Chitradurga Collision between bus and lorry | ಬಸ್ – ಲಾರಿ ನಡುವೆ ಡಿಕ್ಕಿ | 15ಕ್ಕೂ ಹೆಚ್ಚು ಮಂದಿಗೆ ಗಾಯ
ಚಿತ್ರದುರ್ಗ : ಕೆಎಸ್ ಆರ್ ಟಿಸಿ ಬಸ್ – ಲಾರಿ ನಡುವೆ ಡಿಕ್ಕಿ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಬಳಿ ನಡೆದಿದೆ.
ಘಟನೆಯಲ್ಲಿ ಅಭಿಜಿತ್, ರಾಘವೇಂದ್ರ ರೆಡ್ಡಿ, ನೇತ್ರಬಾಯಿ, ಲಕ್ಷ್ಮಣ್ ಸೇರಿ 15 ಕ್ಕೂ ಹೆಚ್ಚುಗೆ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಿರಿಯೂರು, ಚಿತ್ರದುರ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
![Chitradurga Collision between bus and lorry More than 15 people were injured saaksha tv](http://saakshatv.com/wp-content/uploads/2022/08/accident-1.jpg)
KSRTC ಬಸ್ ಹಿರಿಯೂರಿನಿಂದ ಬೆಂಗಳೂರಿನ ಕಡೆ ತೆರಳುತ್ತಿದ್ದು, ಲಾರಿ ಚಾಲಕ ಏಕಾಏಕಿ ಯೂ ಟರ್ನ್ ಮಾಡಿದ್ದರಿಂದ ಅಪಘಾತ ಸಂಭವಿಸಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ಎನ್.ಹೆಚ್ 4 ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.