ಮೈಸೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಂದಿಧ್ವಜ ಸ್ಥಂಬಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಲವಾರು ಸಚಿವರು, ಶಾಸಕರು ಇದ್ದರು. ಡಿಕೆಶಿ ತಲೆಯ ಮೇಲೆ ಮೈಸೂರು ಪೇಟ ಮತ್ತು ಹೆಗಲ ಮೇಲೆ ಶಾಲು ಹೊತ್ತಿದ್ದರು. ಕಿಕ್ಕಿರಿದು ತುಂಬಿದ ಜನರನ್ನು ದಾಟಿ ಹೋಗಲು ಅಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ ಮತ್ತು ಸಂಸದ ಪ್ರತಾಪ್ ಸಿಂಹಗೆ ಆಗಲಿಲ್ಲ. ಭೈರತಿ ಸುರೇಶ್, ಹೆಚ್ ಸಿ ಮಹಾದೇವಪ್ಪ, ತನ್ವೀರ್ ಸೇಟ್, ಶಿವರಾಜ್ ತಂಗಡಗಿ, ಪ್ರಕಾಶ್ ಹುಕ್ಕೇರಿ ಸೇರಿದಂತೆ ಹಲವರು ಇದ್ದರು.