ಯಾವ ಸಿಡಿಗೂ ಹೆದರಲ್ಲ, ಏನೂ ಮಾಡಲಾಗದು : ಸಿಎಂ
ದಾವಣಗೆರೆ : ಯಾವ ಸಿಡಿಗೂ ಹೆಸರಲ್ಲ, ಏನೂ ಮಾಡಲಾಗದು. ಅದೇನೆ ಇದ್ದರೂ ಕೇಂದ್ರದ ನಾಯಕರಿಗೆ ದೂರು ನೀಡಲಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ರೆಬಲ್ ಶಾಸಕರಿಗೆ ಟಾಂಗ್ ನೀಡಿದ್ದಾರೆ.
ಸಿಎಂ ಬಿಎಸ್ ವೈ ಅವರನ್ನು `ಸಿಡಿ’ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಮೂವರು ಸಚಿವರಾಗುತ್ತಿದ್ದಾರೆ ಎಂದು ಕೆಲ ಬಿಜೆಪಿಗರು ಆರೋಪ ಮಾಡಿದ್ದು, ಈ ಬಗ್ಗೆ ದಾವಣಗೆರೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಯಾವ ಸಿಡಿಗೂ ಹೆದರಲ್ಲ, ಏನೂ ಮಾಡಲಾಗದು ಎಂದಿದ್ದಾರೆ.
ಅದೇನೇ ಇದ್ದರೂ ಕೇಂದ್ರದ ನಾಯಕರಿಗೆ ದೂರು ನೀಡಲಿ. ಯಶಸ್ವಿಯಾಗಿ ಮಂತ್ರಿ ಮಂಡಲ ವಿಸ್ತರಣೆ ಮಾಡಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸಚಿವ ಸ್ಥಾನ ಖಾಲಿ ಇಟ್ಟುಕೊಂಡಿದ್ದೇವೆ. 10-12 ಜನರನ್ನು ಮಂತ್ರಿ ಮಾಡಿಲ್ಲವೆಂದು ಕೆಲವರು ಆರೋಪ ಮಾಡುತ್ತಿದ್ದಾರೆ.
ನನ್ನ ಇತಿಮಿತಿಯಲ್ಲಿ ಏನು ಮಾಡಲು ಸಾಧ್ಯ ಅವನ್ನು ಮಾಡಿದ್ದೇನೆ. ತಮ್ಮನ್ನು ಮಂತ್ರಿ ಮಾಡಿಲ್ಲವೆಂದು ಕೆಲವರು ಆರೋಪಿಸುತ್ತಿದ್ದು, ಅದೇನೇ ಆರೋಪ ಇದ್ರೂ ಕೂಡ ಕೇಂದ್ರದ ನಾಯಕರಿಗೆ ದೂರು ನೀಡಲು ಯಾರು ಅಡ್ಡಿಪಡಿಸುವುದಿಲ್ಲ.
ಇಲ್ಲಿ ಹೇಳಿಕೆ ಕೊಡುವುದರ ಮೂಲಕ ಗೊಂದಲ ಉಂಟು ಮಾಡಿ ವಾತಾವರಣ ಕೆಡೆಸಿದರೆ ಶಿಸ್ತಿಗೆ ಧಕ್ಕೆ ತರುವಂತಾಗುತ್ತದೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel