ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿರುವ ಕುರಿತು ವರದಿಯಾಗಿದೆ.
ಕೂಚ್ ಬಿಹಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಕೂಚ್ ಬೆಹಾರ್ನ ದಿನಾಟಾದಲ್ಲಿ ಕೇಂದ್ರ ಸಚಿವ ನಿಶಿತ್ ಪ್ರಮಾಣಿಕ್ ಮತ್ತು ರಾಜ್ಯ ಸಚಿವ ಉದಯನ್ ಗುಹಾ ಬೆಂಬಲಿಗರ ಮಧ್ಯೆಯೇ ಈ ಘರ್ಷಣೆ ನಡೆದಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಘರ್ಷಣೆ ವರದಿಯಾಗಿದೆ.
ಈ ಘರ್ಷಣೆಯಲ್ಲಿ ಎಸ್ಡಿಪಿಒ ತಲೆಗೆ ಗಾಯವಾಗಿದೆ. ಘಟನೆ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದಯನ್ ಗುಹಾ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ನಿಶಿತ್ ಪ್ರಮಾಣಿಕ್ ಕಾರವಾನ್ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಎರಡೂ ಕಡೆ ಜನರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
2019 ರಲ್ಲಿ ಟಿಎಂಸಿ ತೊರೆದು ಕೂಚ್ ಬೆಹಾರ್ ಸ್ಥಾನ ಗೆದ್ದ ನಂತರ ಬಿಜೆಪಿ ಸೇರಿದ ನಿಸಿತ್ ಪ್ರಮಾಣಿಕ್ ಪ್ರಚಾರ ನಡೆಸುತ್ತಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಗುಹಾ, ನಮ್ಮ ಕಾರ್ಯಕರ್ತರು ನನ್ನ ಹುಟ್ಟು ಹಬ್ಬ ಆಚರಿಸುತ್ತಿದ್ದರು. ಕಾರ್ಯಕ್ರಮದಿಂದ ನಾನು ಇಂದು ಹಿಂದಿರುಗುತ್ತಿದ್ದೆ. ನಿಶಿತ್ ಬೆಂಗಾವಲು ಪಡೆ ಬಂದಾಗ ನಾನು ರಸ್ತೆಯಲ್ಲಿ ನಿಂತಿದ್ದೆ. ಆಗ ಅವರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.