ಬೆಂಗಳೂರು : ನಗರದ ನೆಲಮಂಗಲದ ಬಳಿ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿದ್ದ ಕೋವಿಡ್ ಕೇರ್ ಸೆಂಟರ್ ಈಗ ಕ್ಲೋಸ್ ಆಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇದೀಗ ಖಾಲಿ ಖಾಲಿ ವಾತಾವರಣ ಕಂಡಿದೆ. ದೇಶದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ನಲ್ಲಿ ರೋಗಿಗಳು ಇಲ್ಲ, ವೈದ್ಯರು ಇಲ್ಲ ದೇಶದ ಅತಿದೊಡ್ಡ ಕೇರ್ ಸೆಂಟರ್ ಖಾಲಿಯಾಗಿದೆ.
ಕೋವಿಡ್ ಕೇರ್ ಸೆಂಟರ್ ನಲ್ಲಿರೋ ವಸ್ತುಗಳನ್ನ ರಾಜ್ಯದ ವಿವಿಧ ಇಲಾಖೆಗೆ ಶಿಫ್ಟ್ ಆಗಿದ್ದು, ಈಗಾಗಲೇ ರಾಜ್ಯ ಸರ್ಕಾರದಿಂದ ಖರೀದಿ ಮಾಡಿದ್ದ ವಸ್ತುಗಳ ಸ್ಥಳಾಂತರವಾಗಿದೆ. ಇತ್ತ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್, ತೋಟಗಾರಿಕೆ ವಿವಿ ಹಾಸ್ಟೆಲ್, ಜಿಕೆವಿಕೆ ಹಾಗೂ ಇತರೆ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.