ಚಾಮರಾಜನಗರ Chamarajanagar : ಪಾಳು ಬಾವಿಗೆ ಬಿದ್ದ ಕಾಡುಹಂದಿಗಳು
ಚಾಮರಾಜನಗರ : ಆಹಾರ ಅರಿಸಿ ಕಾಡಿನಿಂದ ಹೊರ ಬಂದಿದ್ದ ಕಾಡು ಹಂದಿಗಳು ಆಯ ತಪ್ಪಿ 40 ಅಡಿ ಆಳದ ಪಾಳು ಬಾವಿಗೆ ಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದಿನ್ನಳ್ಳಿಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದಿನ್ನಳ್ಳಿ ಗ್ರಾಮ ದಲ್ಲಿ 6 ಕಾಡು ಹಂದಿ ಸುಮಾರು 40 ಅಡಿ ಪಾಳು ಬಾವಿ ಗೆ ಬಿದಿದ್ದು, ಹನೂರು ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಂತರ ಅವುಗಳನ್ನು ಮೇಲಕ್ಕೆ ಎತ್ತಿ ನಂತರ ಕಾಡಿಗೆ ಬಿಡಲಾಗಿದೆ .
ಈ ಕಾರ್ಯಾಚರಣೆ ಯಲ್ಲಿ ಅಗ್ನಿಶಾಮಕ ಅಧಿಕಾರಿ ಶೇಷ ನೇತೃತ್ವದ ಸಿಬ್ಬಂದಿ ಜಯಶಂಕರ್ ಶೇಖರ ನಾಗೇಶ್ ಕಾರ್ತಿಕ್ ಆನಂದ ಶೃಂಗಾರ ಕಾರ್ಯಾಚರಣೆಯಲ್ಲಿ ಬಾಗವಹಿಸಿ ಯಶಸ್ವಿಯಾಗುತ್ತಾರೆ.