ಚಿಕ್ಕಮಗಳೂರು : ಹಾವು ಸತ್ತ ಪೈಪಿನಿಂದಲೇ ನೀರು ಪೂರೈಕೆ
ಚಿಕ್ಕಮಗಳೂರು : ಹಾವು ಸತ್ತ ಪೈಪಿನಿಂದಲೇ ಕುಡಿಯುವ ನೀರು ಪೂರೈಸುತ್ತಿರುವ ಘಟನೆ ಮೂಡಿಗೆರೆ ತಾಲೂಕಿನ ದೋನುಗೂಡು ಗ್ರಾಮದಲ್ಲಿ ನಡೆದಿದೆ. ಈ ನೀರನ್ನ ಕುಡಿದು ಜನರು ನಾನಾ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಗ್ರಾಮ ಪಂಚಾಯಿತಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ದೋನುಗೂಡು ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಹಳ್ಳಕ್ಕೆ ಮೋಟರ್ ಇಡಲಾಗಿದೆ. ಹೀಗಾಗಿ ಹಾವುಗಳು ಮೋಟರ್ ನ ಕೆಲ ಭಾಗಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ. ಇದು ಗೊತ್ತಿದ್ದರೂ ಹಳ್ಳವನ್ನ ಕ್ಲೀಸ್ ಮಾಡದೇ ಅದೇ ಪೈಪಿನ ಮೂಲಕ ಜನರಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಾವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.