ಬೆಂಗಳೂರಿನಲ್ಲಿ ರೌಡಿಸಂಗೆ ಕಮೀಷನರ್ ಕಡಿವಾಣ
ಬೆಂಗಳೂರು : ನಗರದಲ್ಲಿ ರೌಡಿಸಂಗೆ ಕಮೀಷನರ್ ಕಡಿವಾಣ ಹಾಕಲು ಮುಂದಾಗಿದ್ದು, ಕಳೆದ ಮೂರು ತಿಂಗಳಲ್ಲಿ ಒಂಭತ್ತು ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಅರೆಸ್ಟ್ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೂಂಡಾ ಕಾಯ್ದೆ ಜಾರಿ ಮಾಡಿದ್ದು, ಮುನಿಕೃಷ್ಣ @ ಮುನೀಚ್, ಸಾಗರ್ @ ಇಟ್ಟಮಡು ಸಾಗರ್ ,ರಾಜು @ ರಾಜುದೊರೈ, ವಾಸುದೇವ@ ವಾಸು, ಚೇತನ್@ ಮಾದೇಶ್,
ಕೋಟೇಶ್ವರನ್ @ ಕೋಟೆ, ಸ್ಯಾಮ್ಯುಲ್ @ ನಿಖಿಲ್, ಮಂಜುನಾಥ್ @ ಗನ್ ಮಂಜ ಹಾಗೂ ಹರಿರಾಜ ಶೆಟ್ಟಿ @ ಹರೀಶ್ ಎಂಬೋರನ್ನ ಗೂಂಡಾ ಕಾಯ್ದೆಯಡಿ ಅರೆಸ್ಟ್ ಮಾಡಿದ್ದಾರೆ.
ಇವರು ಆಕ್ರಮ ಜೂಜು, ಗಾಂಜಾ ಮಾರಾಟ ಪ್ರಕರಣದಲ್ಲಿ ವಿವಿಧ ಠಾಣೆಗಳಲ್ಲಿ ರೌಡಿಶೀಟರ್ ಗಳಾಗಿದ್ದಾರೆ. ಇವರಿಗೆ ಹಲವು ಬಾರಿ ವಾನಿರ್ಂಗ್ ನೀಡಿದ್ರು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು.
ಈ ಹಿನ್ನೆಲೆ ಸಿಸಿಬಿ ಡಿಸಿಪಿ ಹಾಗೂ ಆಯಾ ವಿಭಾಗದ ಡಿಸಿಪಿಗಳ ವರದಿ ಮೇರೆಗೆ ಗೂಂಡಾ ಕಾಯ್ದೆ ಜಾರಿ ಮಾಡಿ ಅರೆಸ್ಟ್ ಮಾಡಿದ್ದಾರೆ.