ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 7ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಬಜೆಟ್ ಪ್ರತಿ ಓದುವ ಮೊದಲು ಅನ್ನದಾತನ ಕುರಿತು ಮಾತನಾಡಿದರು. ಅನ್ನದಾತ ಉಳಿದರೆ ಉಳಿದವರು ಉಳಿದಂತೆ.. ಕೃಷಿ ಇಲ್ಲದೇ ಯಾವುದೂ ಉಳಿಯಲ್ಲ, ಎಲ್ಲವುಗಳ ಮೂಲ ಕೃಷಿಯೇ ಎಂದು ಕೃಷಿ ಮತ್ತು ರೈತರನ್ನ ಹಾಡಿಹೊಗಳಿದರು. ಈ ಮೂಲಕ ಬಜೆಟ್ ನಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ಕೊಟ್ಟಿರುವ ಬಗ್ಗೆ ಬಿ.ಎಸ್ ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ಇತ್ತ ಸಿಎಂ ಬಜೆಟ್ ಓದಲು ಪ್ರಾರಂಭಿಸುತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕರು ಬಜೆಟ್ ಪ್ರತಿಯನ್ನು ಎಲ್ಲರಿಗೂ ಹಂಚುವಂತೆ ಒತ್ತಾಯಿಸಿದರು. ಇದರಿಂದ ಕೆಲಕಾಲ ಸದನದಲ್ಲಿ ಗದ್ದಲ ಉಂಟಾಯಿತು.