಂದಹಾಗೆ ಮಲೆಮಹದೇಶ್ವರನಿಗೆ ಹುಂಡಿಯಲ್ಲಿ 1.70 ಕೋಟಿ ರೂ. ನಗದು.. 80 ಗ್ರಾಂ ಚಿನ್ನ, 1.4 ಕೆಜಿ ಬೆಳ್ಳಿ ಆಭರಣ ಸಂಗ್ರಹವಾಗಿದೆ.
ಕೇವಲ 27 ದಿನಗಳಲ್ಲಿ ಒಟ್ಟು 1,70,65,814 ರೂ. ಸಂಗ್ರಹವಾಗಿದೆ. ಇದರಲ್ಲಿ ನಾಣ್ಯಗಳೇ 9 ಲಕ್ಷದಷ್ಟಿದೆ.
ಇದರೊಂದಿಗೆ 80 ಗ್ರಾಂ ಚಿನ್ನ ಹಾಗೂ 1.4 ಕೆಜಿ ಬೆಳ್ಳಿಯನ್ನು ಏಳುಮಲೆ ಒಡೆಯನಿಗೆ ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.